ಮುಖ್ಯಪುಟ
 » 
ಶಿವಾನಂದ ಎಸ್. ಪಾಟೀಲ

ಶಿವಾನಂದ ಎಸ್. ಪಾಟೀಲ

ಶಿವಾನಂದ ಎಸ್. ಪಾಟೀಲ

ವಿಜಯಪುರದಲ್ಲಿ ಹುಟ್ಟಿ ಬೆಳೆದ ಶಿವಾನಂದ ಪಾಟೀಲರು ಯುವಕರಾಗಿದ್ದಾನಿಂದಲೇ ರಾಜಕೀಯ ರಂಗದತ್ತ ಆಕರ್ಷಿತರಾಗಿದ್ದರು. 1992 ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಚುನಾಯಿತರಾದಾಗ ಇವರು ಸ್ಥಳೀಯ ರಾಜಕಾರಣದಲ್ಲಿ ಮೂಚೂಣಿಗೆ ಬಂದರು.

ಶಿವಾನಂದ ಎಸ್. ಪಾಟೀಲ ಜೀವನ ಚರಿತ್ರೆ

ವಿಜಯಪುರದಲ್ಲಿ ಹುಟ್ಟಿ ಬೆಳೆದ ಶಿವಾನಂದ ಪಾಟೀಲರು ಯುವಕರಾಗಿದ್ದಾನಿಂದಲೇ ರಾಜಕೀಯ ರಂಗದತ್ತ ಆಕರ್ಷಿತರಾಗಿದ್ದರು. 1992 ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಚುನಾಯಿತರಾದಾಗ ಇವರು ಸ್ಥಳೀಯ ರಾಜಕಾರಣದಲ್ಲಿ ಮೂಚೂಣಿಗೆ ಬಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ತಿಕೋಟಾ ಶಾಸಕ ಬಿ.ಎಂ. ಪಾಟೀಲ ಅವರ ನಿಧನದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಶಿವಾನಂದ ಪಾಟೀಲರು ಎಂ.ಬಿ. ಪಾಟೀಲ (ಬಿ.ಎಂ. ಪಾಟೀಲರ ಮಗ) ಅವರ ವಿರುದ್ಧ ಸೋಲನುಭವಿಸಿದರು. ಆದರೆ ತದನಂತರ 1994 ಹಾಗೂ 1999 ಎರಡೂ ಚುನಾವಣೆಗಳಲ್ಲಿ ಎಂ.ಬಿ. ಪಾಟೀಲರನ್ನು ಸೋಲಿಸಿ ಸೇಡು ತೀರಿಸಿಕೊಂಡರು. 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ 2004 ರ ಚುನಾವಣೆಗೂ ಮುನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕರೆಗೆ ಓಗೊಟ್ಟು ಕಾಂಗ್ರೆಸ್ ಸೇರಿ ಬಸವನ ಬಾಗೇವಾಡಿ ಕ್ಷೇತ್ರದಿಂದ ಕಣಕ್ಕಿಳಿದರು. ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿದ್ದಾರೆ. ಇವರ ಸಹೋದರ ವಿಜುಗೌಡ ಪಾಟೀಲರು ಸಹ ರಾಜಕೀಯದಲ್ಲಿದ್ದು ಅವರು ಬಿಜೆಪಿಯ ಸದಸ್ಯರಾಗಿದ್ದಾರೆ.

ಮತ್ತಷ್ಟು ಓದು
By Moumi Majumdar Updated: Friday, February 1, 2019, 05:56:02 PM [IST]

ಶಿವಾನಂದ ಎಸ್. ಪಾಟೀಲ ವಯಕ್ತಿಕ ಜೀವನ

ಪೂರ್ಣ ಹೆಸರು ಶಿವಾನಂದ ಎಸ್. ಪಾಟೀಲ
ಜನ್ಮ ದಿನಾಂಕ 23 Apr 1964 (ವಯಸ್ಸು 60)
ಹುಟ್ಟಿದ ಸ್ಥಳ ವಿಜಯಪುರ (ಬಿಜಾಪುರ)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Others
ಉದ್ಯೋಗ ಔಷಧಿ ವ್ಯಾಪಾರ ಹಾಗೂ ಕೃಷಿ
ತಂದೆಯ ಹೆಸರು ಸಿದ್ರಾಮಗೌಡ ಪಾಟೀಲ
ತಾಯಿಯ ಹೆಸರು N/A
ಧರ್ಮ ಹಿಂದು
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಶಿವಾನಂದ ಎಸ್. ಪಾಟೀಲ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹31.7 CRORE
ಆಸ್ತಿ:₹35.39 CRORE
ಸಾಲಸೋಲ: ₹3.7 CRORE

ಶಿವಾನಂದ ಎಸ್. ಪಾಟೀಲ ಕುರಿತು ಆಸಕ್ತಿದಾಯಕ ಸಂಗತಿಗಳು

ಕುದುರೆ ಸವಾರಿಯಲ್ಲಿ ಪಳಗಿರುವ ಇವರಿಗೆ ಅದು ಮೆಚ್ಚಿನ ಹವ್ಯಾಸವೂ ಆಗಿದೆ. ಪುಸ್ತಕಗಳನ್ನು ಓದುವುದರಲ್ಲಿಯೂ ಇವರು ಆಸಕ್ತಿ ಹೊಂದಿದ್ದಾರೆ.

ಶಿವಾನಂದ ಎಸ್. ಪಾಟೀಲ ರಾಜಕೀಯ ಟೈಮ್‌ಲೈನ್

2018
  • ಬಸವನ ಬಾಗೇವಾಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ 3186 ಮತಗಳ ಅಂತರದಿಂದ ಮತ್ತೆ ಗೆದ್ದರು. ಈ ಬಾರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದರು.
2013
  • ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವನ ಬಾಗೇವಾಡಿಯಿಂದ ಸ್ಪರ್ಧಿಸಿ ತನ್ನ ಸಮೀಪದ ಪ್ರತಿಸ್ಪರ್ಧಿಗಿಂತ 19676 ಅಧಿಕ ಮತ ಗಳಿಸಿ ಜಯಿಸಿದರು.
2008
  • ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವನ ಬಾಗೇವಾಡಿಯಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ ಎದುರು ಪರಾಜಿತರಾದರು.
2004
  • ಎಸ್.ಎಂ. ಕೃಷ್ಣ ಅವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಸೇರಿದ ಶಿವಾನಂದ ಪಾಟೀಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸವನ ಬಾಗೇವಾಡಿಯಿಂದ ಸ್ಪರ್ಧಿಸಿ ಜಯಗಳಿಸಿದರು.
1999
  • ಈ ಬಾರಿ ಬಿಜೆಪಿ ಸೇರಿ ತಿಕೋಟಾ ತಿಕೋಟಾ ಕ್ಷೇತ್ರದಿಂದ ಮತ್ತೊಮ್ಮೆ ಜಯಶಾಲಿಯಾದರು.
1994
  • ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲರನ್ನು ಸೋಲಿಸಿ ಶಾಸಕರಾದರು.
1992
  • ತಿಕೋಟಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ಬಿ. ಪಾಟೀಲ ಅವರ ವಿರುದ್ಧ ಪರಾಭವಗೊಂಡರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X