ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾವೇರಿ: ರೈತನ ಮೇಲೆ ಹೆಚ್ಚುವರಿ ಜಿಲ್ಲಾಧಿಕಾರಿ ಹಲ್ಲೆ ಆರೋಪ, ಪ್ರತಿಭಟನೆ
ಹಾವೇರಿ, ಜನವರಿ 01: ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ರೈತನ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ರೈತ ಸಂಘದ ವತಿಯಿಂದ ಹಾವೇರಿ ಜಿಲ್ಲಾ ಬಸ್ ನಿಲ್ದಾಣದ ಎದುರು ರಸ್ತೆ ತಡೆ ನಡೆಸಲಾಯಿತು.
ತಾಲ್ಲೂಕಿನಲ್ಲಿ ಆಕ್ರಮ ಮರಳುಗಾರಿಕೆಯನ್ನ ತಡೆಯವಂತೆ ಎ.ಸಿಗೆ ಮನವಿ ಮಾಡಲು ರೈತ ಶಂಕರಗೌಡ ಗಣಗನಗೌಡ್ರ ಎಂಬ ರೈತ ಹೋಗಿದ್ದಾರೆ. ಈ ಸಮಯದಲ್ಲಿ ಅನವಶ್ಯಕವಾಗಿ ಕೆರಳಿದ ಎ.ಸಿ.ಲೋಕೇಶ್ ಅವರು ರೈತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಅಷ್ಟೆ ಅಲ್ಲದೆ ತಾನು ಹಲ್ಲೆ ನಡೆಸಿ ರೈತ ಶಂಕರಗೌಡನೇ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸುಳ್ಳು ಕೇಸನ್ನು ಲೋಕೇಶ್ ದಾಖಲು ಮಾಡಿದ್ದಾರೆ ಎಂದು ರೈತರ ಆರೋಪ ಮಾಡಿದ್ದಾರೆ.
ಕೂಡಲೆ ರೈತನ ಮೆಲೆ ದಾಖಲಾದ ಕೇಸ್ ಅನ್ನು ವಾಪಸ್ ತೆಗೆದುಕೊಳ್ಳಬೇಕು ಹಾಗೂ ಎ.ಸಿ. ಲೋಕೇಶ್ ಅವರು ರೈತನ ಕ್ಷಮೆ ಕೇಳಬೇಕು ಎಂದು ರೈತರು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ.
English summary
Farmers in Haveri Protesting against AC Lokesh for manhandling Farmer Shankar Gowda while he was visited Lokesh to request to stop illegal sand mining.
Story first published: Monday, January 1, 2018, 17:29 [IST]