ಕೇರಳ ರಾಜ್ಯದವರಾದ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು, ಅವರು ಮಾಜಿ ರಾಜತಾಂತ್ರಿಕರೂ ಹೌದು. ಪ್ರಸ್ತುತ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದರಾಗಿದ್ದಾರೆ. ಕಾಂಗ್ರೆಸ್ನಿಂದ ಈ ಪ್ರದೇಶದಲ್ಲಿ ಸತತ ಎರಡು ಬಾರಿ ಅವರು ಸಂಸದರಾಗಿ ಚುನಾಯಿತರಾಗಿದ್ದಾರೆ. ಮನಮೋಹನ್ ಸಿಂಗ್ ಅವರ ಯುಪಿಎ ಆಡಳಿತಾವಧಿಯಲ್ಲಿ ಕೇಂದ್ರ ಸಚಿವರೂ ಆಗಿದ್ದರು. 1956 ರಲ್ಲಿ ಲಂಡನ್ನಲ್ಲಿ ಹುಟ್ಟಿದ ತರೂರ, ಭಾರತ ಹಾಗೂ ಅಮೆರಿಕಾಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1978 ರಲ್ಲಿ ಫ್ಲೆಚರ್ ಸ್ಕೂಲ್ ಆಫ್ ಲಾ ಆಂಡ್ ಡಿಪ್ಲೊಮಸಿ ಕಾಲೇಜಿನಿಂದ ಪಿಎಚ್ಡಿ ಪದವಿ ಪಡೆದರು. ವಿಶ್ವಸಂಸ್ಥೆಯಲ್ಲಿ ಶಾಂತಿದೂತನಾಗಿ, ನಿರಾಶ್ರಿತರ ಕಾರ್ಯಕರ್ತನಾಗಿ ಹಾಗೂ ಆಡಳಿತಾತ್ಮಕ ಹುದ್ದೆಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಕೋಫಿ ಅನ್ನಾನ್ ಅವರ ಕಾರ್ಯಾವಧಿಯಲ್ಲಿ ಅಂಡರ್ ಸೆಕ್ರೆಟರಿ ಜನರಲ್ ಆಗಿ ಕೆಲಸ ಮಾಡಿದ್ದಾರೆ.
Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.