ಬಲೆಸ್ಸಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ 1973ರಲ್ಲಿ ರಾಜಕೀಯ ಜೀವನ ಆರಂಭಿಸಿದ ಗುಲಾಂ ನಭಿ ಆಜಾದ್, ನಂತರದಲ್ಲಿ ಬಡ್ತಿ ಪಡೆದು ಯುವ ಕಾಂಗ್ರೆಸ್ನ ಅಧ್ಯಕ್ಷರಾಗಿ ನೇಮಕಗೊಂಡರು. 1980ರಲ್ಲಿ ಮಹಾರಾಷ್ಟ್ರದ ವಾಶಿಮ್ ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. 1982ರಲ್ಲಿ ಕೇಂದ್ರ ಸರ್ಕಾರದ ಕಾನೂನು, ನ್ಯಾಯ ಮತ್ತು ಕಂಪನಿ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಹಂತ ಹಂತವಾಗಿ ಅಧಿಕಾರದಲ್ಲಿ ಮೆಲೇರಿದ ನಭಿ ಹಲವು ಮಹತ್ವದ ಹುದ್ದೆಗಳನ್ನು ಪಡೆದರು. ಜತೆಗೆ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿಯಾಗಿ 2005ರಲ್ಲಿ ಗದ್ದುಗೆ ಏರಿದರು. ೨೦೦೮ರಲ್ಲಿ ಮುಸ್ಲಿಂ ದಂಗೆ ಪರಿಣಾಮವಾಗಿ ಹಿಂದೂ ಮಂದಿರ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸುವ ಪ್ರಕ್ರಿಯೆಯನ್ನು ರದ್ದುಗೊಳಿಸಿ ಹಿಂದೂ-ಮುಸ್ಲಿಂ ದಂಗೆಗೆ ಕಾರಣರಾದರು. ಇದರ ಹೋರಾಟದಲ್ಲಿ ಪಾಲ್ಗೊಂಡ ಹಿಂದೂ ಯಾತ್ರಿಗಳು ಪ್ರಾಣ ಕಳೆದುಕೊಂಡರು. ಈ ದುರ್ಘಟನೆಯಿಂದಾಗಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಹುದ್ದೆಗೆ ಗುಲಾಂನಭಿ ಆಜಾದ್ ರಾಜೀನಾಮೆ ನೀಡುವಂತಾಯಿತು. ಪ್ರಸ್ತುತ ಐದನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಮುಂದುವರಿಯುತ್ತಿದ್ದಾರೆ.
| ಪೂರ್ಣ ಹೆಸರು | ಗುಲಾಂ ನಭಿ ಆಜಾದ್ |
| ಜನ್ಮ ದಿನಾಂಕ | 07 Mar 1949 (ವಯಸ್ಸು 77) |
| ಹುಟ್ಟಿದ ಸ್ಥಳ | Village Soti, Bhadarwah, Distt. Doda (Jammu & Kashmir) |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | |
| ಉದ್ಯೋಗ | ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ |
| ತಂದೆಯ ಹೆಸರು | ಶ್ರೀ ರೆಹಮತುಲ್ಲಾ |
| ತಾಯಿಯ ಹೆಸರು | ಶ್ರೀಮತಿ ಬಸಾ ಬೇಗಂ |
| ಅವಲಂಬಿತರ ಹೆಸರು | ಶ್ರೀಮತಿ ಶಮೀಮ್ ದೇವ್ ಆಜಾದ್ |
| ಅವಲಂಬಿತರ ಉದ್ಯೋಗ | ಸಾಮಾಜಿಕ ಸೇವೆ |
| ಮಕ್ಕಳು | 1 ಪುತ್ರ(ರು) 1 ಪುತ್ರಿ(ಯರು) |
| ಧರ್ಮ | ಇಸ್ಲಾಂ |
| ವೆಬ್ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.