Get Updates
Get notified of breaking news, exclusive insights, and must-see stories!

ಬಿ.ವೈ. ರಾಘವೇಂದ್ರ

ಬಿ.ವೈ. ರಾಘವೇಂದ್ರ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್.
By Anushree | Monday, April 29, 2019, 06:14:14 PM [IST]

ಬಿ.ವೈ. ರಾಘವೇಂದ್ರ ಜೀವನ ಚರಿತ್ರೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮಗನಾಗಿರುವ ಬಿ.ವೈ. ರಾಘವೇಂದ್ರ 2009 ರಲ್ಲಿ ಪ್ರಥಮ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪನವರನ್ನು ಸೋಲಿಸಿ ೧೫ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2014 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಇವರ ತಂದೆ ಬಿ.ಎಸ್. ಯಡಿಯೂರಪ್ಪ ಸಂಸದರಾಗಿದ್ದರು. ನಂತರ 2018ರ ಉಪಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ ಅವರನ್ನು ಸೋಲಿಸಿ ಮತ್ತೊಮ್ಮೆ ಸಂಸದರಾದರು. ಈ ಚುನಾವಣೆಯಲ್ಲಿ ರಾಘವೇಂದ್ರ 4,89,959 ಮತಗಳನ್ನು ಗಳಿಸಿದ್ದರು. ಶಿವಮೊಗ್ಗದ ಎಟಿಎಸ್‌ಸಿಸಿ ಕಾಲೇಜಿನಿಂದ ಬ್ಯುಸಿನೆಸ್ ಮ್ಯಾನೇಜಮೆಂಟ್‌ನಲ್ಲಿ ಪದವಿ ಶಿಕ್ಷಣ ಪಡೆದರು. ಪದವಿ ಶಿಕ್ಷಣದ ನಂತರ ಇವರು ಸ್ಥಳೀಯ ರಾಜಕಾರಣದತ್ತ ಹೆಚ್ಚು ಗಮನ ಹರಿಸಲಾರಂಭಿಸಿದರು.

ಮತ್ತಷ್ಟು ಓದು

ಬಿ.ವೈ. ರಾಘವೇಂದ್ರ ವಯಕ್ತಿಕ ಜೀವನ

ಪೂರ್ಣ ಹೆಸರು ಬಿ.ವೈ. ರಾಘವೇಂದ್ರ
ಜನ್ಮ ದಿನಾಂಕ 16 Aug 1973 (ವಯಸ್ಸು 52)
ಹುಟ್ಟಿದ ಸ್ಥಳ ಶಿಕಾರಿಪುರ, ಶಿವಮೊಗ್ಗ ಜಿಲ್ಲೆ (ಕರ್ನಾಟಕ)
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಕೃಷಿಕ, ಶಿಕ್ಷಣ ತಜ್ಞ, ಮತ್ತು ವ್ಯಾಪಾರಿ
ತಂದೆಯ ಹೆಸರು ಶ್ರೀ ಬೂಕನಕೆರೆ ಯಡಿಯೂರಪ್ಪ
ತಾಯಿಯ ಹೆಸರು ಶ್ರೀಮತಿ ಮೈತ್ರಿ ದೇವಿ
ಅವಲಂಬಿತರ ಹೆಸರು ಶ್ರೀಮತಿ ಆರ್. ತೇಜಸ್ವಿನಿ
ಅವಲಂಬಿತರ ಉದ್ಯೋಗ ಹೌಸ್ ವೈಫ್ ಹಾಗೂ ವ್ಯಾಪಾರೋದ್ಯಮಿ
ಮಕ್ಕಳು 2 ಪುತ್ರ(ರು)

ಬಿ.ವೈ. ರಾಘವೇಂದ್ರ ಒಟ್ಟು ಆಸ್ತಿ

ಒಟ್ಟು ಆಸ್ತಿ
₹29.23 CRORE
ಆಸ್ತಿ
₹29.74 CRORE
ಸಾಲಸೋಲ
₹51.66 LAKHS

ಬಿ.ವೈ. ರಾಘವೇಂದ್ರ ಕುರಿತು ಆಸಕ್ತಿದಾಯಕ ಸಂಗತಿಗಳು

2006 ರಲ್ಲಿ ಬಿ.ವೈ. ರಾಘವೇಂದ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದರು. ನಂತರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ತಮ್ಮ ತಂದೆ ಯಡಿಯೂರಪ್ಪನವರ ಬೆಂಬಲದಿಂದ ರಾಘವೇಂದ್ರ ಬಹು ಬೇಗನೆ ರಾಜಕೀಯ ಮುನ್ನೆಲೆಗೆ ಬಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ಬಿ.ವೈ. ರಾಘವೇಂದ್ರ ರಾಜಕೀಯ ಟೈಮ್‌ಲೈನ್

  • 2018 : 2018ರ ಲೋಕಸಭಾ ಉಪಚುನಾವಣೆಯಲ್ಲಿ ಬಂಗಾರಪ್ಪನವರ ಮಗ ಮಧು ಬಂಗಾರಪ್ಪ ಅವರನ್ನು 47,388 ಮತಗಳ ಅಂತರದಿಂದ ಸೋಲಿಸಿ ಸಂಸದರಾದರು.
  • 2009 : ಶಿಕಾರಿಪುರ ಕ್ಷೇತ್ರದ ಶಾಸಕರಾಗಿದ್ದ ತಂದೆ ಯಡಿಯೂರಪ್ಪನವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ನಡೆದ ಉಪ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ದೊಡ್ಡ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದರು.
  • 2009 : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರನ್ನು 52,893 ಮತಗಳ ಅಂತರದಿಂದ ಸೋಲಿಸಿ 15ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು.

ಬಿ.ವೈ. ರಾಘವೇಂದ್ರ ಸಾಧನೆಗಳು

ಪ್ರೇರಣಾ ಎಜ್ಯುಕೇಶನ್ ಆಫ್ ಸೈನ್ಸ್ ಮತ್ತು ಇನ್ಫರ್ಮೆಶನ್ ಟೆಕ್ನಾಲಜಿ (ಪೆಸಿಟ್) ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿಯಾದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+