Arkalgud Elections:ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಯಾರತ್ತ ಮತದಾರರ ಒಲವು?
ಹಾಸನ, ಮಾರ್ಚ್ 25: ಹಾಸನ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು ಅರಕಲಗೂಡು. ಅರೆಕಲ್ಲುಗಳಿಂದ ಕೂಡಿರುವುದರಿಂದ ಈ ಊರಿಗೆ ಅರಕಲಗೂಡು ಎನ್ನುವ ಹೆಸರು ಬಂದಿದೆ. ಈ ಹಿಂದೆ ಅರ್ಕಾಪುರಿ ಎಂಬ ಹೆಸರು ಕಾಲ ಕಳೆದಂತೆ ಅರ್ಕಾಪುರಿ ಅರೆಕಲ್ಲು ಆಗಿ ನಂತರ ಅರಕಲಗೂಡು ಆಗಿ ಬದಲಾಗಿದೆ ಎನ್ನುವ ಪ್ರತೀತಿ ಇದೆ.
ಅರೆಮಲೆನಾಡು ಪ್ರದೇಶವಾದ ಅರಕಲಗೂಡು ಕನ್ನಡದ ಅಧ್ವರ್ಯು ಅ.ನ. ಕೃಷ್ಣರಾಯರ ಹುಟ್ಟೂರು.ಅರಕಲಗೂಡಿನಿಂದ 20 ಕಿಲೋ ಮೀಟರ್ ದೂರದಲ್ಲಿ ಇರುವ ರಾಮನಾಥಪುರ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. 11ನೇ ಶತಮಾನದ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನ ಸೇರಿದಂತೆ ಇತರ ಪ್ರೇಕ್ಷಣೀಯ ಸ್ಥಳಗಳು ಅರಕಲಗೂಡಿನಲ್ಲಿದೆ.

ಅರಕಲಗೂಡು ಕ್ಷೇತ್ರದಲ್ಲಿ ಕಾವೇರಿ ಹಾಗೂ ಹೇಮಾವತಿ ಕಾವೇರಿ ಹಾಗೂ ಹೇಮಾವತಿ. ಜೊತೆಗೆ ಹಾರಂಗಿ ಜಲಾಶಯದಿಂದ ಕೃಷಿ ಕ್ಷೇತ್ರದ ರೈತರ ಜೀವನಕ್ಕೆ ಆಸರೆಯಾಗಿದೆ. ಅರಕಲುಗೂಡು, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆಯ ಪ್ರದೇಶಗಳನ್ನು ಹೊಂದಿದ್ದು, ಬೆಳೆ ಅಡಿಕೆ, ತೆಂಗು, ತಂಬಾಕು ಹಾಗೂ ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿವೆ.
ಅರಕಲಗೂಡು ಹಾಸನ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು. ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ಹೈವೊಲ್ಟೇಜ್ ಕ್ಷೇತ್ರವಾಗುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿಗತ ರಾಜಕೀಯಕ್ಕೆ ಮನ್ನಣೆ ಸಿಗುತ್ತಿರುವ ಅರಕಲಗೂಡು ವಿಧಾನಸಭಾ ಚುನಾವಣೆಯ ರಾಜಕೀಯ ಪರಿಚಯ ಇಲ್ಲಿದೆ.

ಅರಕಲಗೂಡು ರಾಜಕೀಯ ಇತಿಹಾಸ
ಅರಕಲಗೂಡು ಕ್ಷೇತ್ರ ಮೊಟ್ಟ ಮೊದಲ ಶಾಸಕ ಪುಟ್ಟಸ್ವಾಮಿ ಗೌಡ, ಮೊಟ್ಟ ಮೊದಲ ಅಧಿಕಾರ ಹಿಡಿದ ಹಿಡಿದ ಪಕ್ಷ ಕಾಂಗ್ರೆಸ್. ಜಿ.ಎ. ತಿಮ್ಮಪ್ಪಗೌಡ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕರಾಗಿದ್ದರೆ, ಎಚ್.ಎನ್. ನಂಜೇಗೌಡ ಎರಡು ಬಾರಿ ಶಾಸಕರಾಗಿದ್ದರು. ಕೆ.ಬಿ. ಮಲ್ಲಪ್ಪ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದರು.
1989ರಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದ ಎ.ಟಿ. ರಾಮಸ್ವಾಮಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸುತ್ತಾರೆ. 1994ರ ಚುನಾವಣೆಯಲ್ಲೂ ಎರಡನೇ ಬಾರಿ ಶಾಸರಾಗಿ ಆಯ್ಕೆಯಾಗುತ್ತಾರೆ. ಆದರೆ 1999ರ ಚುನಾವಣೆಯಲ್ಲಿ ಎ.ಮಂಜು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಕ್ಷೇತ್ರದ ಅಧಿಕಾರವನ್ನು ಪಡೆಯುತ್ತಾರೆ.

ಸೋಲಿನ ಬಳಿಕ ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದು, 2004ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಎ.ಮಂಜು 2008 ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸತತ ಎರಡು ಬಾರಿ ಶಾಸಕರಾಗುತ್ತಾರೆ. ಈ ಹಾವು ಏಣಿ ಆಟ ಮುಂದುವರಿದು 2018ರ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಫರ್ಧಿಸಿ ಎ.ಟಿ.ರಾಮಸ್ವಾಮಿ ಶಾಸಕರಾಗುತ್ತಾರೆ.
ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ಪಕ್ಷಾಂತರ ಸರ್ವೇ ಸಾಮಾನ್ಯವಾಗಿದ್ದು ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ಚಿಹ್ನೆಯಲ್ಲಿ ಶಾಸಕರಾಗಿದ್ದ ಎ.ಮಂಜು ಸದ್ಯ ಜೆಡಿಎಸ್ ಸೇರಿದ್ದಾರೆ. ಇನ್ನು ಜೆಡಿಎಸ್ನಿಂದ ಹೊರಗುಳಿದ ಎ.ಟಿ. ರಾಮಸ್ವಾಮಿ ಇನ್ನೂ ಯಾವ ಪಕ್ಷದತ್ತ ಒಲವು ತೋರದೆ ಅತಂತ್ರರಾಗಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಕೃಷ್ಣೇಗೌಡರು ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿ ಪ್ರಚಾರ ಆರಂಭಿಸಿದ್ದಾರೆ.
ಅರಕಲಗೂಡು ಕ್ಷೇತ್ರದ ಮತದಾರರ ವಿವರ
ಅರಕಲಗೂಡು ಕ್ಷೇತ್ರದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಚುನಾವಣೆಯ ಗೆಲುವು ನಿರ್ಧರಿಸಲು ಸಾಧ್ಯವಿಲ್ಲ. ವ್ಯಕ್ತಿಗತ ಚುನಾವಣೆಯೇ ನಡೆಯುವ ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ 65 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳು, 45 ಸಾವಿರದಷ್ಟು ದಲಿತ ಸಮಾಜದ ಮತಗಳು, 35 ಸಾವಿರ ಕುರುಬರ ಮತಗಳು ಹಾಗೂ 20 ಸಾವಿರ ಲಿಂಗಾಯುತ ಮತಗಳು ಗೆಲುವಿನ ನಿರ್ಣಾಯಕ ಮತಗಳಾಗಿವೆ.
Arkalgud Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎಟಿ ರಾಮಸ್ವಾಮಿ ಜೆಡಿಎಸ್ | 85,064 | ಎ ಮಂಜು ಕಾಂಗ್ರೆಸ್ | 74,411 |
| 2013 | ಎ ಮಂಜು ಕಾಂಗ್ರೆಸ್ | 61,369 | ಎಟಿ ರಾಮಸ್ವಾಮಿ ಜೆಡಿಎಸ್ | 52,575 |
| 2008 | ಎ ಮಂಜು ಕಾಂಗ್ರೆಸ್ | 68,257 | ಎಟಿ ರಾಮಸ್ವಾಮಿ ಜೆಡಿಎಸ್ | 59,217 |
2018 ಅರಕಲಗೂಡು ವಿಧಾನಸಭಾ ಚುನಾವಣಾ ಫಲಿತಾಂಶ
2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿದ್ದ ಎಟಿ ರಾಮಸ್ವಾಮಿ 85,064 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದ ಎ.ಮಂಜು 74,411 ಮತಗಳನ್ನು ಪಡೆದು 10,653 ಅಂತರದಲ್ಲಿ ಸೋಲು ಕಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಎಚ್.ಯೋಗ ರಮೇಶ್ 22,679 ಮತಗಳನ್ನು ಪಡೆದಿದ್ದರು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications