Get Updates
Get notified of breaking news, exclusive insights, and must-see stories!

ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ

ಧಾರವಾಡ, ಏಪ್ರಿಲ್ 25: ಕರ್ನಾಟಕಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಭೇಟಿ ನೀಡಿದ್ದರು. ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಧಾರವಾಡದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ವಸೂಲಿ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಕರ್ನಾಟಕಕ್ಕೆ ರಣದೀಪ್ ಸುರ್ಜೆವಾಲಾ ಅವರು ಬಂದು ಹೋಗಿದ್ದರು. ಹುಬ್ಬಳ್ಳಿಯಲ್ಲಿ ಕೊಲೆಯಾದ ನೇಹಾ ಹಿರೇಮಠ ಅವರ ನಿವಾಸಕ್ಕೆ ಭೇಟಿಯಾಗಿ ಬಿಜೆಪಿ ವಿರುದ್ಧ ಗುಡುಗಿದ್ದರು. ಮಗಳ ಕಳೆದುಕೊಂಡ ನಿರಂಜನ್ ಹಿರೇಮಠ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.

Pralhad Joshi Alleges of Congress Randeep Singh Surjewala Visit To Karnataka for Collect Money

ಇದೀಗ ಸುರ್ಜೆವಾಲ ರಾಜ್ಯ ಭೇಟಿ ಬಗ್ಗೆ ಮಾತನಾಡಿರುವ ಪ್ರಹ್ಲಾದ್ ಜೋಶಿಯವರು, ಅವರು ರಾಜ್ಯಕ್ಕೆ ಕಾಂಗ್ರೆಸ್‌ನ ವಸೂಲಿಗಾಗಿ ಬಂದಿದ್ದರು. ಕರ್ನಾಟಕದಿಂದ ತೆಗೆದುಕೊಂಡು ಹೋಗಿ ಬೇರೆ ಕಡೆ ಕೊಡುತ್ತಾರೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್‌ನವರಿಗೆ ಕರ್ನಾಟಕವೇ ಎಟಿಎಂ

ಕಾಂಗ್ರೆಸ್‌ನವರಿಗೆ ಇರೋದೆ ಕರ್ನಾಟಕವೊಂದೆ. ಅವರಿಗೆ ಕರ್ನಾಟಕವೇ ಎಟಿಎಂ. ಅವರು ನಮ್ಮ ಡಿಎನ್ಎ ಬಗ್ಗೆ ಪ್ರಶ್ನೆ ಮಾತನಾಡುತ್ತಾರೆ. ಕಾಂಗ್ರೆಸ್‌ನವರ ತುಷ್ಠೀಕರಣ ಪರಿಣಾಮವಾಗಿಯೇ ಹುಬ್ಬಳ್ಳಿಯಲ್ಲಿ ನೇಹಾಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

Pralhad Joshi Alleges of Congress Randeep Singh Surjewala Visit To Karnataka for Collect Money

ನೇಹಾ ಕೊಲೆ ಬಳಿಕ ಸರ್ಕಾರದ ವಿರುದ್ಧ ಜನರೇ ನಿಂತು ಹೋರಾಟ ಮಾಡಿದ್ದಾರೆ. ಪ್ರತಿಭಟನೆ, ಆಕ್ರೋಶ ಹೆಚ್ಚಾಗುತ್ತಿದ್ದಂತೆ ನೇಹಾ ಹಿರೇಮಠ ಪರ ಕಾಂಗ್ರೆಸ್‌ನವರು ಒಬ್ಬೊಬ್ಬರಾಗೇ ಹೊರ ಬಂದರು. ಕೊಲೆ ಜೊತೆಗೆ ದಲಿತ ವ್ಯಕ್ತಿ ಮೇಲೆಯೂ ಹಲ್ಲೆ ಆಗಿದೆ. ಅಲ್ಲಿ ಕಾಂಗ್ರೆಸ್‌ನವರು ಸಿಂಪಥಿ ತೋರುತ್ತಿಲ್ಲ. ಏಕೆಂದರೆ ಅಲ್ಲಿ ಹೋರಾಟ ಆಗುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರ ನಡೆ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು.

ದಲಿತನ ಮೇಲೆ ಹಲ್ಲೆಯಾದರೂ ಸ್ಪಂದಿಸದ ಕಾಂಗ್ರೆಸ್

ದಲಿತನ ಮೇಲೆ ಹಲ್ಲೆ ನಡೆದರೂ ಅಲ್ಲಿ ಪ್ರತಿಭಟನೆ ಆಗಿಲ್ಲ. ಅಂದರೆ ಅಲ್ಲಿ ಏನು ಆಗಿಲ್ಲ ಎಂದುಕೊಂಡಿದ್ದಾರೆ. ನೇಹಾ ಕೊಲೆ ವಿಚಾರದಲ್ಲಿ ವಿವಿಧ ಸಂಘಟನೆಯವರು, ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡಿಕ್ಕೆ ಇಲ್ಲಿ ಸ್ಪಂದಿಸಿದ್ದಾರೆ. ಇದು ಕಾಂಗ್ರೆಸ್‌ನ ದ್ವಿಮುಖ ನೀತಿ ಎಂದು ಹೇಳಿದರು.

ಚೊಂಬು ಟೀಕೆಗೆ ಜೋಶಿ ತಿರುಗೇಟು

ಇಡೀ ದೇಶದಲ್ಲಿ ಸರ್ಕಾರ ರಚನೆ ಮಾಡಬೇಕಾದರೆ ಒಟ್ಟು 272 ಸ್ಥಾನಗಳು ಬೇಕು. ಇವರು ಸ್ಪರ್ಧಿಸಿರುವುದೇ 230 ಸ್ಥಾನಗಳಲ್ಲಿ. ಇಂತವರು ಇದೀಗ ಚೊಂಬು ಹಿಡಿದು ನಿಂತಿದ್ದಾರೆ. ಪ್ರಧಾನಿ ಮೋದಿಯವರು ಬರುವ ಮೊದಲು ಕಾಂಗ್ರೆಸ್ ನವರು ಚೊಂಬು ಹಿಡಿದು ಹೋಗುತ್ತಿದ್ದರು. ಪ್ರಧಾನಿ ಮೋದಿ ಬಂದ ಬಳಿಕ ಅದನ್ನು ನಿಲ್ಲಿಸಿದ್ದಾರೆ ಎಂದು ವ್ಯಂಗ್ಯವಾಡಿದರು.'

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ 12 ಕೋಟಿಗಿಂತ ಹೆಚ್ಚು ಶೌಚಾಲಯ ಕಟ್ಟಿಸಿ ಕೊಟ್ಟಿದ್ದೇವೆ. ಹೀಗಿದ್ದರೂ ಕಾಂಗ್ರೆಸ್‌ನವರು ಚೊಂಬು ಹಿಡಿದು ಹೊರಟಿದ್ದಾರೆ ಎಂದು ಅವರು ಕಾಂಗ್ರೆಸ್‌ನ ಚೊಂಬು ಟೀಕೆಗೆ ತಿರುಗೇಟು ಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+