Get Updates
Get notified of breaking news, exclusive insights, and must-see stories!

ಡಾ. ಸತ್ಯಪಾಲ್ ಸಿಂಗ್ Singh

ಡಾ. ಸತ್ಯಪಾಲ್ ಸಿಂಗ್ Singh
ಡಾ. ಸತ್ಯಪಾಲ್ ಸಿಂಗ್ ಐಪಿಎಸ್ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿ.
By Ajay M V | Monday, February 8, 2021, 12:46:44 PM [IST]

ಡಾ. ಸತ್ಯಪಾಲ್ ಸಿಂಗ್ Singh ಜೀವನ ಚರಿತ್ರೆ

ಡಾ. ಸತ್ಯಪಾಲ್ ಸಿಂಗ್ ಐಪಿಎಸ್ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿ. ತಮ್ಮ ಪೊಲೀಸ್ ಸೇವೆಯನ್ನು ಮುಂಬೈನ ಪೊಲೀಸ್ ಆಯುಕ್ತರಾಗುವ ಮೂಲಕ ಆರಂಭಿಸಿದರು. ನಿವೃತ್ತಿ ನಂತರ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಗೊಂಡರು. 2014ರಲ್ಲಿ ಉತ್ತರಪ್ರದೇಶದ ಭಾಘಪತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ರಾಷ್ಟ್ರೀಯ ಲೋಕ ದಳ ಪಕ್ಷದ ಮುಖ್ಯಸ್ಥ ಅಜಿತ್ ಸಿಂಗ್ ಅವರನ್ನು 2.06 ಲಕ್ಷ ಮತಗಳಿಂದ ತಮ್ಮ ಮೊದಲ ಚುನಾವಣೆಯಲ್ಲೇ ಸೋಲಿಸಿ ಅತ್ಯಧಿಕ ಮತಗಳಿಂದ ಜಯಿಸಿದರು. ಮಾನವ ಸಂಪನ್ಮೂಲ ಅಭಿವೃದ್ಧಿ, ಜಲಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ ಮತ್ತು ಗಂಗಾ ನದಿ ಪುನರುಜ್ಜೀವನ, ಉನ್ನತ ಶಿಕ್ಷಣದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿಯೂ ಸೇವೆ ಸಲ್ಲಿಸಿದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆರ್.ಎಲ್.ಡಿ.ಯ ಜಯಂತ್ ಚೌಧರಿ ಅವರನ್ನು 23ಸಾವಿರ ಮತಗಳಿಂದ ಸೋಲಿಸಿ ಪುನರಾಯ್ಕೆಯಾದರು.

ಮತ್ತಷ್ಟು ಓದು

ಡಾ. ಸತ್ಯಪಾಲ್ ಸಿಂಗ್ Singh ವಯಕ್ತಿಕ ಜೀವನ

ಪೂರ್ಣ ಹೆಸರು ಡಾ. ಸತ್ಯಪಾಲ್ ಸಿಂಗ್ Singh
ಜನ್ಮ ದಿನಾಂಕ 29 Nov 1955 (ವಯಸ್ಸು 70)
ಹುಟ್ಟಿದ ಸ್ಥಳ ಬಸೌಲಿ, ಬಾಘಪತ್ (ಉತ್ತರಪ್ರದೇಶ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Doctorate
ಉದ್ಯೋಗ ನಿವೃತ್ತ ಐಪಿಎಸ್ ಅಧಿಕಾರಿ
ತಂದೆಯ ಹೆಸರು ರಾಮಕಿಶನ್
ತಾಯಿಯ ಹೆಸರು ಶ್ರೀಮತಿ ಹುಕ್ಮಾವತಿ
ಅವಲಂಬಿತರ ಹೆಸರು ಅಲ್ಕಾ ಸಿಂಗ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)
ವೆಬ್‌ಸೈಟ್ https://t.co/UJNJdBRNYU

ಡಾ. ಸತ್ಯಪಾಲ್ ಸಿಂಗ್ Singh ಒಟ್ಟು ಆಸ್ತಿ

ಒಟ್ಟು ಆಸ್ತಿ
₹6.71 CRORE
ಆಸ್ತಿ
₹6.74 CRORE
ಸಾಲಸೋಲ
₹3.52 LAKHS

ಡಾ. ಸತ್ಯಪಾಲ್ ಸಿಂಗ್ Singh ಕುರಿತು ಆಸಕ್ತಿದಾಯಕ ಸಂಗತಿಗಳು

ಧರ್ಮಗಳ ತುಲನಾತ್ಮಕ ಅಧ್ಯಯನ, ಭಯೋತ್ಪಾದನೆ, ಉಗ್ರವಾದ, ಪೊಲೀಸ್, ಶಿಕ್ಷಣ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಅಧ್ಯಯನ ಕುರಿತು ಹಿಂದಿಯಲ್ಲಿ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಜ್ಞಾನ ಮತ್ತು ಅಧ್ಯಾತ್ಮಿಕತೆ, ನಕ್ಸಲೀಸಂ ನಿರ್ವಹಣೆ, ಭಾರತೀಯ ದೃಷ್ಟಿಕೋನ, ಮನುಷ್ಯರಿಗಾಗಿ ಹುಡುಕಿ, ಅಪರಾಧ ಮತ್ತು ಭ್ರಷ್ಟಾಚಾರ ಪುಸ್ತಕಗಳನ್ನು ಬರೆದಿದ್ದಾರೆ. ಇವರ ಅಪರಾಧ, ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಪುಸ್ತಕವನ್ನು 2001ರಲ್ಲಿ ಕಲ್ಕತ್ತಾದ ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ಪ್ರಕಟಿಸಿದೆ.

ಡಾ. ಸತ್ಯಪಾಲ್ ಸಿಂಗ್ Singh ಸಾಧನೆಗಳು

ತಮ್ಮ ಪೊಲೀಸ್ ವೃತ್ತಿ ಜೀವನದಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿರುವ ಡಾ.ಸತ್ಯಪಾಲ ಸಿಂಗ್ 2013 ಡಿಸೆಂಬರ್ ನಲ್ಲಿ ನದೆಹಲಿಯಲ್ಲಿ ಇಂಡೋ-ಅಮೇರಿಕನ್ ಪೊಲೀಸ್ ಕಾನ್ಫರೆನ್ಸ್, 2013 ಜುಲೈನಲ್ಲಿ ಲಂಡನ್ ನಲ್ಲಿ ನಡೆದ ವಿಶ್ವದಾದ್ಯಂತ ನಗರ ಪೊಲೀಸ್ ವ್ಯವಸ್ಥೆ ಕುರಿತ ಸಮ್ಮೇಳನ, ಮೇ ತಿಂಗಳಲ್ಲಿ ನಡೆದ ಇಂಡೋ ಅಮೇರಿಕನ್ ಗೃಹ ಸಂರಕ್ಷಣೇ ಕುರಿತ ಸಮ್ಮೇಳನ, 2012 ನವೆಂಬರ್ 5ರಿಂದ 8ರವರೆಗೆ ರೋಮ್ ನಲ್ಲಿ ನಡೆದ 81ನೇ ಇಂಟರ್ಪೋಲ್ ಸಮ್ಮೇಳನ, 2011ರಲ್ಲಿ ಗುಜರಾತ್ ರಾಜ್ಯದಲ್ಲಿನ ನಡೆದ ಇಶ್ರತ್ ಜಹಾನ್ ಎನ್ಕೌಂಟರ್ ಕೇಸ್ ಅನ್ನು ಯಶಸ್ವಿಯಾಗಿ ನಿರ್ವಹಿಸಿ, ಎಸ್.ಐ.ಟಿ. ತಂಡದ ಅಧ್ಯಕ್ಷರಾಗಿದ್ದರು. ಈ ವೇಳೆ ಸಮುದಾಯ ನಿರ್ವಹಣೆಯಲ್ಲಿನ ಪೊಲೀಸ್ ವ್ಯವಸ್ಥೆ ಕುರಿತು ನೀತಿ ನಿಯಮಾವಳಿ ರೂಪಿಸಿಕೊಟ್ಟರು. 2011ರಲ್ಲಿ ಮಹಾರಾಷ್ಟ್ರ ರಾಜ್ಯದ ನಾಗಪುರ, ಪುಣೆ ಮತ್ತು ಮುಂಬೈ ನಗರಗಳಲ್ಲಿ ಭಯೋತ್ಪಾದನೆ ಎದುರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜಾಗೃತಿ ಅಭಿಯಾನದ ಅಂಗವಾಗಿ ಮಿಷನ್ ಮೃತ್ಯುಂಜಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾ.ಸತ್ಯಪಾಲ್ ಸಿಂಗ್ ಅವರಿಗೆ ಕೀರ್ತಿಯನ್ನು ತಂದುಕೊಟ್ಟಿತು. ಇದೇ ಕಾರಣಕ್ಕೆ 2007-14 ರಲ್ಲಿ ಕರಾವಳಿ ಗಡಿ ಭದ್ರತೆಯ ಸ್ಟ್ಯಾಂಡರ್ಡ್ ಆಪರೇಷನ್ ಪ್ರೋಸಿಜರ್ ನ ರಾಷ್ಟ್ರೀಯ ಯೋಜನೆ ನಿರೂಪಣೆ ತಂಡದ ಚೇರಮನ್ ಆಗಿ ಕೆಲಸ ನಿರ್ವಹಿಸಿದರು. 2006-07 ರಲ್ಲಿ ಅಮೇರಿಕದ ಲೂಸಿಯಾನದ ಬ್ಯಾಟನ್ ರೋಜ್ ನಲ್ಲಿ ನಡೆದ ಅಡ್ವಾನ್ಸ್ಡ ಕ್ರೈಸಿಸ್ ರೆಸ್ಪಾನ್ಸ್ ಟೀಮ್ ಗಾಗಿ ಭಾರತೀಯ ಗುಂಪಿನ ನಾಯಕರಾಗಿ ಕೆಲಸ ಮಾಡಿದರು.
2005ರಲ್ಲಿ ಮಹಾರಾಷ್ಟ್ರದಲ್ಲಿ ಸೈಬರ್ ಕ್ರೈಂ ನಿವಾರಣೆ ವಿಭಾಗದ ಅಧ್ಯಕ್ಷರಾಗಿ, 2003-04ರಲ್ಲಿ ಇಂಡೋ-ಬ್ರಿಟೀಷ್ ಸಮ್ಮೇಳನದಲ್ಲಿ ಮಹಾರಾಷ್ಟ್ರ ಪೊಲೀಸ್ ಪ್ರತಿನಿಧಿಸಿದರು. ಇಂಗ್ಲೆಂಡ್ ನಲ್ಲಿ ನಡೆದ ರಣಾಂಗಣದಲ್ಲಿ ಪೊಲೀಸ್ ಕಮಾಂಡೋ ಕೋರ್ಸ್ ಭಾರತೀಯ ತಂಡದ ನಾಯಕರಾಗಿ ಭಾರತ ಸರ್ಕಾರದಿಂದ ನೇಮಕಗೊಂಡರು. 1997ರಲ್ಲಿ ಜಪಾನ್ ನ ಟೋಕಿಯೋದಲ್ಲಿ ನಡೆದ ಅಪರಾಧ ಪತ್ತೆ ಅಂತಾರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಭಾರತವನ್ನು ಪ್ರತಿನಿಧಿಸಿದರು. 1992ರಲ್ಲಿ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚಿಸುವ ವ್ಯಕ್ತಿಯಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚರ್ಚೆ, ಸಂವಾದ, ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದರು. ವಿಶ್ವಮಟ್ಟದ ಆರ್ಯನ್ ಸಮ್ಮೇಳನಗಳಾದ ಮಾರಿಷಸ್, ಮುಂಬೈ, ಚಿಕ್ಯಾಗೋ, ನೆದರ್ಲ್ಯಾಂಡ್, ಗೋವಾ, ದೆಹಲಿಗಳಲ್ಲಿ ಪಾಲ್ಗೊಂಡರು. 2014ರಲ್ಲಿ ನೆದರಲೆಂಡ್ ನ ಜಿನೆವಾದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯ ಸಂಸತ್ನ ಆತಂರಿಕ ಸಮಿತಿ ಸದಸ್ಯರಾಗಿ ಪಾಲ್ಗೊಂಡರು. 2015 ಜುಲೈನಲ್ಲಿ ಸಿಂಗಪುರದಲ್ಲಿ ನಡೆದ ವೇದಿಕ್ ಸಮ್ಮೇಳನದಲ್ಲಿ, ಮಾರಿಷಸ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ಪಾಲ್ಗೊಂಡರು. ಅದೇ ವರ್ಷ ಮಾರಿಷಸ್ ನಲ್ಲಿ ನಡೆದ ರಾಮಾಯಣ ಸಮ್ಮೇಳನಕ್ಕೂ ಇವರು ಪಾಲ್ಗೊಂಡಿದ್ದರು. 2008ರಲ್ಲಿ ಭಾರತ ಸರ್ಕಾರದಿಂದ ಆಂತರಿಕ ಸುರಕ್ಷಾ ಸೇವಾ ಪದಕದ ಗೌರವಕ್ಕೆ ಭಾಜನರಾದರು. 2004ರಲ್ಲಿ ಪೊಲೀಸ್ ಸೇವೆಗಾಗಿ ರಾಷ್ಟ್ರಪತಿ ಪದಕಕ್ಕೂ ಇವರು ಭಾಜನರಾಗಿದ್ದಾರೆ. ನಕ್ಸಲ್ ವಿರೋಧಿ ಕಾರ್ಯಾಚರಣೆಗಾಗಿ ವಿಶೇಷ ಗೌರವ ಪುರಸ್ಕಾರ, ಕೋಮು ಸಂಘರ್ಷವನ್ನು ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಏಕ್ತಾ ಫೋರಂನಿಂದ ವಿಶೇಷ ಗೌರವ ಪುರಸ್ಕಾರ, ಹೈದ್ರಾಬಾದ್ ನ ಎಸ್.ವಿ.ಪಿ. ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+