Get Updates
Get notified of breaking news, exclusive insights, and must-see stories!

ಮತದಾರ ಕಳುಹಿಸಿದ ಆ ಒಂದು ಫೋಟೋ: ಮಾಜಿ ಸಿಎಂ ಭಾವುಕ

ಬೆಂಗಳೂರು, ಏಪ್ರಿಲ್ 12: ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ. ಮತದಾರರು ಆದ ಪಕ್ಷ ಕಾರ್ಯಕರ್ತನೊಬ್ಬ ಕಳುಹಿಸಿ ಆ ಫೋಟೋ ನೋಡಿ ತಂದೆ ಮತ್ತು ತಮ್ಮ ಕಾರ್ಯಗಳನ್ನು ನೆನೆದು ಕ್ಷಣಕಾಲ ಭಾವುಕರಾದ ಘಟನೆ ನಡೆಯಿತು.

ಮತದಾರರೊಬ್ಬರು ಕಳುಹಿಸಿ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಇದೊಂದು ಅತ್ಯಂತ ಭಾವನಾತ್ಮಕ ಸನ್ನಿವೇಶ ಎಂದು ಬಿಜೆಪಿ ಮಾಜಿ ಮುಖ್ಯಮಂತ್ರಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ತಂದೆ ನೆನಪಿಸಿಕೊಂಡು ಭಾವುಕರಾದರು.

The former CM Basavaraj Bommai Emotional After See Photo sent By Worker

ಕಾರ್ಯಕರ್ತ ಕಳಹಿಸಿದ ಫೋಟೋದಲ್ಲೇನಿದೆ?

ಕ್ಷೇತ್ರದ ಗದಗ-ಬೆಟಗೇರಿ ನಗರದ ಕಾರ್ಯಕರ್ತರೊಬ್ಬರು ನಾಮಫಲಕದ ಫೋಟೋ ಅನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಳುಹಿಸಿದ್ದಾರೆ. ಅದನ್ನು ನೋಡಿ ಪೋಸ್ಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ''ನನ್ನ ಪ್ರಾತಃ ಸ್ಮರಣೀಯ ಪೂಜ್ಯ ತಂದೆಯವರಾದ ಎಸ್. ಆರ್. ಬೊಮ್ಮಾಯಿಯವರು 1983ರಲ್ಲಿ ಗದಗ-ಬೆಟಗೇರಿಯ ನೇಕಾರ ಕಾಲೋನಿಯಲ್ಲಿನ ವಸತಿಗೃಹದ ಉದ್ಘಾಟನೆ ನೆರವೇರಿಸಿದ್ದರು. ಅದರ ನಾಮಫಲಕವನ್ನು ನೋಡಿ, ಪೂಜ್ಯ ತಂದೆಯವರ ಅಭಿವೃದ್ಧಿ ಕಾರ್ಯಗಳೆಲ್ಲವೂ ಕಣ್ಣ ಮುಂದೆ ಬಂದಿತು'' ಎಂದು ಬರೆದುಕೊಂಡಿದ್ದಾರೆ.

ನೇಕಾರ ಸಮುದಾಯದ ಮೇಲೆ ವಿಶೇಷ ಕಾಳಜಿ

ತಂದೆಯವರು ನೇಕಾರ ಸಮುದಾಯ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.

ಕುಶಲಕರ್ಮಿಗಳಾದ ನೇಕಾರ ಸಮುದಾಯದವರ ಮೇಲೆ ನನ್ನ ತಂದೆಯವರಿಗೆ ವಿಶೇಷ ಮಮತೆಯಿತ್ತು. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಂದರ್ಭದಲ್ಲಿ ರೈತರ ಮಕ್ಕಳಿಗೆಂದು ಸ್ಥಾಪಿತವಾಗಿದ್ದ 'ರೈತ ವಿದ್ಯಾನಿಧಿ ಯೋಜನೆ'ಯನ್ನು ನೇಕಾರರ ಮಕ್ಕಳಿಗೂ ಸಹ ವಿಸ್ತರಿಸಿದ್ದೆ ಎಂದು ಅವರು ತಿಳಿಸಿದರು.

ಇಷ್ಟೆಲ್ಲಾ ಮಧುರ ಸವಿ ನೆನಪುಗಳನ್ನು ಪುನರ್ ನೆನಪಿಸಿದ ಆ ನಾಮಫಲಕಕ್ಕೆ ಹಾಗೂ ಸೇವೆ ಮಾಡಲು ಅವಕಾಶ ಕಲ್ಪಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದಿಂದ ಧನ್ಯವಾದ ಅವರು ಬೊಮ್ಮಾಯಿಯವರು ತಿಳಿಸಿದರು.

The former CM Basavaraj Bommai Emotional After See Photo sent By Worker

ಹಾವೇರಿ-ಗದಗ ಕ್ಷೇತ್ರದಲ್ಲಿ ಬೊಮ್ಮಾಯಿ ಮತಯಾಚನೆ

ಕರ್ನಾಟಕದ 4ನೇ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ಎಸ್‌.ಆರ್ ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ 1996ರಲ್ಲಿ ಸೇವೆ ನೀಡಿದವರು. ಉತ್ತರ ಕರ್ನಾಟಕ ಭಾಗದ ಜನರಪರ ಧ್ವನಿಯಾಗಿದ್ದವರು. ಅವರ ಪುತ್ರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗದಗ ಬೆಟಗೇರಿ ಭಾಗದಲ್ಲಿ ಮತಯಾಚನೆ ಮಾಡುವಾಗಿ ತಂದೆಯವರ ಸಾಧನೆ ಫೋಟೊ ಮೂಲಕ ಸ್ಮರಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಕಳೆದ ಎರಡು ವಾರದಿಂದ ಬಸವರಾಜ ಬೊಮ್ಮಾಯಿ ಅವರು ಹಾವೇರಿ, ಗದಗ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬಿಸಿಲು ಲೆಕ್ಕಿಸದೇ ಗ್ರಾಮಗ್ರಾಮಗಳಲ್ಲಿಯೋ ಓಡಾಡಿ ರೋಡ್ ಶೋ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+