ಮುಖ್ಯಪುಟ
 » 
ಕರಡಿ ಸಂಗಣ್ಣ ಅಮರಪ್ಪ

ಕರಡಿ ಸಂಗಣ್ಣ ಅಮರಪ್ಪ

ಕರಡಿ ಸಂಗಣ್ಣ ಅಮರಪ್ಪ

1950 ರಲ್ಲಿ ಜನಿಸಿದ ಸಂಗಣ್ಣ ಕರಡಿ ಹೈದರಾಬಾದ ಕರ್ನಾಟಕ ಭಾಗದ ಪ್ರಮುಖ ರಾಜಕೀಯ ಮುಖಂಡರಲ್ಲೊಬ್ಬರಾಗಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಇವರು ಕೊಪ್ಪಳದಿಂದ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ವೃತ್ತಿ ಆರಂಭಿಸಿದರು.

ಕರಡಿ ಸಂಗಣ್ಣ ಅಮರಪ್ಪ ಜೀವನ ಚರಿತ್ರೆ

1950 ರಲ್ಲಿ ಜನಿಸಿದ ಸಂಗಣ್ಣ ಕರಡಿ ಹೈದರಾಬಾದ ಕರ್ನಾಟಕ ಭಾಗದ ಪ್ರಮುಖ ರಾಜಕೀಯ ಮುಖಂಡರಲ್ಲೊಬ್ಬರಾಗಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯವರಾದ ಇವರು ಕೊಪ್ಪಳದಿಂದ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ರಾಜಕೀಯ ವೃತ್ತಿ ಆರಂಭಿಸಿದರು. 2008 ರಲ್ಲಿ ಜೆಡಿಎಸ್‌ನಿಂದ ಕರ್ನಾಟಕ ವಿಧಾನ ಸಭೆಗೆ ಇವರು ಆಯ್ಕೆಯಾದರು. ಆದರೆ 2011 ರಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದರು. ನಂತರ 2011 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜ್ಯ ವಿಧಾನ ಸಭೆಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ನಿಜವಾದ ಶಕ್ತಿ, ಸಾಮರ್ಥ್ಯ ತೋರಿಸಿದರು. ಆದರೆ 2013 ರ ವಿಧಾನ ಸಭಾ ಚುನಾವಣೆಯಲ್ಲಿ ಸಂಗಣ್ಣ ಕರಡಿ ಸೋಲನುಭವಿಸಿದರು. ನಂತರ 2014 ರಲ್ಲಿ ನಡೆದ 16ನೇ ಲೋಕಸಭಾ ಚುನಾವಣೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಜಯಶಾಲಿಯಾಗಿ ಸಂಸದರಾಗಿ ಆಯ್ಕೆಯಾದರು. ಕೇಂದ್ರ ಜವಳಿ ಖಾತೆಯ ಕೃಷಿ ಹಾಗೂ ಸಲಹಾ ಸ್ಥಾಯಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.

ಮತ್ತಷ್ಟು ಓದು
By Ajay M V Updated: Friday, February 1, 2019, 05:56:02 PM [IST]

ಕರಡಿ ಸಂಗಣ್ಣ ಅಮರಪ್ಪ ವಯಕ್ತಿಕ ಜೀವನ

ಪೂರ್ಣ ಹೆಸರು ಕರಡಿ ಸಂಗಣ್ಣ ಅಮರಪ್ಪ
ಜನ್ಮ ದಿನಾಂಕ 08 May 1950 (ವಯಸ್ಸು 74)
ಹುಟ್ಟಿದ ಸ್ಥಳ ಹೊಳೆನರಸೀಪುರ, ಹಾಸನ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ 10th Pass
ಉದ್ಯೋಗ ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ದಿವಂಗತ ದೊಡ್ಡೇಗೌಡ
ತಾಯಿಯ ಹೆಸರು ದೇವಮ್ಮ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಕರಡಿ ಸಂಗಣ್ಣ ಅಮರಪ್ಪ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹52.79 LAKHS
ಆಸ್ತಿ:₹1.21 CRORE
ಸಾಲಸೋಲ: ₹68.48 LAKHS

ಕರಡಿ ಸಂಗಣ್ಣ ಅಮರಪ್ಪ ಕುರಿತು ಆಸಕ್ತಿದಾಯಕ ಸಂಗತಿಗಳು

ಇವರ ಸುಪುತ್ರ ಅಮರೇಶ ಕರಡಿ ಅವರೂ ಸಹ ಸದ್ಯ ಕರ್ನಾಟಕ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ.

ಕರಡಿ ಸಂಗಣ್ಣ ಅಮರಪ್ಪ ರಾಜಕೀಯ ಟೈಮ್‌ಲೈನ್

2014
  • 2014 ರಲ್ಲಿ ಕೃಷಿ ಸ್ಥಾಯಿ ಸಮಿತಿಯ ಸದಸ್ಯ, ಜವಳಿ ಖಾತೆಯ ಸಲಹಾ ಸಮಿತಿ ಸದಸ್ಯ, ರೈಲ್ವೆ ಕನ್ವೆನ್ಷನ್ ಕಮಿಟಿಯ ಸದಸ್ಯರಾಗಿ ನೇಮಕಗೊಂಡರು.
2014
  • 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾದರು.
2013
  • 2013 ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಕೊಪ್ಪಳದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.
2011
  • ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದರು. ನಂತರ ಕೊಪ್ಪಳ ಕ್ಷೇತ್ರಕ್ಕೆ ನಡೆದ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 12 ಸಾವಿರಕ್ಕೂ ಅಧಿಕ ಮತಗಳಿಂದ ಜಯ ಗಳಿಸಿದರು.
2008
  • ಜೆಡಿಎಸ್ ಅಭ್ಯರ್ಥಿಯಾಗಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಜಯಶಾಲಿಗಳಾದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X