ರಾಜ್ಯ ಚುನಾವಣೆಗೆ ಬಿ ಎಸ್ ಪಿ ಭರ್ಜರಿ ಸಿದ್ದತೆ; 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಯಾರಿಗೆಲ್ಲಾ ಟಿಕೆಟ್
ಬೆಂಗಳೂರು,ಏಪ್ರಿಲ್1: ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಇತ್ತ 2023 ರ ವಿಧಾನಸಭಾ ಚುನಾವಣೆಯನ್ನ ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿರುವ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರವನ್ನ ನಡೆಸುತ್ತಿವೆ. ಚುನಾವಣಾ ಆಯೋಗ ರಾಜ್ಯ ಚುನಾವಣೆಗೆ ದಿನಾಂಕವನ್ನು ನಿಗದಿ ಪಡಿಸಿದ್ದು ಮೇ ಹತ್ತರಂದು ಚುನಾವಣೆ, ಮೇ ಹದಿಮೂರರಂದು ಮತಎಣಿಕೆ ನಡೆಯಲಿದೆ.
ಈ ಬಾರಿ ಚುನಾವಣೆ ಗೆ ಬಹುಜನ ಸಮಾಜವಾದಿ ಪಾರ್ಟಿ ಭರ್ಜರಿ ಸಿದ್ದತೆ ನಡೆಸಿದೆ. ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಅವರು ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಬಿಎಸ್ಪಿ ಪ್ರಮುಖ ಪಾತ್ರ ವಹಿಸಲಿದ್ದು, ಹಲವಾರು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಮುಂಬರುವ ಕರ್ನಾಟಕ ವಿಧಾನಸಬಾ ಚುನಾವಣೆಗೆ ಬಹುಜನ ಸಮಾಜವಾದಿ ಪಾರ್ಟಿ ಭರ್ಜರಿ ಸಿದ್ದತೆ ನಡೆಸಿದ್ದು, ಪ್ರಸ್ತುತ 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಯಾರಿಗೆಲ್ಲಾ ಟಿಕೆಟ್ ನೀಡಿದೆ ಎಂಬ ಮಾಹಿತಿ ಇಲ್ಲಿದೆ.
BSP releases fist list of 53 candidates for Karnataka Assembly elections.#Karnataka #KarnatakaElections2023 #AssemblyElections2023 #Elections2023 #LokPoll pic.twitter.com/Xtvwcy9y9Y
— Lok Poll (@LokPoll) April 1, 2023
ಬಿ ಎಸ್ ಪಿ ಪಕ್ಷದ ಮೊದಲ ಪಟ್ಟಿ ಇಲ್ಲಿದೆ:
| ಕ್ಷೇತ್ರಗಳು | ಅಭ್ಯರ್ಥಿಗಳು |
| ಮಳವಳ್ಳಿ | ಎಂ. ಕೃಷ್ಣಮೂರ್ತಿ |
| ಗುರುಮಿಠಕಲ್ | ಕೆ.ಬಿ.ವಾಸು |
| ಮಧುಗಿರಿ | ಎನ್.ಮಧು |
| ತಿಪಟೂರು | ಜಿ.ಅಶ್ವತ್ಥನಾರಾಯಣ |
| ಚಾಮರಾಜನಗರ | ಹ.ರಾ.ಮಹೇಶ್ |
| ಬೇಲೂರು | ಗಂಗಾಧರ್ ಬಹುಜನ್ |
| ಆನೇಕಲ್(ಎಸ್ಸಿ) | ಚಿನ್ನಪ್ಪ ಚಿಕ್ಕಹಾಗಡೆ |
| ಸಿಂದಗಿ | ಡಾ| ದಸ್ತಗಿರಿ ಮುಲ್ಲಾ |
| ನಾಗಠಾಣಾ(ಎಸ್ಸಿ) | ಕಲ್ಲಪ್ಪ ಆರ್.ತೊರವಿ |
| ಕಲಬುರಗಿ ದಕ್ಷಿಣ | ಎಲ್.ಆರ್.ಬೋಸ್ಲೆ |
| ರಾಮದುರ್ಗ | ಸುನಂದ ಎನ್.ಎಚ್. |
| ಯಲಹಂಕ | ಸಂದೀಪ್ ಮಾರಸಂದ್ರ ಮುನಿಯಪ್ಪ |
| ಅರಕಲಗೂಡು | ಹರೀಶ್ ಅತ್ನಿ |
| ಹುಮನಾಬಾದ್ | ಅಂಕುಶ್ ಗೋಖಲೆ |
| ಕೊಳ್ಳೇಗಾಲ(ಎಸ್ಸಿ) | ಕಮಲ್ ನಾಗರಾಜ್ |
| ಬೀದರ್ ದಕ್ಷಿಣ | ಕಪಿಲ್ ಗೋಡಬಲೆ |
| ಶಿರಹಟ್ಟಿ (ಎಸ್ಸಿ) | ದೇವೇಂದ್ರಪ್ಪ ಕಟ್ಟಿಮನಿ |
| ಕಲಬುರಗಿ ಗ್ರಾಮೀಣ(ಎಸ್ಸಿ) | ಮೈಲಾರಿ ಶಳ್ಳಗಿ |
| ನೆಲಮಂಗಲ (ಎಸ್ಸಿ) | ಪಿ.ಮಹದೇವ್ |
| ಮುದ್ದೇಬಿಹಾಳ | ಕಾಶೀನಾಥ್ ದೊಡ್ಡಮನಿ |
| ಲಿಂಗಸುಗೂರು | ಅನಿಲ್ ಕುಮಾರ್ |
| ಹಿರಿಯೂರು | ರಂಗಸ್ವಾಮಿ |
| ಮೂಡಿಗಡೆ(ಎಸ್ಸಿ) | ಎಲ್.ಬಿ.ರಮೇಶ್ |
| ಔರಾದ್(ಎಸ್ಸಿ) | ಗುಣವಂತ ಸೂರ್ಯಕಾಶಿ |
| ಟಿ.ನರಸೀಪುರ(ಎಸ್ಸಿ) | ಬಿ.ಆರ್.ಪುಟ್ಟಸ್ವಾಮಿ |
| ಹರಿಹರ | ಡಿ.ಹನುಮಂತಪ್ಪ |
| ಶಿವಮೊಗ್ಗ ಗ್ರಾಮೀಣ(ಎಸ್ಸಿ) | ಎ.ಡಿ.ಶಿವಪ್ಪ |
| ಮದ್ದೂರು | ಎಸ್.ಪಿ.ಶಿವಕುಮಾರ್ |
| ಹೊಳೇನರಸೀಪುರ | ತಾರೇಶ್ ಎಚ್.ಎಸ್. |
| ಯಶವಂತಪುರ | ಗೋವಿಂದರಾಜ್ ಎಲ್.ಜಿ. |
| ಚಿಂಚೋಳಿ(ಎಸ್ಸಿ) | ಗೌತಮ್ ಬೊಮ್ಮನಹಳ್ಳಿ |
| ಅಫjಲ್ಪುರ | ಹುಚ್ಚಪ್ಪ ವಟಾರ್ |
| ಬೆಂಗಳೂರು ದಕ್ಷಿಣ | ಕಿರಣ್ ವಿ. |
| ಹುಬ್ಬಳ್ಳಿ-ಧಾರವಾಡ(ಪೂ) (ಎಸ್ಸಿ) | ಪ್ರೇಮನಾಥ್ ಚಿಕ್ಕತುಂಬಾಳ್ |
| ಕೋಲಾರ | ಎಸ್.ಬಿ.ಸುರೇಶ್ (ವಕೀಲರು) |
| ದಾಸರಹಳ್ಳಿ | ಚಿಕ್ಕಣ್ಣ (ಪೂಜಾರಿ ಚಿಕ್ಕಣ್ಣ) |
| ಸಿಂಧನೂರು | ಹುಲುಗಪ್ಪ |
| ಹುಬ್ಬಳ್ಳಿ- ಧಾರವಾಡ ಕೇಂದ್ರ | ರೇವಣ್ಣ ಸಿದ್ದಪ್ಪ ಹೊಸಮನಿ |
| ಮಾಗಡಿ | ರಾಮಣ್ಣ |
| ಕನಕಪುರ | ಎನ್.ಎಂ.ಕೃಷ್ಣಪ್ಪ |
| ಚನ್ನಪಟ್ಟಣ | ಚಂದ್ರಶೇಖರಯ್ಯ |
| ಬಸವಕಲ್ಯಾಣ | ಜ್ಞಾನೇಶ್ವರ್ ಸಿಂಗಾರೆ |
| ಕಾಗವಾಡ | ಸುನೀಲ್ ಶಂಕರ್ ವಾಗೊರೆ |
| ರಾಮನಗರ | ಸ್ವಾಮಿ |
| ಬೆಳಗಾವಿ ಗ್ರಾಮೀಣ | ಯಮನಪ್ಪ ತಳವಾರ |
| ಸಿರುಗುಪ್ಪ(ಎಸ್ಟಿ) | ಎಚ್.ಎಂ.ವೀರೇಶ್ |
| ಕಂಪ್ಲಿ (ಎಸ್ಟಿ) | ಉತ್ತನೂರ್ ನಾಗರಾಜ್ |
| ಕುಷ್ಟಗಿ | ಶಿವಪುತ್ರಪ್ಪ ಗುಮಗೇರಿ |
| ಬಳ್ಳಾರಿ | ಸಿಟಿ ಕೆ.ಬಾಬು |
| ಶಿರಾ | ಡಾ.ನಟರಾಜ್ |
| ಜೇವರ್ಗಿ | ಭೀಮರಾಯ ನೆಲೋಗಿ |
| ಮಡಿಕೇರಿ | ಡಿವಿಲ್ ಕುಮಾರ್ |
| ಖಾನಾಪುರ | ಬಿ.ಕೆ.ಹೊನ್ನಯ್ಯ |












Click it and Unblock the Notifications