ರಾಮ್ ಜೇಠ್ಮಲಾನಿ ಭಾರತದ ಪ್ರಖ್ಯಾತ ವಕೀಲರು. ಅಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ರಾಮ್ ಜೇಠ್ಮಲಾನಿ ಪಾಕಿಸ್ತಾನದ ಸಿಂದ್ ನಲ್ಲಿ ಜನಿಸಿದವರು. ತಮ್ಮ 17ನೇ ವಯಸ್ಸಿಗೆ ಕಾನೂನು ಅಭ್ಯಾಸ ಆರಂಭಿಸಿ, ಚಿಕ್ಕ ವಯೋಮಾನದಲ್ಲೇ ಕಾನೂನು ಪದವಿ ತೇರ್ಗಡೆಯಾದರು. ಪದವಿ ನಂತರ ಹಲವು ಕಾನೂನು ನೆರವು ಸಂಸ್ಥೆಗಳನ್ನು ಕರಾಚಿಯಲ್ಲಿ ತೆರೆದರು. ಆದರೆ ಭಾರತ- ಪಾಕ್ ವಿಭಜನೆ ಕುರಿತ ಗಲಭೆ ಆರಂಭವಾದ ಕಾರಣಕ್ಕೆ ಭಾರತಕ್ಕೆ ಓಡಿ ಬಂದರು. ಕಾಲಾಂತರದಲ್ಲಿ ಅತ್ಯುತ್ತಮ ವಕೀಲರಾಗಿ ಪ್ರಖ್ಯಾತ ಪ್ರಕರಣಗಳಲ್ಲಿ ವಾದ ಮಂಡಿಸಲಾರಂಭಿಸಿದರು. ಅಪರಾಧಿಗಳಂತೆ ಕಾಣುತ್ತಿದ್ದ ನಿರಾಶ್ರಿತರ ಪರವಾಗಿ ವಕಾಲತ್ತು ವಹಿಸಿದರು. 1993-98 ರಲ್ಲಿ ಹರ್ಷದ್ ಮೆಹ್ತಾ, ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಲಂಚ ಪ್ರಕರಣಗಳಲ್ಲಿ ಇವರು ವಾದ ಮಂಡಿಸಿದರು. 2010ರಲ್ಲಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದರು.
2017ರಲ್ಲಿ ಕಾನೂನು ಸೇವೆಯಿಂದ ನಿವೃತ್ತರಾದರು. 1977 ರಲ್ಲಿ ಸಂಸತ್ತಿಗೆ ಮೊದಲ ಬಾರಿ ಆಯ್ಕೆಯಾಗಿ ಎರಡು ಬಾರಿ ಸಂಸದರಾಗಿದ್ದರು. ಅದೇ ರೀತಿ 1988ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ಆರು ಬಾರಿ ಇವರು ಸೇವೆ ಸಲ್ಲಿಸಿದ್ದಾರೆ.
| ಪೂರ್ಣ ಹೆಸರು | ರಾಮ್ ಜೇಠ್ಮಲಾನಿ |
| ಜನ್ಮ ದಿನಾಂಕ | 14 Sep 1923 |
| ಮೃತಪಟ್ಟ ದಿನಾಂಕ | 08 Sep 2019 (ವಯಸ್ಸು 96) |
| ಹುಟ್ಟಿದ ಸ್ಥಳ | ಸಿಂಧ್ (ಪಾಕಿಸ್ತಾನ) |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | |
| ಉದ್ಯೋಗ | ಹಿರಿಯ ವಕಿಲರು, ಸುಪ್ರೀಂಕೋರ್ಟ್, ದೆಹಲಿ |
| ತಂದೆಯ ಹೆಸರು | ದಿ.ಬುಲಚಂದ್ ಗುರುಮುಖ್ ದಾಸ್ |
| ತಾಯಿಯ ಹೆಸರು | ಶ್ರೀಮತಿ ಪ್ರಭಾತಿ ಜೇಠ್ಮಲಾನಿ |
| ಅವಲಂಬಿತರ ಹೆಸರು | ಶ್ರೀಮತಿ ರತ್ನಾ |
| ಅವಲಂಬಿತರ ಉದ್ಯೋಗ | ವಕೀಲೆ |
| ಮಕ್ಕಳು | 2 ಪುತ್ರ(ರು) 2 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.