Muddebihal Elections: ಕಾಂಗ್ರೆಸ್ ಪ್ರಾಬಲ್ಯ ಕೊನೆ, ಈ ಸಲವು ಗೆಲ್ಲಲು ಬಿಜೆಪಿ ಪ್ಲಾನ್, ಕಾಂಗ್ರೆಸ್ ತಂತ್ರವೇನು?
ಬೆಂಗಳೂರು, ಮಾರ್ಚ್ 24: ಮುದ್ದೇಬಿಹಾಳ ಇದು ಕರ್ನಾಟಕ ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ ಹಾಗೂ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. 2018ರ ಒಮ್ಮೆ ಹೊರತಾಗಿ ಇತಿಹಾಸದಲ್ಲೇ ಬಿಜೆಪಿಗೆ ಈ ಕ್ಷೇತ್ರದ ಆಡಳಿತ ಚುಕ್ಕಾಣೆ ಹಿಡಿಯುವ ಅವಕಾಶ ಲಭಿಸಿರಲಿಲ್ಲ.
ತಾಲೂಕು ಕೇಂದ್ರವಾಗಿರುವ ಮುದ್ದೇಬಿಹಾಳವು, ಶಿಕ್ಷಣ, ವ್ಯಾಪಾರ ಕೇಂದ್ರವು ಆಗಿದೆ. ವಿಜಯಪುರ ಜಿಲ್ಲೆಯ ಪಡುಮೂಲೆಯಲ್ಲಿರುವ ಈ ಮುದ್ದೇಬಿಹಾಳ ಹಾಗೂ ತಾಳಿಕೋಟೆ ಎರಡು ವ್ಯಾಪಾರ ಕೇಂದ್ರಗಳಾಗಿವೆ. 1670ರಲ್ಲಿ ಹುಚ್ಚಪ್ಪ ಮನೆತನದವರು ಇಲ್ಲಿ ಕೋಟೆ ಕಟ್ಟಿದ್ದು, ಅಲ್ಲಿಂದ ಈ ಕೇಂದ್ರ ಆರಂಭವಾಯಿತು ಎಂಬ ಪ್ರತೀತಿ ಇದೆ.

ಉತ್ತರ ಕರ್ನಾಟಕ ಭಾಗದ ಗಡಿಯಲ್ಲಿ ಬರುವ ಈ ಮುದ್ದೇಬಿಹಾಳವು ಉತ್ತರಕ್ಕೆ ಸಿಂದಗಿ ಜಿಲ್ಲೆ, ಪಶ್ಚಿಮಕ್ಕೆ ಬಸವನ ಬಾಗೇವಾಡಿ ಇದೆ. 32 ಗ್ರಾಮ ಪಂಚಾಯಿತಿ ಒಳಗೊಂಡ ಬೃಹತ್ ಕೇಂದ್ರವು ಆಗಿದೆ. ಧಾರ್ಮಿಕವಾಗಿ, ಜಾನಪದ, ಕಲೆ-ಸಾಂಸ್ಕೃತಿಕವಾಗಿ ಹೆಸರು ಮಾಡಿರುವ ಈ ಕ್ಷೇತ್ರದ ಜನರು ಹೆಚ್ಚಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇಲ್ಲಿ ನಿಂಬೆ, ದಾಳಿಂಬೆ, ದ್ರಾಕ್ಷಿ, ಸೂರ್ಯಕಾಂತಿ, ಉಳ್ಳಾಗಡ್ಡಿ ಸೆರಿದಂತೆ ಇನ್ನಿತರ ಆಹಾರ ಉತ್ಪನ್ನ ಬೆಳೆಯುತ್ತಾರೆ.
2018ರಲ್ಲಿ ಮಾತ್ರ ಕಾಂಗ್ರೆಸ್ ವಿಫಲ
ಈ ಕ್ಷೇತ್ರದ ರಾಜಕೀಯ ಇತಿಹಾಸ ನೋಡುವುದಾದರೆ, ಇಲ್ಲಿ ಕಾಂಗ್ರೆಸ್ ಪಕ್ಷ ಪ್ರಾಬಲ್ಯವಿದೆ. ಸ್ವಾತಂತ್ರ್ಯಾ ನಂತರದಿಂದಲೂ ಈವರೆಗೆ ಬಹುತೇಕ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಚುನಾಯಿತರಾಗಿದ್ದಾರೆ. ಕಾಂಗ್ರೆಸ್ನ ಭದ್ರಕೋಟೆ ಅಂತಲೂ ಮುದ್ದೇಬಿಹಾಳ ಕ್ಷೇತ್ರವನ್ನು ಕರೆಯುತ್ತಾರೆ. ಆದರೆ ಕಾಂಗ್ರೆಸ್ ಇಲ್ಲಿ 2018ರಲ್ಲಿ ಗೆಲ್ಲುವಲ್ಲಿ ವಿಫಲವಾಗಿದ್ದು, ಈ ಸಲ ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿದೆ.
ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಕಳೆದ ಬಾರಿಯಂತೆ ಈ ಸಲವು ಗೆಲ್ಲಲ್ಲು ಸರ್ವಸನ್ನದ್ಧರಾಗಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ತಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಸಹಿತ ಜನರ ಮುಂದೆ ನಿಂತು ಮತಯಾಚನೆಗೆ ನಿರ್ಧರಿಸಿದ್ದಾರೆ. ಪನಃ ಕಮಲ ಪಕ್ಷದಿಂದ ಚುನಾವಣೆ ಎದುರಿಸಲು ಅಗತ್ಯ ಸಿದ್ಧತೆಯನ್ನು ಅವರು ಮಾಡಿಕೊಂಡಿದ್ದಾರೆ. ಶಾಸಕರಿಗೆ ಹೋಲಿಕೆ ಮಾಡಿದರೆ ವಿಪಕ್ಷಗಳ ಅಭ್ಯರ್ಥಿಗಳು/ಸ್ಪರ್ಧಿಗಳು ನಡಹಳ್ಳಿ ಅವರಿಂಗಿಂತ ಸಾಕಷ್ಟು ಪಟ್ಟು ಹಿಂದಿದ್ದಾರೆ. ಹೀಗಾಗಿ ಈ ಬಾರಿಯು ಇಲ್ಲಿ ಕಮಲ ಅರಳುವ ನಿರೀಕ್ಷೆ ಎಂಬ ಮಾತುಗಳು ಕೇಳಿ ಬಂದಿವೆ.

ಕಾಂಗ್ರೆಸ್-ಬಿಜೆಪಿಗೆ ಬೀಗ್ ಫೈಟ್
ಕಾಂಗ್ರೆಸ್ನಿಂದ ಮಾಜಿ ಸಚಿವ ಸಿ.ಎಸ್.ನಾಡಗೌಡ ಹಾಗೂ ಗುತ್ತಿಗೆದಾರ, ಸಮಾಜಸೇವಕ ಎಂ.ಎನ್.ಮದರಿ ಟಿಕೆಟ್ ಬಯಸಿದ್ದಾರೆ. ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ 'ಪ್ರಜಾಧ್ವನಿ' ಸಮಾವೇಶದಲ್ಲಿ ಕಾಂಗ್ರೆಸ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 'ನಾಡಗೌಡರಿಗೆ ಆಶೀರ್ವದಿಸಿ' ಎಂದು ಹೇಳಿದ್ದರು. ಇದು ಪಕ್ಷದೊಳಗಿನ ಅಸಮಧಾನಕ್ಕೆ ಕಾರಣವಾಗಿತ್ತು. ಸಮಾವೇಶದಲ್ಲಿ ಅಪ್ಪಾಜಿ ನಾಡಗೌಡ ಅವರು ಇದು ನನ್ನ ಕೊನೆಯ ಚುನಾವಣೆ ಎನ್ನುವ ಮೂಲಕ ಅನುಕಂಪದ ಒಲೈಕೆಗೆ ಮುಂದಾಗಿದ್ದರು.
ಇನ್ನೂ ಇಲ್ಲಿ ಜೆಡಿಎಸ್ ಮುಖಪರಿಚಯವೇ ಇಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಡಾ.ಸೋಲಾಪುರಕರ್ ಎಂಬುವವರನ್ನು ಚುನಾವಣೆ ಅಖಾಡಕ್ಕೆ ಇಳಿಸಿದೆ. ಬಿಜೆಪಿಯ ನಾಯಕ ಮತ್ತು ಹಾಲಿ ಶಾಸಕ ಪಾಟೀಲ ನಡಹಳ್ಳಿ ಹಾಗೂ ಕಾಂಗ್ರೆಸ್ನ ಮಾಜಿ ಶಾಸಕ ಸಿ.ಎಸ್.ನಾಡಗೌಡ ಅವರ ನಡುವೆ ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿ ಉಂಟಾಗುವ ಲಕ್ಷಣಗಳು ಇವೆ. ಪುನಃ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗುತ್ತಿದೆ.
ಅಭಿವೃದ್ಧಿಯಿಂದಲೇ ಬಿಜೆಪಿಗೆ ಜನಮನ್ನಣೆ
ಕಾಂಗ್ರೆಸ್ ಭದ್ರಕೋಟೆಯಲ್ಲಿ ಕಮಲ ಅರಳಿದ್ದಕ್ಕೆ ಕಾಂಗ್ರೆಸ್ ಕಣ್ಣು ಕೆಂಪಾಗಿದೆ. ಈ ಬಾರಿ ಹೇಗಾದರೂ ಮಾಡಿ ತಮ್ಮ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಸನ್ನದ್ಧವಾಗಿದೆ. ಆದರೆ ಹಾಲಿ ಶಾಸಕ ನಡಹಳ್ಳಿಯ ರಾಜ್ಯ ಸರ್ಕಾರದಿಂದ ಅತ್ಯಧಿಕ ಅನುದಾನ ತಂದು ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಹೀಗಾಗಿ ಜನರ ಗಮನ ಅವರ ಮೇಲೆ ನೆಟ್ಟಿದೆ ಎನ್ನಲಾಗಿದೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ (2018)
ಒಟ್ಟು ಮತದಾರರು - 2,00,882
ಪುರುಷರು - 1,03,038
ಮಹಿಳೆಯರು- 97,844
ಮುದ್ದೇಬಿಹಾಳ ಫಲಿತಾಂಶ ಪಟ್ಟಿ
ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎಎಸ್ ಪಾಟೀಲ್ ನಡಹಳ್ಳಿ 63,512 ಅಪ್ಪಾಜಿಗೌಡ 54,8733
2013 ಚನ್ನಬಸವರಾಜ ನಾಡಗೌಡ 34,747 ವಿಮಲಾಬಾಯಿ ಜೆ.ದೇಶಮುಖ 22,545
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications