ಮುಖ್ಯಪುಟ
 » 
ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್

ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕರು. ಮೂರು ಬಾರಿ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು.

ಮುಲಾಯಂ ಸಿಂಗ್ ಯಾದವ್ ಜೀವನ ಚರಿತ್ರೆ

ಮುಲಾಯಂ ಸಿಂಗ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕರು. ಮೂರು ಬಾರಿ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದವರು. ಧೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಅಕ್ಟೋಬರ್ 10, 2022ರ ಸೋಮವಾರ ನಿಧನ ಹೊಂದಿದರು.

ಮುಲಾಯಂ ಸಿಂಗ್ ಯಾದವ್ 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರ ತನಕ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಸಹ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

1996 ರಿಂದ 1998ರ ತನಕ ಮುಲಾಯಂ ಸಿಂಗ್ ಯಾದವ್ ಭಾರತದ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 1974 ರಿಂದ 2007ರ ನಡುವೆ ಒಟ್ಟು 7 ಬಾರಿ ಉತ್ತರ ಪ್ರದೇಶ ವಿಧಾನಸಭೆಗೆ ಶಾಸಕರಾಗಿ ಅವರು ಆಯ್ಕೆಗೊಂಡಿದ್ದಾರೆ. ಹಲವು ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡ ಅವರು ಅಂತಿಮವಾಗಿ ಸಮಾಜವಾದಿ ಪಕ್ಷ ಸ್ಥಾಪನೆ ಮಾಡುವ ತೀರ್ಮಾನ ಮಾಡಿದರು. 1992ರಲ್ಲಿ ಪಕ್ಷ ಸ್ಥಾಪಿಸಿದರು.

ರಾಜ್ಯದಲ್ಲಿ ಪಕ್ಷದ ಹಲವಾರು ಚುನಾವಣೆಯಲ್ಲಿ ಗೆಲ್ಲುವಂತೆ, ಉತ್ತರ ಪ್ರದೇಶದ ಪ್ರಮುಖ ವಿರೋಧ ಪಕ್ಷವಾಗುವಂತೆ ಸಮಾಜವಾದಿ ಪಕ್ಷವನ್ನು ಕಟ್ಟಿ ಬೆಳೆಸಿದರು.

ಮತ್ತಷ್ಟು ಓದು
By Keshav Karna Updated: Monday, October 10, 2022, 11:19:13 AM [IST]

ಮುಲಾಯಂ ಸಿಂಗ್ ಯಾದವ್ ವಯಕ್ತಿಕ ಜೀವನ

ಪೂರ್ಣ ಹೆಸರು ಮುಲಾಯಂ ಸಿಂಗ್ ಯಾದವ್
ಜನ್ಮ ದಿನಾಂಕ 21 Nov 1939
ಮೃತಪಟ್ಟ ದಿನಾಂಕ 10 Oct 2022 (ವಯಸ್ಸು 82)
ಹುಟ್ಟಿದ ಸ್ಥಳ ಸೈಫೈ, (ಉತ್ತರ ಪ್ರದೇಶ)
ಪಕ್ಷದ ಹೆಸರು Samajwadi Party
ವಿದ್ಯಾರ್ಹತೆ Post Graduate
ಉದ್ಯೋಗ ಕೃಷಿಕ, ಸಮಾಜ ಸೇವೆ
ತಂದೆಯ ಹೆಸರು ಸುಗುರ್ ಸಿಂಗ್ ಯಾದವ್
ತಾಯಿಯ ಹೆಸರು ಮೂರ್ತಿ ದೇವಿ
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಮುಲಾಯಂ ಸಿಂಗ್ ಯಾದವ್ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹15.97 CRORE
ಆಸ್ತಿ:₹15.97 CRORE
ಸಾಲಸೋಲ: N/A

ಮುಲಾಯಂ ಸಿಂಗ್ ಯಾದವ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕುಸ್ತಿಪಟುವಾಗಬೇಕು ಎಂದುಕೊಂಡಿದ್ದ ಮುಲಾಯಂ ಸಿಂಗ್ ಯಾದವ್ 15ನೇ ವಯಸ್ಸಿನಲ್ಲಿಯೇ ರಾಜಕೀಯದತ್ತ ಆಕರ್ಷಿತರಾದರು.

ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದ ಮುಲಾಯಂ ಸಿಂಗ್ ಯಾದವ್ ರಾಜಕೀಯಕ್ಕೆ ಬಂದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳ ಕಾಲ ಅವರು ಜೈಲುವಾಸ ಅನುಭವಿಸಿದರು.

ಮುಲಾಯಂ ಸಿಂಗ್ ಯಾದವ್ ರಾಜಕೀಯ ಟೈಮ್‌ಲೈನ್

2014
  • ಅಜಂಗಢ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು 63,204 ಮತಗಳ ಅಂತರದಿಂದ ಸೋಲಿಸಿದರು.
2009
  • ಮಣಿಪುರಿ ಕ್ಷೇತ್ರದಿಂದ 15ನೇ ಲೋಕಸಭೆಗೆ ಮತ್ತೆ ಆಯ್ಕೆಗೊಂಡರು.
2003
  • 3ನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.
1996
  • 11ನೇ ಲೋಕಸಭೆಗೆ ಮಣಿಪುರಿ ಕ್ಷೇತ್ರದಿಂದ 51,958 ಮತಗಳ ಅಂತರದಿಂದ ಆಯ್ಕೆಗೊಂಡರು.
1993
  • 2ನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.
1989
  • ಜಸ್ವಂತ್ ನಗರದಿಂದ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.
1985
  • ಎಲ್‌ಕೆಡಿ ಅಭ್ಯರ್ಥಿಯಾಗಿ ಮತ್ತೆ ಜಸ್ವಂತ್ ನಗರದಿಂದ ಕಣಕ್ಕಿಳಿದರು. ಶಿವರಾಜ್‌ ಸಿಂಗ್ ಯಾದವ್‌ ವಿರುದ್ಧ ಜಯಗಳಿಸಿದರು.
1977
  • ಜಸ್ವಂತ್‌ ನಗರದಿಂದ ಮತ್ತೆ ಜೆಎನ್‌ಡಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು.
1974
  • ಮುಲಾಯಂ ಸಿಂಗ್ ಯಾದವ್ ಜಸ್ವಂತ್‌ ನಗರ ವಿಧಾನಸಭಾ ಕ್ಷೇತ್ರದಿಂದ ಬಿಕೆಡಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. 14,258 ಮತಗಳ ಅಂತರದಿಂದ ಜಯಗಳಿಸಿದರು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X