ಮೊದಲ ರಾತ್ರಿ ಸುಬ್ಬು ಏನ್ ಮಾಡಿದ ಗೊತ್ತಾ?

ಇಂತಹ ಘನಂಧಾರಿ ಸುಬ್ಬ, ಮಾವನ ಮನೆಗೆ ಬರುತ್ತಿರುವ ವಿಷಯ ಟೆಲಿಪತಿಯಂತೆ ಮನೆಯಲ್ಲಿನ ಎಲ್ಲರಿಗೂ ಅರಿವಾಗಿತ್ತು. ಅಳಿಯ ವಾಸನೆ... ಎರಡನೇ ದೀಪಾವಳಿಗೆ ಬರುತ್ತಿರುವುದೇನೋ ನಿಜ ಆದರೆ ಇನ್ನೂ ಹಬ್ಬ ಎಲ್ಲೋ ಇದೆ, ಈಗಲೇ ಬಂದರೆ ಸುಧಾರಿಸುವುದೆಂತು? ಎಡವಿದ್ದೆಲ್ಲಿ? ತಾಯಿ-ಮಗಳು ರಾಯರ ಕಡೆ ನೋಡಿದರು. ಇವರು ಕಾಗದ ಬರೆಯುತ್ತೇನೆ ಎಂದು ತಿಳಿಸಿದ್ದರು, ಅಷ್ಟೆ.
ಕಾಗದ ಎಂದ ಮೇಲೆ ನೆನಪಿಗೆ ಬಂತು ನೋಡಿ ಮಾವ-ಅಳಿಯ ಪ್ರಸಂಗ. ಹಿಂದೊಮ್ಮೆ ಕಾಗದದ ಬಗ್ಗೆ ವಿಷಯ ಬಂದಾಗ ಸುಬ್ಬ ಮಾವನಿಗೆ ಹೇಳಿದ್ದ "ನೀವು ಕಾಗದ ಅಂತ ಬರೆದು ಹಾಕಬೇಡಿ. ಸುಮ್ಮನೆ ಯಾರ್ಯಾರೋ ಮುಟ್ಟಿ ಎಂಜಲು ಕೈಯಲ್ಲೇ ತಂದುಕೊಡ್ತಾರೆ. ಯಾರೂ ಕೈಯಿಂದ ಮುಟ್ಟದೆ ಮಡಿ ಮಡಿಯಾಗಿ ನನಗೆ ವಿಷಯ ಈಮೈಲ್ ಮಾಡಿ" ಎಂದಿದ್ದ!
ಕೆಲವು ವಿಷಯದಲ್ಲಂತೂ ನಮ್ ಸುಬ್ಬ ಅತೀ ಜಾಣ. ಈಮೈಲ್ ಸಂದೇಶ ಶುದ್ದ ಮಡಿ ಅಂತ ರಾಯರಿಗೆ ಆಗಲೇ ಮನವರಿಕೆಯಾಗಿದ್ದು. ಅದಕ್ಕಿಂತಲೂ, ಸುಬ್ಬನಿಗೆ ಈಮೈಲ್ ಹೇಗೆ ಓದಬೇಕೂ ಅಂತ ಅರಿವಿದೆಯೋ ಇಲ್ಲವೋ ಎಂದೇ ಅವರು ಕಾಗದ ಎಂದು ಅಂದುಕೊಂಡಿದ್ದರು ಎಂಬುದು, ಎಲ್ಲರಿಗೂ ಅರಿವಿದ್ದ ಸಿಕ್ಕಾಪಟ್ಟೆ ರಹಸ್ಯವಾದ ಮಾತು.
ಇಷ್ಟಕ್ಕೂ ಈಮೈಲ್ ನಲ್ಲಿ ಸುಬ್ಬನಿಗೆ ಕನ್ಫ಼್ಯೂಸ್ ಆಗುವಂಥದ್ದೇನಿತ್ತೋ ಗೊತ್ತಿಲ್ಲ, ಇಷ್ಟು ಬೇಗ ಬಂದು ವಕ್ಕರಿಸಲು. ಕಳೆದ ವರ್ಷ ಹೀಗೇ ಆಯ್ತು. ಅಳಿಯ-ಮಗಳನ್ನು ಹಬ್ಬಕ್ಕೆ ಆಹ್ವಾನಿಸುವ ಸಲುವಾಗಿ ರಾಯರು ಮೈಲ್ ಬರೆದು ಕಡೆಯಲ್ಲಿ "ನಿಮ್ಮಗಳ ಕ್ಷೇಮಕ್ಕೆ ಕರೆ ಅಥವಾ ಈಮೈಲ್ ಮಾಡಿ" ಎಂದು ಸಾಂಪ್ರದಾಯಿಕವಾಗಿ ಬರೆದಿದ್ದರು.
ದೀಪಾವಳಿಗೆ ಬಂದ ಸುಬ್ಬ "ಮಾವಾ, ನಿಮಗೆ ಇಷ್ಟು ಬೇಗ ಅರುಳು-ಮರಳು ಆದ ಹಾಗಿದೆ. ನಿಮ್ಮಗಳು ಅಂತ ಬರೆದಿದ್ದೀರಿ ಈಮೈಲ್ ನಲ್ಲಿ. ಇವಳು ನನ್ನ ಮಗಳಲ್ಲ, ನನ್ ಹೆಂಡತಿ. ಇವಳು ನಿಮ್ಮ ಮಗಳು" ಅಂತ ಪೆಕರು ಪೆಕರಾಗಿ ನಕ್ಕಿದ್ದ. ರಾಯರಿಗೆ ಆಗ ಅರಿವಾಗಿತ್ತು "ನಿಮ್ಮಗಳ" ಅನ್ನೋದನ್ನು ಸುಬ್ಬ "ನಿಮ್ಮ ಮಗಳ" ಅಂತ ಅರ್ಥೈಸಿಕೊಂಡಿದ್ದ. ಅಂದಿನಿಂದ ರಾಯರು ತಮ್ಮ ಅರ್ಥಕೋಶದಿಂದ ಆ ಪದವನ್ನೇ ತೆಗೆದುಹಾಕಿದ್ದರು.
ರಾಮುವಿಗೆ ಜೀವನದಲ್ಲೇ ಪ್ರಥಮ ಬಾರಿ ಭಯಂಕರ ಅನುಭವವಾಗಿದ್ದೂ ಕಳೆದ ದೀಪಾವಳಿಯಲ್ಲೇ. ಭಾವನನ್ನು ಸ್ವಾಗತಿಸಲು ಬಾಗಿಲಿಗೆ ಬಂದವನಿಗೆ "ಏನೋ ರಾಮೂ, ಕುಳ್ಳಗಾಗಿ ಬಿಟ್ಟಿದ್ದೀಯಾ" ಅನ್ನೋದೇ? ರಾಮುವಿಗೆ ತಬ್ಬಿಬ್ಬು. ಅದಕ್ಕೆ ರಾಧಾ "ಹಾಗೇನಿಲ್ಲಾರೀ, ನಮ್ ರಾಮೂ ದಪ್ಪ ಆಗಿರೋದ್ರಿಂದ ಎತ್ತರ ಕಡಿಮೆ ಕಾಣ್ತಿದ್ದಾನೆ ಅಷ್ಟೇ" ನುಡಿದ್ದಳು. ರಾಮೂ ಸೈಲೆಂಟಾಗಿ ಜಾಗ ಖಾಲಿ ಮಾಡಿದ್ದ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications