ಮುಖ್ಯಪುಟ
 » 
ಶಿವರಾಜ ಸಿಂಗ್ ಚೌಹಾನ್

ಶಿವರಾಜ ಸಿಂಗ್ ಚೌಹಾನ್

ಶಿವರಾಜ ಸಿಂಗ್ ಚೌಹಾನ್

ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.

ಶಿವರಾಜ ಸಿಂಗ್ ಚೌಹಾನ್ ಜೀವನ ಚರಿತ್ರೆ

ಶಿವರಾಜ್ ಸಿಂಗ್ ಚೌಹಾನ್ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್.ಎಸ್.ಎಸ್.) ಮೂಲಕ ಸಾಮಾಜಿಕ ಜೀವನಕ್ಕೆ ಕಾಲಿಟ್ಟ ಶಿವರಾಜ್ ನಂತರದಲ್ಲಿ ಬಿಜೆಪಿ ಸೇರ್ಪಡೆ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. ತಮ್ಮ 13ನೇ ವಯಸ್ಸಿನಲ್ಲಿದ್ದಾಗಲೇ 1972ರಲ್ಲಿ ಆರ್.ಎಸ್.ಎಸ್.ಗೆ ಸೇರ್ಪಡೆಗೊಂಡಿದ್ದರು. ವಿಧಿಶಾ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯ ವಿವಿಧ ಹುದ್ದೆಗಳನ್ನು ಇವರು ನಿರ್ವಹಿಸಿದ್ದರು. ತಮ್ಮ ರಾಜಕೀಯ ಜೀವನ ಆರಂಭಿಸುವ ಮುನ್ನ ಅಖಿಲ ಭಾರತೀಯ ಕ್ಷೇತ್ರೀಯ ವಾಹಿನಿಯಲ್ಲೂ ಕೆಲಸ ಮಾಡಿದ್ದಾರೆ.
ಮಹಿಳಾ ಸಾಕ್ಷರತೆ, ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿ ಯೋಜನೆಗಳಿಂದ ಅವರು ದೇಶದಲ್ಲಿ ಹೆಚ್ಚಿನ ಜನಪ್ರೀಯತೆ ಗಳಿಸಿದವರು. ಗಾಂವ ಕಿ ಬೇಟಿ, ಜನನಿ ಸುರಕ್ಷಾ, ಜನನಿ ಪ್ರಸವ್ ಯೋಜನಾ, ಸ್ವಾಗತಂ ಲಕ್ಷ್ಮೀ, ಉಷಾ ಕಿರಣ, ತೇಜಸ್ವಿನಿ ಹೀಗೆ ಮಹಿಳಾ ಸುರಕ್ಷತೆಗೆ ಆಧ್ಯತೆ ನೀಡಿ ಹಲವು ಯೋಜನೆ ಆರಂಭಿಸಿ ಅನುಷ್ಠಾನಗೊಳಿಸಿದರು. ಇವು ಸಿಎಂ ಆಗಿದ್ದ ಶಿವರಾಜ್ ಸಿಂಗ್ ಅವರ ಜನಪ್ರೀಯತೆಯನ್ನು ಮತ್ತಷ್ಟು ಹೆಚ್ಚಿಸಿದವು.
ಬಾಲ್ಯದಿಂದಲೂ ಶಿವರಾಜ್ ಸಿಂಗ್ ಕ್ರೀಡಾಪಟುವಾಗಿ ಮತ್ತು ನದಿಯಲ್ಲಿ ಈಜುವಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಮುಂದೆ ಕೂಡ ಅವರು ನದಿ ಉಳಿಸಿ ಆಂದೋಲನ, ನದಿಯೊಂದಿಗೆ ಭಾವನಾತ್ಮಕ ಸಂಬಂಧ, ಪರಿಸರ ವ್ಯವಸ್ಥೆ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಿದರು.

ಮತ್ತಷ್ಟು ಓದು
By Zainab Ashraf Updated: Monday, February 8, 2021, 12:49:01 PM [IST]

ಶಿವರಾಜ ಸಿಂಗ್ ಚೌಹಾನ್ ವಯಕ್ತಿಕ ಜೀವನ

ಪೂರ್ಣ ಹೆಸರು ಶಿವರಾಜ ಸಿಂಗ್ ಚೌಹಾನ್
ಜನ್ಮ ದಿನಾಂಕ 05 Mar 1959 (ವಯಸ್ಸು 65)
ಹುಟ್ಟಿದ ಸ್ಥಳ ಸೆಹೋರ್, ಮಧ್ಯಪ್ರದೇಶ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ, ರಾಜಕಾರಣಿ
ತಂದೆಯ ಹೆಸರು ಪ್ರೇಮ್ ಸಿಂಗ್ ಚೌಹಾನ್
ತಾಯಿಯ ಹೆಸರು ಸುಂದರ್ ಬಾಯಿ ಚೌಹಾನ್
ಧರ್ಮ ಹಿಂದು
ವೆಬ್‌ಸೈಟ್ http://www.shivrajsinghchouhan.org/
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಶಿವರಾಜ ಸಿಂಗ್ ಚೌಹಾನ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹7.94 CRORE
ಆಸ್ತಿ:₹8.63 CRORE
ಸಾಲಸೋಲ: ₹68.72 LAKHS

ಶಿವರಾಜ ಸಿಂಗ್ ಚೌಹಾನ್ ಕುರಿತು ಆಸಕ್ತಿದಾಯಕ ಸಂಗತಿಗಳು

1975ರಲ್ಲಿ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಜೈಲಿಗೆ ತಳ್ಳಲ್ಪಟ್ಟ ಆರ್ ಎಸ್ ಎಸ್ ನ ಅತಿ ಚಿಕ್ಕ ವಯಸ್ಸಿನ ಸ್ವಯಂ ಸೇವಕ ಎಂಬ ಅಭಿದಾನಕ್ಕೆ ಒಳಗಾಗಿದ್ದರು. ೧೯೮೮ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಹಲವು ಸವಾಲುಗಳನ್ನು ಒಡ್ಡುವ ಮೂಲಕ ಆಡಳಿತ ವಿರೋಧಿ ಅಲೆ ಸೃಷ್ಟಿಸಿದರು. ಅದು ಭೂಪಾಲದಲ್ಲಿ ಆಡಳಿತ ನಡೆಸುತ್ತಿದ್ದ ಸರ್ಕಾರದ ವಿರುದ್ಧದ ಏಳನೇ ರ್ಯಾಲಿ ಆಗಿತ್ತು. ಈ ರ್ಯಾಲಿಗೆ ಲಕ್ಷಾಂತರ ಜನರು ಬೆಂಬಲಿಸಿ ಭೂಪಾಲಕ್ಕೆ ಆಗಮಿಸಿದ್ದು, ಅದು ಅಂದಿನ ಜಿಲ್ಲಾಡಳಿತವನ್ನೇ ನಡುಗಿಸಿತ್ತು. ಕಬಡ್ಡಿ, ಕ್ರಿಕೆಟ್, ವಾಲಿಬಾಲ ಶಿವರಾಜ್ ಸಿಂಗ್ ಅವರ ನೆಚ್ಚಿನ ಕ್ರೀಡೆಗಳು. ಅಲ್ಲದೇ ಅವರು ಗ್ರಾಮೀಣ ಭಾಗದ ಹಲವಾರು ಕ್ರೀಡಾ ಸಂಘ-ಸಂಸ್ಥೆಗಳೊಟ್ಟಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಶಿವರಾಜ ಸಿಂಗ್ ಚೌಹಾನ್ ಸಾಧನೆಗಳು

13 ಡಿಸೆಂಬರ್ 2016ರಲ್ಲಿ ಇವರಿಗೆ ಸೂರ್ಯೋದಯ ಮಾನವತಾ ಸೇವಾ ಸನ್ಮಾನ ನೀಡಿ ಗೌರವಿಸಲಾಗಿದೆ. 2003ಕ್ಕಿಂತ ಮೊದಲ ಹಿಂದುಳಿದ ರಾಜ್ಯಗಳ ಪಟ್ಟಿಯಲ್ಲಿದ್ದ ಮಧ್ಯಪ್ರದೇಶವನ್ನು ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದ ಬಿಜೆಪಿ ಸರ್ಕಾರ ಅತ್ಯುತ್ತಮ ಅಭಿವೃದ್ಧಿ ಯೋಜನೆ ಮತ್ತು ಅನುಷ್ಠಾನಗಳ ಮೂಲಕ ಅಭಿವೃದ್ಧಿ ಪಥಕ್ಕೆ ಕೊಂಡೊಯ್ದರು.
ಇದರಿಂದ ರಾಜ್ಯದ ಜಿಡಿಪಿ ದರ ಹೆಚ್ಚಳಗೊಂಡು 2014-15 ನೇ ವರ್ಷದಲ್ಲಿ ದೇಶದಲ್ಲೇ ಅತಿ ಹೆಚ್ಚಿನ ಜಿಡಿಪಿ ಅಂದರೆ ಶೇ.10.19 ರಷ್ಟು ದಾಖಲಿಸಿತ್ತು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X