1987ರ ಅವಧಿಯಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಜಿಲ್ಲೆಗಳ ಪುನರ್ವಿಂಗಡಣಾ ಸಮಿತಿಯನ್ನು ರಚಿಸಿ ಅದಕ್ಕೆ ಪಿ.ಸಿ. ಗದ್ದಿಗೌಡರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಇದೇ ಕಾರಣದಿಂದ ಗದ್ದಿಗೌಡರ ರಾಜಕಾರಣದಲ್ಲಿ ಮುಂದೆ ಬರಲು ಸಹಕಾರಿಯಾಯಿತು. ಅವಿಭಜಿತ ವಿಜಾಪುರ ಜಿಲ್ಲೆ ವಿಂಗಡಿಸಿ ಬಾಗಲಕೋಟ ಜಿಲ್ಲೆ ರಚನೆಗೆ ಗದ್ದಿಗೌಡರ ಅವರೇ ಪ್ರಮುಖ ಕಾರಣಕರ್ತರಾಗಿದ್ದಾರೆ. 1988 ರಲ್ಲಿ ಗದ್ದಿಗೌಡರ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 1994 ರಲ್ಲಿ ಜೆಡಿಎಸ್ ಟಿಕೆಟ್ ದೊರೆಯದ ಕಾರಣ ಬದಾಮಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟ ಅವರು ಕಾಂಗ್ರೆಸ್ನ ಬಿ.ಬಿ. ಚಿಮ್ಮನಕಟ್ಟಿ ಎದುರು ಸೋತರು. ಆಲ್ ಇಂಡಿಯಾ ಪ್ರೊಗ್ರೆಸಿವ್ ಜನತಾ ದಳದ ಸದಸ್ಯರಾಗಿದ್ದ ಇವರು ನಂತರ ಬಿಜೆಪಿ ಸೇರಿ ಬಿಜೆಪಿ ಟಿಕೆಟ್ ಮೇಲೆ 14ನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರು. 2004 ರಲ್ಲಿ ಬಾಗಲಕೋಟ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ ಇವರು ಆಗಿನಿಂದಲೂ ಈ ಕ್ಷೇತ್ರವನ್ನು ಬಿಟ್ಟು ಕೊಟ್ಟಿಲ್ಲ.
| ಪೂರ್ಣ ಹೆಸರು | ಪಿ.ಸಿ. ಗದ್ದಿಗೌಡರ |
| ಜನ್ಮ ದಿನಾಂಕ | 01 Jun 1951 (ವಯಸ್ಸು 74) |
| ಹುಟ್ಟಿದ ಸ್ಥಳ | ಹೆಬ್ಬಳ್ಳಿ, ಬಾಗಲಕೋಟ ಜಿಲ್ಲೆ, ಕರ್ನಾಟಕ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Graduate Professional |
| ಉದ್ಯೋಗ | ವಕೀಲ, ಕೃಷಿಕ |
| ತಂದೆಯ ಹೆಸರು | ಶ್ರೀ ಚಂದನಗೌಡ |
| ತಾಯಿಯ ಹೆಸರು | ಶ್ರೀಮತಿ ಬಾಳವ್ವ |
| ಅವಲಂಬಿತರ ಹೆಸರು | ಶ್ರೀಮತಿ ಸಾವಿತ್ರಿ |
| ಅವಲಂಬಿತರ ಉದ್ಯೋಗ | ಹೌಸವೈಫ್ |
| ಮಕ್ಕಳು | 2 ಪುತ್ರ(ರು) 1 ಪುತ್ರಿ(ಯರು) |
| ಧರ್ಮ | ಹಿಂದು |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.