ಭಾರತದ 'ಮೆಟ್ರೋ ಮನುಷ್ಯ' ಎಂದು ಪ್ರೀತಿಯಿಂದ ಕರೆಯಲ್ಪಡುವ ಎಲಾತುವಾಲ್ಪಿಲ್ ಶ್ರೀಧರನ್ ಅವರು ಶ್ರೇಷ್ಠ ಎಂಜಿನಿಯರ್. ಕೇರಳದ ಪಾಲಕ್ಕಾಡ್ ಜಿಲ್ಲೆಯ ಕರುಕಾಪುಥೂರಿನಲ್ಲಿ 1932 ರ ಜೂನ್ 12 ರಂದು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿ ಬಳಿಯ ಚಥನೂರಿನ ಸರ್ಕಾರಿ ಲೋವರ್ ಪ್ರೈಮರಿ ಶಾಲೆಯಲ್ಲಿ ಪಡೆದರು. ಪ್ರೌಢ ಶಿಕ್ಷಣವನ್ನು ಬಾಸೆಲ್ ಇವಾಂಜೆಲಿಕಲ್ ಮಿಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಗಿಸಿದರು.
'ಜೆಎನ್ಟಿಯುಕೆ' ಎಂದು ಕರೆಯಲ್ಪಡುವ ಆಂಧ್ರಪ್ರದೇಶದ ಕಾಕಿನಾಡದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ಅವರು ಐಇಎಸ್ ಪಾಸಾಗಿ ಭಾರತೀಯ ರೈಲ್ವೆ ಎಂಜಿನಿಯರಿಂಗ್ ಸೇವೆಗೆ ಸೇರಿದರು. ಸೇವೆಗೆ ಸೇರಿದ ಪ್ರಾರಂಭದ ದಿನಗಳಲ್ಲೇ ಇವರು ಚಂಡಮಾರುತದಿಂದ ಕುಸಿದು ಬಿದ್ದಿದ್ದ ರಾಮೇಶ್ವರಂ ಪಂಬಂ ಸೇತುವೆಯನ್ನು ಪುನರ್ ನಿರ್ಮಿಸಿದರು.ಕಡಿಮೆ ಸಮಯದಲ್ಲೇ ಇದನ್ನು ಮಾಡಿದ ಖ್ಯಾತಿಯು ದೊರೆಯಿತು. ನಂತರ ಅವರು ಕೊಂಕಣ ರೈಲ್ವೆ, ಆಗ್ನೇಯ ರೈಲ್ವೆ, ಕೋಲ್ಕತಾ ಮೆಟ್ರೋ, ಕೊಚ್ಚಿನ್ ಶಿಪ್ಯಾರ್ಡ್, ದೆಹಲಿ ಮೆಟ್ರೋ ರೈಲು, ಕೊಚ್ಚಿ ಮೆಟ್ರೋ ಮತ್ತು ಲಕ್ನೋ ಮೆಟ್ರೊದಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ತಮ್ಮ ಸೇವೆಯ ಸಮಯದಲ್ಲಿ ಮತ್ತು ನಿವೃತ್ತಿಯ ನಂತರವೂ ಮಾಡಿದರು. ಯಾವುದೇ ಯೋಜನೆಗಳಿರಲಿ ಅದನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವುದರಲ್ಲಿ ಶ್ರೀಧರನ್ ಅವರು ಹೆಸರುವಾಸಿ. ಭಾರತದಲ್ಲಿ ನಗರ ಸಾರಿಗೆ ಮೂಲಸೌಕರ್ಯಗಳ ಸ್ವರೂಪವನ್ನು ಬದಲಾಯಿಸುವಲ್ಲಿ ಶ್ರೀಧರನ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಮೂರು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಇ. ಶ್ರೀಧರನ್ ಅವರು ವಿಶ್ವದಾದ್ಯಂತ ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಹಲವಾರು ಗೌರವ ಡಾಕ್ಟರೇಟ್ ಗಳನ್ನು ಪಡೆದಿದ್ದಾರೆ. ಪದ್ಮವಿಭೂಷಣ್, ಪದ್ಮಶ್ರೀ, ಅತ್ಯುನ್ನತ ಫ್ರೆಂಚ್ ಪ್ರಶಸ್ತಿ "ಚೆವಲಿಯರ್ ಡೆ ಲಾ ಲೆಜಿಯನ್ ಡಿ ಹೊನ್ನೂರ್", ಜಪಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ "ಆರ್ಡರ್ ಆಫ್ ದಿ ರೈಸಿಂಗ್ ಸನ್" ಚಿನ್ನ ಮತ್ತು ಬೆಳ್ಳಿ ತಾರೆ, ಜಿ-ಫೈಲ್ಸ್ ಪ್ರಶಸ್ತಿಗಳು ಸೇರಿದಂತೆ ಇನ್ನೂ ಅನೇಕ ಪುರಸ್ಕಾರಗಳು ಅನೇಕ ಇವರ ಮುಡಿಗೇರಿವೆ.
ಇವರ ಮೇಲೆ ಅನೇಕ ಬರಹಗಾರರು ಪುಸ್ತಕಗಳನ್ನು ಬರೆದಿದ್ದಾರೆ. ಸ್ವತಃ ಶ್ರೀಧರನ್ ಕೂಡ ವಿಜ್ಞಾನ, ತಂತ್ರಜ್ಞಾನ, ಅಭಿವೃದ್ಧಿ, ತಮ್ಮ ಆಲೋಚನೆಗಳು ಮತ್ತು ಕೆಲಸದ ನೀತಿ ಇತ್ಯಾದಿಗಳ ಬಗ್ಗೆಯೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. 2021 ರ ಫೆಬ್ರವರಿಯಲ್ಲಿ ಬಿಜೆಪಿಗೆ ಸೇರುವವರೆಗೂ ಅವರು ತಮ್ಮ ಜೀವನದುದ್ದಕ್ಕೂ ಸಂಪೂರ್ಣವಾಗಿ ರಾಜಕೀಯ ವಿರೋಧಿಗಳಾಗಿದ್ದರು. ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಎಂದು ಶ್ಲಾಘಿಸಿದ್ದರು. ಜೊತೆಗೆ 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರನ್ನು ಒಪ್ಪಿಕೊಂಡಿದ್ದರು.
| ಪೂರ್ಣ ಹೆಸರು | ಇ. ಶ್ರೀಧರನ್ |
| ಜನ್ಮ ದಿನಾಂಕ | 12 Jun 1932 (ವಯಸ್ಸು 93) |
| ಹುಟ್ಟಿದ ಸ್ಥಳ | ಕರುಕಾಪುಥೂರ್, ಪಾಲಕ್ಕಾಡ್ ಜಿಲ್ಲೆ, ಕೇರಳ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | Bachelor of Engineering |
| ಉದ್ಯೋಗ | ಎಂಜಿನಿಯರ್ |
| ತಂದೆಯ ಹೆಸರು | ಕೆ.ನೀಲಕಂದನ್ ಮೂಸತ್ |
| ತಾಯಿಯ ಹೆಸರು | ಅಮ್ಮಲುಅಮ್ |
| ಅವಲಂಬಿತರ ಹೆಸರು | ರಾಧಾ ಶ್ರೀಧರನ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 3 ಪುತ್ರ(ರು) 1 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.