Maddur Assembly Constituency: ಜೆಡಿಎಸ್ ಕೋಟೆಗೆ ಲಗ್ಗೆ ಹಾಕೋರ್ಯಾರು?
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ.
ಮಂಡ್ಯ, ಮಾರ್ಚ್ 13: ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವಾದ ಮದ್ದೂರು ವಿಧಾನಸಭಾ ಕ್ಷೇತ್ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನದ ಆದ ಮಹತ್ವವನ್ನು ಹೊಂದಿದೆ. ಇಲ್ಲಿ ಹಾಲಿ ಶಾಸಕರಾಗಿ ಜೆಡಿಎಸ್ನ ಡಿಸಿ ತಮ್ಮಣ್ಣ ತಮ್ಮದೇ ಭದ್ರಕೋಟೆಯನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಚುನಾವಣೆಯ ವಿಶ್ಲೇಷಣೆ ಇಲ್ಲಿದೆ.
ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಗಿರುವ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ವ್ಯಕ್ತಿ ಕೇಂದ್ರಿತ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಮೊದಲಿನಿಂದಲೂ ಇದು ಜೆಡಿಎಸ್ನ ಭದ್ರಕೋಟೆಯಂತೆ ಇದೆ. ಆದರೆ ಇಲ್ಲಿ ದಲಿತರು ಹಾಗೂ ಮುಸ್ಲಿಮರ ಮತಗಳು ನಿರ್ಣಯಕ ಎನಿಸಿವೆ. ಇಲ್ಲಿಂದ ಎಸ್ಎಂ ಕೃಷ್ಣ ಒಂದು ಬಾರಿ, ನಟ ಅಂಬರೀಷ್ ಮೂರು ಭಾರಿ, ಮಾದೇಗೌಡ ಅವರು 2 ಬಾರಿ ಗೆದ್ದಿದ್ದರು. ಈಗ ಹಾಲಿ ಶಾಸಕರಾಗಿರುವ ಡಿಸಿ ತಮ್ಮಣ್ಣ ಅವರು 2 ಬಾರಿ ಶಾಸಕರಾಗಿದ್ದು ಈಗ ಮೂರನೇ ಬಾರಿಗೆ ಹ್ಯಾಟ್ರಿಕ್ ಹೊಡೆಯಲು ಸಿದ್ದರಾಗಿದ್ದಾರೆ. ಇಲ್ಲಿ ಈಗ ಜೆಡಿಎಸ್ನಿಂದ ಪಂಚರತ್ನ ರಥಯಾತ್ರೆ ಕೂಡ ನಡೆದಿದೆ.
ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿ ವಿದೇಶಾಂಗ ಸಚಿವರಾಗಿದ್ದವರು. ಅಲ್ಲದೆ ಮಾದೇಗೌಡ, ಮಂಚೇಗೌಡ ಮನೆತನದ ರಾಜಕಾರಣದ ನಡುವೆ ಶ್ರೀಸಾಮಾನ್ಯನಾಗಿದ್ದ ಸಿದ್ದರಾಜು ಕೂಡ ಇಲ್ಲಿಂದ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ 2004ರಿಂದ ಇಲ್ಲಿಯವರೆಗೂ ಇಲ್ಲಿ ಜೆಡಿಎಸ್ನ ಪ್ರಭಾವ ಹೆಚ್ಚಾಗಿದೆ. 2004 ರಚ ಚುನಾವಣೆಯಲ್ಲಿ ಜೆಡಿಎಸ್ನಿಂದ ಸಿದ್ದರಾಜು ಹಾಗೂ ವಿವೇಕಾನಂದ ಅವರಿಗೆ ಎರಡು ಬಿ ಫಾರಂ ಅನ್ನು ಮಾಜಿ ಪ್ರಧಾನಿಗಳಾಸ ಎಚ್ಡಿ ದೇವೇಗೌಡ ಅವರು ನೀಡಿದ್ದರು. ಆಗ ಇಲ್ಲಿ ಡಿಸಿ ತಮ್ಮಣ್ಣ ಗೆಲುವು ಸಾಧಿಸಿದ್ದರು. 2008ರಲ್ಲಿ ಮಧ್ಯಂತರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ಸಿದ್ದರಾಜು ಅವರು ಕಾಂಗ್ರೆಸ್ನ ಡಿ.ಸಿ.ತಮ್ಮಣ್ಣ, ಬಿಜೆಪಿಯ ಮಧು ಮಾದೇಗೌಡ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ಆದರೆ 6 ತಿಂಗಳಲ್ಲಿ ಅವರು ಆಕಾಲಿಕ ನಿಧನ ಹೊಂದಿದರು. ಬಳಿಕ ಅವರ ಪತ್ನಿ ಕಲ್ಪನಾ ಅವರು ಉಪಚುನಾವಣೆಯಲ್ಲಿ ಗೆದಿದ್ದರು.

ಕಲ್ಪನಾ ಪಕ್ಷೇತರರಾಗಿ ಅಖಾಡಕ್ಕೆ
2014ರ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ತಮ್ಮ ಬೀಗರಾದ ತಮ್ಮಣ್ಣ ಅವರಿಗೆ ಜೆಡಿಎಸ್ನಿಂದ ಟಿಕೆಟ್ ನೀಡಿದರು. ಇದರಿಂದ ಜೆಡಿಎಸ್ ಟಿಕೆಟ್ ಕಳೆದುಕೊಂಡ ಕಲ್ಪನಾ ಅವರಿಗೆ ಕಾಂಗ್ರೆಸ್ ಬಿ ಫಾರಂ ಕೈತಪ್ಪಿತು. ಬೆಂಬಲಿಗರ ಒತ್ತಾಸೆಯಂತೆ ಕಲ್ಪನಾ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದರು. ಅಚ್ಚರಿಯ ಬೆಳವಣಿಗೆಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡರ ಪುತ್ರ ಜಿ.ಎಂ.ಮಧುಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿತ್ತು.

ತಮ್ಮಣ್ಣ ಮತ್ತೆ ಜೆಡಿಎಸ್ ಅಭ್ಯರ್ಥಿ
ಅಂತಿಮವಾಗಿ ತಮ್ಮಣ್ಣ ಗೆದ್ದರು. ಈಗ 2023ರ ಚುನಾವಣೆಯಲ್ಲಿ ತಮ್ಮಣ್ಣ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿ ಘೊಷಿತರಾಗಿದ್ದಾರೆ. ಕಾಂಗ್ರೆಸ್ನಿಂದ ಮಧು ಮಾದೇಗೌಡ, ಕಲ್ಪನಾ ಸಿದ್ದರಾಜು ಹಾಗೂ ಬಿಜೆಪಿಯಿಂದ ಲಕ್ಷ್ಮಣ್ಕುಮಾರ್, ಚಿತ್ರನಟಿ ಪ್ರೇಮಾ ಯುವರಾಜ್, ವಕೀಲ ಕೆ.ಎಂ.ರಮೇಶ್ ನಡುವೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಎಸ್.ಎಂ.ಕೃಷ್ಣ ಅವರ ಪುತ್ರಿ ಶಾಂಭವಿ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿದೆ.

2013ರಿಂದ ಜೆಡಿಎಸ್ನಿಂದ ಡಿ.ಸಿ.ತಮ್ಮಣ್ಣ ಗೆಲುವು
ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೂ ಕಾಲನುಕ್ರಮದಲ್ಲಿ ನೋಡುವುದಾದರೆ 1952ರಲ್ಲಿ ಕಾಂಗ್ರೆಸ್ನಿಂದ ಎಚ್ಕೆ ವೀರಣ್ಣಗೌಡ, 1957ರಲ್ಲಿ ಮತ್ತೆ ಎಚ್.ಕೆ.ವೀರಣ್ಣಗೌಡ, 1962ರಲ್ಲಿ ಪಿಎಸ್ಪಿಯಿಂದ ಎಸ್.ಎಂ.ಕೃಷ್ಣ, 1967ರಲ್ಲಿ ಕಾಂಗ್ರೆಸ್ನಿಂದ ಎಂ.ಮಂಚೇಗೌಡ, 1972ರಲ್ಲಿ ಕಾಂಗ್ರೆಸ್ನಿಂದ ಎ.ಡಿ.ಬಿಳೀಗೌಡ, 1978ರಲ್ಲಿ ಜನತಾ ಪಕ್ಷದಿಂದ ಎಂ.ಮಂಚೇಗೌಡ, 1983ರಲ್ಲಿ ಕಾಂಗ್ರೆಸ್ನಿಂದ ಎಂ.ಮಂಚೇಗೌಡ, 1984ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಜಯವಾಣಿ ಮಂಚೇಗೌಡ, 1985ರಲ್ಲಿ ಜನತಾ ಪಕ್ಷದಿಂದ ಬಿ.ಅಪ್ಪಾಜಿಗೌಡ, 1989ರಲ್ಲಿ ಕಾಂಗ್ರೆಸ್ನಿಂದ ಎಸ್.ಎಂ.ಕೃಷ್ಣ, 1994ರಲ್ಲಿ ಜನತಾದಳದಿಂದ ಡಾ.ಮಹೇಶ್ಚಂದ್, 1999ರಲ್ಲಿ ಎಸ್.ಎಂ.ಕೃಷ್ಣ, 2004ರಲ್ಲಿ ಕಾಂಗ್ರೆಸ್ನಿಂದ ಡಿ.ಸಿ.ತಮ್ಮಣ್ಣ, 2008ರಲ್ಲಿ ಜೆಡಿಎಸ್ನಿಂದ ಎಂ.ಎಸ್.ಸಿದ್ದರಾಜು, 2008ರ ಉಪ ಚುನಾವಣೆಯಲ್ಲಿ ಕಲ್ಪನಾ ಸಿದ್ದರಾಜು, 2013ರಿಂದ ಜೆಡಿಎಸ್ನಿಂದ ಡಿ.ಸಿ.ತಮ್ಮಣ್ಣ ಗೆಲ್ಲುತ್ತಾ ಬಂದಿದ್ದಾರೆ.

1 ಲಕ್ಷ ಒಕ್ಕಲಿಗರು, 40 ಸಾವಿರ ದಲಿತ ಮತದಾರರು
ಕ್ಷೇತ್ರದಲ್ಲಿ 1 ಲಕ್ಷ ಒಕ್ಕಲಿಗರು, 40 ಸಾವಿರ ದಲಿತರು, 6 ಸಾವಿರ ಲಿಂಗಾಯಿತರು, 11 ಸಾವಿರ ಮುಸ್ಲಿಮರು, 6 ಸಾವಿರ ಕುರುಬರು, 4 ಸಾವಿರ ಬ್ರಾಹ್ಮಣರು, ವಿಶ್ವಕರ್ಮ 4 ಸಾವಿರ, ಇತರೆ 31 ಸಾವಿರ, ಒಟ್ಟು 2,02,418 ಮತದಾರರು ಇದ್ದಾರೆ.
-
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ












Click it and Unblock the Notifications