ಮುಖ್ಯಪುಟ
 » 
ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಆರಗ ಜ್ಞಾನೇಂದ್ರ

ಕರ್ನಾಟಕದ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್.

ಆರಗ ಜ್ಞಾನೇಂದ್ರ ಜೀವನ ಚರಿತ್ರೆ

ಕರ್ನಾಟಕದ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೊಂದಿಗೆ ಸಮಕಾಲೀನವಾಗಿ ರಾಜಕಾರಣದ ಒಡನಾಡಿಯಾಗಿ ಬೆಳೆದವರು ಆರಗ ಜ್ಞಾನೇಂದ್ರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಪ್ರಭಾವಿ ಗೃಹ ಖಾತೆ ಸಚಿವರು.

ಸುಮಾರು 45 ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ ಶಿಸ್ತಿನ ಸಿಪಾಯಿ. ರಾಜಕೀಯ ಏಳುಬೀಳು ಕಂಡರೂ ಎಂದೂ ಸಹ ಪಕ್ಷ ಹಾಕಿದ ಗೆರೆ ದಾಟದ ನಾಯಕ. 9 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ 5 ಬಾರಿ ಸೋತವರು ಆರಗ ಜ್ಞಾನೇಂದ್ರ.

ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳಾಗಿಸಿದ ಸರಳ ವ್ಯಕ್ತಿತ್ವದ ನಾಯಕ. 2013ರ ವಿಧಾನಸಭೆ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಸೋತಿದ್ದರು. ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಕಿಮ್ಮನೆ ಸೋಲಿಸಿ ಆರಗ ಜ್ಞಾನೇಂದ್ರ 4ನೇ ಬಾರಿಗೆ ಶಾಸಕರಾದರು.

ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ಸಂಪರ್ಕಕ್ಕೆ ಬಂದ ಆರಗ ಜ್ಞಾನೇಂದ್ರ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಸೆರೆವಾಸವನ್ನು ಸಹ ಜ್ಞಾನೇಂದ್ರ ಅನುಭವಿಸಿದ್ದಾರೆ. ಆಗ ಜೈಲುವಾಸ ಅನುಭವಿಸಿದರು ಈಗ ಗೃಹ ಖಾತೆಯ ಸಚಿವರು.

ಮತ್ತಷ್ಟು ಓದು
By Moumi Majumdar Updated: Friday, August 26, 2022, 02:59:25 PM [IST]

ಆರಗ ಜ್ಞಾನೇಂದ್ರ ವಯಕ್ತಿಕ ಜೀವನ

ಪೂರ್ಣ ಹೆಸರು ಆರಗ ಜ್ಞಾನೇಂದ್ರ
ಜನ್ಮ ದಿನಾಂಕ 15 Mar 1953 (ವಯಸ್ಸು 71)
ಹುಟ್ಟಿದ ಸ್ಥಳ ತೀರ್ಥಹಳ್ಳಿ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ B. Com State college of Shimoga 1971-1974
ಉದ್ಯೋಗ ಕೃಷಿ
ತಂದೆಯ ಹೆಸರು ರಾಮಣ್ಣ ಗೌಡ
ತಾಯಿಯ ಹೆಸರು ಚಿನ್ನಮ್ಮ
ಧರ್ಮ ಹಿಂದು
ಜಾತಿ ಒಕ್ಕಲಿಗ
ವೆಬ್‌ಸೈಟ್ home.karnataka.gov.in
ಸಾಮಾಜಿಕ ಜಾಲತಾಣದ ವಿಳಾಸ ಸಾಮಾಜಿಕ ಜಾಲತಾಣದ ವಿಳಾಸ:

ಆರಗ ಜ್ಞಾನೇಂದ್ರ ಒಟ್ಟು ಆಸ್ತಿ

ಒಟ್ಟು ಆಸ್ತಿ: ₹6.23 CRORE
ಆಸ್ತಿ:₹6.29 CRORE
ಸಾಲಸೋಲ: ₹6 LAKHS

ಆರಗ ಜ್ಞಾನೇಂದ್ರ ಕುರಿತು ಆಸಕ್ತಿದಾಯಕ ಸಂಗತಿಗಳು

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 6 ತಿಂಗಳು ಸೆರೆವಾಸ ಅನುಭವಿಸಿದ ಆರಗ ಜ್ಞಾನೇಂದ್ರ ಈಗ ಗೃಹ ಖಾತೆಯ ಸಚಿವರು

ಜನರ ಜೊತೆ ಸದಾ ಬೆರೆಯುವವರು. ಸುಲಭವಾಗಿ ಜನರಿಗೆ ಸಿಗುತ್ತಾರೆ.

1983ರಲ್ಲಿ ಬಿ. ಎಸ್. ಯಡಿಯೂರಪ್ಪ ಜೊತೆ ಚುನಾವಣೆಗೆ ಸ್ಪರ್ಧಿಸಿದ ನಾಯಕರಲ್ಲಿ ಆರಗ ಜ್ಞಾನೇಂದ್ರ ಸಹ ಒಬ್ಬರು.

ತೀರ್ಥಹಳ್ಳಿಯಲ್ಲಿ ಒಮ್ಮೆ ಗೆದ್ದವರು ಮತ್ತೆ ಗೆಲ್ಲುವುದಿಲ್ಲ ಎಂಬುದನ್ನು ಸುಳ್ಳು ಮಾಡಿ ನಾಲ್ಕು ಬಾರಿ ಗೆಲವು ಸಾಧಿಸಿದ್ದಾರೆ.

ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷರಾಗಿ, ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಣೆ

ಆರಗ ಜ್ಞಾನೇಂದ್ರ ರಾಜಕೀಯ ಟೈಮ್‌ಲೈನ್

2021
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸೇರ್ಪಡೆ. ಗೃಹ ಖಾತೆಯ ಹೊಣೆ
2018
  • 67,527 ಮತಗಳನ್ನು ಪಡೆದು ಗೆಲುವು. ರಾಜ್ಯ ಅಡಿಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷ, ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ ನೇಮಕ
2013
  • 34,446 ಮತಗಳನ್ನು ಪಡೆದು ಕಾಂಗ್ರೆಸ್‌ನ ಕಿಮ್ಮನೆ ರತ್ನಾಕರ್ ವಿರುದ್ಧ ಸೋಲು.
2009
  • ಎಂಪಿಎಂ ಅಧ್ಯಕ್ಷರಾಗಿ ನೇಮಕ
1994
  • ಮೊದಲ ಬಾರಿಗೆ ಡಿ. ಬಿ. ಚಂದ್ರೇಗೌಡರನ್ನು ಸೋಲಿಸಿ ಶಾಸಕರಾಗಿ ಆಯ್ಕೆ. 1999ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಅವಕಾಶ ನಿರಾಕರಿಸಿದರು.
1989
  • ಚುನಾವಣೆಯಲ್ಲಿ ಸೋತ ಆರಗ ಜ್ಞಾನೇಂದ್ರ ಶಿವಮೊಗ್ಗ ಬಿಜೆಪಿ ಅಧ್ಯಕ್ಷರಾದರು.
1983
  • ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ 2 ಸಾವಿರ ಮತಗಳ ಅಂತರದಿಂದ ಸೋಲು. 1985, 1989ರ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಸೋಲು.

Disclaimer: The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X