Get Updates
Get notified of breaking news, exclusive insights, and must-see stories!

ಅರುಣ ಜೈಟ್ಲಿ

ಅರುಣ ಜೈಟ್ಲಿ
ಮೂಲತಃ ನ್ಯಾಯವಾದಿಯಾಗಿರುವ ಅರುಣ ಜೈಟ್ಲಿ ನಂತರ ರಾಜಕೀಯಕ್ಕೆ ಬಂದರು. ಪ್ರಸ್ತುತ ನರೇಂದ್ರ ಮೋದಿಯವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಇವರು, ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
By Shalini | Thursday, May 30, 2019, 03:45:57 PM [IST]

ಅರುಣ ಜೈಟ್ಲಿ ಜೀವನ ಚರಿತ್ರೆ

ಮೂಲತಃ ನ್ಯಾಯವಾದಿಯಾಗಿರುವ ಅರುಣ ಜೈಟ್ಲಿ ನಂತರ ರಾಜಕೀಯಕ್ಕೆ ಬಂದರು. ಪ್ರಸ್ತುತ ನರೇಂದ್ರ ಮೋದಿಯವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ಇವರು, ಹಣಕಾಸು ಹಾಗೂ ಕಾರ್ಪೊರೇಟ್ ವ್ಯವಹಾರಗಳ ಖಾತೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ರಾಜಕೀಯಕ್ಕೆ ಬರುವ ಮುನ್ನ ಸುಪ್ರೀಂ ಕೋರ್ಟಿನಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡಿದರು. ದೆಹಲಿ ಹೈಕೋರ್ಟಿನಿಂದ ಹಿರಿಯ ನ್ಯಾಯವಾದಿಯಾಗಿ ಇವರು ನಿಯೋಜಿಸಲ್ಪಟ್ಟಿದ್ದರು. 1975 ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದಾಗ ಅರುಣ ಜೈಟ್ಲಿ ಅದರ ವಿರುದ್ಧ ನಡೆದ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆಗ ಯುವ ಮೋರ್ಚಾ ಸಂಚಾಲಕರಾಗಿದ್ದ ಇವರನ್ನು ಅಂಬಾಲಾ ಜೈಲು ಹಾಗೂ ದೆಹಲಿಯ ತಿಹಾರ ಜೈಲುಗಳಲ್ಲಿ ಬಂಧಿಸಿ ಇಡಲಾಗಿತ್ತು. ಈ ಮುಂಚೆ ವಾಜಪೇಯಿಯವರ ಸಚಿವ ಸಂಪುಟದಲ್ಲಿ ಸಹ ಜೈಟ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಮೋದಿ ಅವರ ಸಂಪುಟದಲ್ಲಿ ರಕ್ಷಣಾ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಹ ನಿರ್ವಹಿಸಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ 2009 ರಿಂದ 2014 ರವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದಾರೆ.

ಮತ್ತಷ್ಟು ಓದು

ಅರುಣ ಜೈಟ್ಲಿ ವಯಕ್ತಿಕ ಜೀವನ

ಪೂರ್ಣ ಹೆಸರು ಅರುಣ ಜೈಟ್ಲಿ
ಜನ್ಮ ದಿನಾಂಕ 28 Dec 1952
ಮೃತಪಟ್ಟ ದಿನಾಂಕ 24 Aug 2019 (ವಯಸ್ಸು 66)
ಹುಟ್ಟಿದ ಸ್ಥಳ ಹೊಸದಿಲ್ಲಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಸುಪ್ರೀಂ ಕೋರ್ಟಿನಲ್ಲಿ ಹಿರಿಯ ನ್ಯಾಯವಾದಿ
ತಂದೆಯ ಹೆಸರು ಮಹಾರಾಜ ಕಿಶನ್ ಜೈಟ್ಲಿ
ತಾಯಿಯ ಹೆಸರು ಶ್ರೀಮತಿ ರತನ ಪ್ರಭಾ ಜೈಟ್ಲಿ
ಅವಲಂಬಿತರ ಹೆಸರು ಸಂಗೀತಾ ಡೋಗ್ರಾ
ಅವಲಂಬಿತರ ಉದ್ಯೋಗ N/A
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)
ವೆಬ್‌ಸೈಟ್ https://www.arunjaitley.com/

ಅರುಣ ಜೈಟ್ಲಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹104.82 CRORE
ಆಸ್ತಿ
₹113.02 CRORE
ಸಾಲಸೋಲ
₹8.2 CRORE

ಅರುಣ ಜೈಟ್ಲಿ ಕುರಿತು ಆಸಕ್ತಿದಾಯಕ ಸಂಗತಿಗಳು

ಬಂಡವಾಳ ಹಿಂತೆಗೆತ ರಾಜ್ಯದರ್ಜೆ ಸಚಿವರನ್ನಾಗಿ ಇವರನ್ನು ನೇಮಿಸಿದ ಸಂದರ್ಭದಲ್ಲಿ ಆ ಖಾತೆಯನ್ನು ಹೊಸದಾಗಿ ರಚಿಸಲಾಗಿತ್ತು. ಜುಲೈ 2002 ರಲ್ಲಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರಗಳ ಪುನರ್ವಿಂಗಡಣೆ ಮಾಡುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ಸರಕಾರದ ಪ್ರತಿನಿಧಿಗಳು ಹಾಗೂ ಇತರ ಗುಂಪಿನ ನಾಯಕರೊಂದಿಗೆ ಚರ್ಚಿಸಲು ಕೇಂದ್ರ ಸರಕಾರದ ಪ್ರತನಿಧಿಯನ್ನಾಗಿ ಇವರನ್ನು ನೇಮಿಸಲಾಗಿತ್ತು. ಅರುಣ ಜೈಟ್ಲಿ ಇವರೆಗೂ ಲೋಕಸಭಾ ಚುನಾವಣೆಯಲ್ಲಿ ಜಯ ಸಾಧಿಸಿಲ್ಲ.

ಅರುಣ ಜೈಟ್ಲಿ ಸಾಧನೆಗಳು

2010 ರಲ್ಲಿ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿಗೆ ಭಾಜನರಾಗಿದ್ದಾರೆ. 1998ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸರಕಾರದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಡ್ರಗ್ಸ್ ಹಾಗೂ ಅಕ್ರಮ ಹಣ ಸಾಗಾಟ ತಡೆಗಟ್ಟುವ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+