ಈ ಸೀಸನ್ ಕೆಬಿಸಿಯಲ್ಲಿ ಸ್ಪರ್ಧಿ ಧುಲಿಚಂದ್ಗೆ ಸಿಕ್ಕ 50 ಲಕ್ಷದ ಪ್ರಶ್ನೆ
ಕೌನ್ ಬನೇಗಾ ಕರೋಡ್ಪತಿ ಕಿರುತೆರೆಯಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು. ಈಗ 14ನೇ ಸೀಸನ್ ಬಹಳ ರೋಚಕ ಆರಂಭ ಪಡೆದುಕೊಂಡಿದೆ.
ನಟ ಅಮೀರ್ ಖಾನ್, ಬಾಕ್ಸಿಂಗ್ ಪಟು ಮೇರಿ ಕೋಮ್, ಫುಟ್ಬಾಲ್ ಆಟಗಾರ ಸುನೀಲ್ ಛೇಟ್ರಿ, ಶೌರ್ಯ ಪ್ರಶಸ್ತಿ ವಿಜೇತೆ ಮಿಥಾಲಿ ಮಧುಮಿತಾ ಮತ್ತು ಬ್ಲೇಡ್ ರನ್ನರ್ ಮೇಜರ್ ಡಿಪಿ ಸಿಂಗ್ ಮೊದಲಾದ ಸೆಲಬ್ರಿಟಿಗಳೊಂದಿಗೆ 14ನೇ ಸೀಸನ್ ಆರಂಭಗೊಂಡಿದೆ.
ಸೋಮವಾರ ಎರಡನೇ ಎಪಿಸೋಡ್ ಪ್ರಸಾರವಾಯಿತು. ಮುಂಬೈನ ದುಲಿಚಂದ್ ಹಾಟ್ ಸೀಟ್ನಲ್ಲಿ ಕೂತ ಪ್ರಶ್ನೆಗಳನ್ನು ಸರಾಗವಾಗಿ ಎದುರಿಸಿದರು. ಈಗಾಗಲೇ 50 ಲಕ್ಷ ರೂ ಗೆದ್ದಿದ್ದಾರೆ. ಇಂದು ಮಂಗಳವಾರ ಅವರ ಸ್ಪರ್ಧೆ ಮುಂದುವರಿಯಲಿದೆ.
ಧುಲಿಚಂದ್ ಅಗರ್ವಾಲ್ ಈ ಸೀಸನ್ನ ಕೆಬಿಸಿ ಮೊದಲ ಸ್ಪರ್ಧಿ. ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಮಾಡಿರುವ ಅವರು ಮಧ್ಯಪ್ರದೇಶದ ದುರ್ಗ್ನಲ್ಲಿ ಅವರು ಕಾಲೇಜು ಪ್ರೊಫೆಸರ್ ಆಗಿದ್ದಾರೆ. 50 ಲಕ್ಷದವರೆಗೂ ಆಡಿರುವ ಅವರು ಎಲ್ಲಾ ಲೈಫ್ಲೈನ್ ಬಳಸಿಯಾಗಿದೆ. ಇಂದು ಮಂಗಳವಾರ ಪ್ರಸಾರವಾಗುವ ಮೂರನೇ ಎಪಿಸೋಡ್ನಲ್ಲಿ ಅವರು 75 ಲಕ್ಷ ರೂ ಪ್ರಶ್ನೆ ಹೇಗೆ ಎದುರಿಸುತ್ತಾರೆ ಎಂದು ಗೊತ್ತಾಗುತ್ತದೆ.
ಧುಲಿಚಂದ್ ಅಗರ್ವಾಲ್ 50 ಲಕ್ಷದವರೆಗೆ ಎಂಟು ಪ್ರಶ್ನೆಗಳನ್ನು ಎದುರಿಸಿ ಸರಿ ಉತ್ತರ ಕೊಟ್ಟಿದ್ಧಾರೆ. ಆ ಪ್ರಶ್ನೆಗಳ ವಿವರ ಇಲ್ಲಿದೆ.

ಪ್ರಶ್ನೆ 1: 40 ಸಾವಿರ ರೂ
ರಣತಂಬೂರ್ನ ರಾಣಿ ಎಂದು ಹೆಸರಾದ 'ಮಛಲಿ' ಯಾವ ಜಾತಿಯ ಪ್ರಾಣಿ?
ಎ. ಮೀನು
ಬಿ. ನವಿಲು
ಸಿ. ಜಿಂಕೆ
ಡಿ. ಹುಲಿ
ಉತ್ತರ: ಹುಲಿ
ಪ್ರಶ್ನೆ 2: 80 ಸಾವಿರ ರೂ
ಹಿಂಜ್, ಪೈವೊಟ್, ಹಾಗೂ ಬಾಲ್ ಮತ್ತು ಸಾಕೆಟ್, ಇವು ನಿಮ್ಮ ದೇಹದ ಯಾವ ಭಾಗಕ್ಕೆ ಸಂಬಂಧಿಸಿದವು.
ಎ. ಕೀಲು
ಬಿ. ಹೃದಯ ಕವಾಟ
ಸಿ. ನರ ಸಂಪರ್ಕ
ಡಿ. ನರ
ಉತ್ತರ: ಕೀಲು

ಪ್ರಶ್ನೆ 3: 1.6 ಲಕ್ಷ ರೂ
ಜುಲೈ 2022ರಂದು ಪರಮೇಶ್ವರನ್ ಅಯ್ಯರ್ ಯಾವ ಸರಕಾರಿ ಸಂಸ್ಥೆಯ ಸಿಇಒ ಆದರು?
ಎ. ಮೇಕ್ ಇನ್ ಇಂಡಿಯಾ
ಬಿ. ನೀತಿ ಆಯೋಗ್
ಸಿ. ಡಿಜಿಟಲ್ ಇಂಡಿಯಾ
ಡಿ. ಸಿಬಿಐ
ಉತ್ತರ: ನೀತಿ ಆಯೋಗ್
ಪ್ರಶ್ನೆ 4: 3.2 ಲಕ್ಷ ರೂ
ಭಾರತೀಯ ನೌಕಾಪಡೆಯ ಈಸ್ಟರ್ನ್ ನೇವಲ್ ಕಮಾಂಡ್ ಯಾವ ನಗರದಲ್ಲಿದೆ?
ಎ. ಕೋಲ್ಕತ್ತಾ
ಬಿ. ಚೆನ್ನೈ
ಸಿ. ವಿಶಾಖಪಟ್ಟಣಂ
ಡಿ. ಭುವನೇಶ್ವರ
ಉತ್ತರ: ವಿಶಾಖಪಟ್ಟಣಂ

ಪ್ರಶ್ನೆ 5: 6.4 ಲಕ್ಷ ರೂ
2022ರ ಟೋಕಿಯೋ ಒಲಿಂಪಿಕ್ಸ್ನ ಪದಕಗಳನ್ನು ತಯಾರಿಸಲು ಬಳಸಾದ ಲೋಹವನ್ನು ಯಾವುದರಿಂದ ಸಂಸ್ಕರಿಸಲಾಗಿದೆ?
ಎ. ಮರುಬಳಸಿದ ಎಲೆಕ್ಟ್ರಾನಿಕ್ಸ್
ಬಿ. ಹಳೆಯ ಕ್ರೀಡಾ ಸಲಕರಣೆ
ಸಿ. ಗುಜರಿಗೆ ಹಾಕಿದ ರೈಲ್ವೆ ಹಳಿ
ಡಿ. ಹಾರಾಟ ನಿಲ್ಲಿಸಿದ ವಿಮಾನಗಳು
ಉತ್ತರ: ಸಂಸ್ಕರಿಸಿದ ಎಲೆಕ್ಟ್ರಾನಿಕ್ಸ್
ಪ್ರಶ್ನೆ 6: 12.5 ಲಕ್ಷ ರೂ
ಮೇ 2022ರಂದು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ದೇಶೀಯವಾಗಿ ಪರೀಕ್ಷಿಸಲಾಗಿರುವ 5ಜಿ ನೆಟ್ವರ್ಕ್ ಬಗ್ಗೆ ಯಾವ ಸಂಸ್ಥೆಯಲ್ಲಿ ಕರೆ ನೀಡಿದರು?
ಎ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
ಬಿ. ಐಐಟಿ ಮದ್ರಾಸ್
ಸಿ. ಐಐಟಿ ಬಿಎಚ್ಯು
ಡಿ. ನ್ಯಾಷನಲ್ ಇನೋವೇಶನ್ ಫೌಂಡೇಶನ್
ಉತ್ತರ: ಐಐಟಿ ಮದ್ರಾಸ್

ಪ್ರಶ್ನೆ 7: 25 ಲಕ್ಷ ರೂ
1887ರಲ್ಲಿ ಮುಂಬೈನ ಮಲಬಾರ್ ಹಿಲ್ ರಿಸರ್ವಾಯರ್ ಅನ್ನು ಕಟ್ಟಿದ್ದು ಯಾವ ಸಂಸ್ಥೆ?
ಎ. ಟಾಟಾ ಸನ್ಸ್
ಬಿ. ಶಾಪೂರ್ಜಿ ಪಾಲೋನ್ಜೀ ಗ್ರೂಪ್
ಸಿ. ವಾಡಿಯಾ ಗ್ರೂಪ್
ಡಿ. ಬಿರ್ಲಾ ಗ್ರೂಪ್
ಉತ್ತರ: ಶಾಪೂರ್ಜಿ ಪಲ್ಲೋನ್ಜಿ ಗ್ರೂಪ್
ಪ್ರಶ್ನೆ 8: 50 ಲಕ್ಷ ರೂ
1953ರಲ್ಲಿ ಭಾರತದ ಮೊದಲ ಮುಖ್ಯ ಚುನಾವಣಾ ಆಯುಕ್ತರು ಯಾವ ದೇಶದ ಸಂಸದೀಯ ಚುನಾವಣೆಯನ್ನು ನಡೆಸಿದರು?
ಎ. ನೇಪಾಳ
ಬಿ. ಅಫ್ಗಾನಿಸ್ತಾನ
ಸಿ. ಸುಡಾನ್
ಡಿ. ಸೌತ್ ಆಫ್ರಿಕಾ
ಈ ಎಂಟನೇ ಪ್ರಶ್ನೆ 50 ಲಕ್ಷ ರೂ ಬಹುಮಾನವನ್ನು ಹೊತ್ತಿತ್ತು. ಮೊದಲಿಗೆ ಧುಲಿಚಂದ್ ಅಗರ್ವಾಲ್ ಈ ಪ್ರಶ್ನೆಗೆ ಸುಡಾನ್ ಉತ್ತರ ಇರಬಹುದು ಎಂದು ಅಂದಾಜು ಮಾಡಿದ್ದರು. ಆದರೆ ಕೊನೆಗೆ ತಮಗೆ ಉಳಿದಿದ್ದ ಕೊನೆಯ ಲೈಫ್ ಲೈನ್ 50-50 ಬಳಸಲು ನಿರ್ಧರಿಸಿದರು. ಆಗ ಕಂಪ್ಯೂಟರ್ ಪರದೆಯಲ್ಲಿ ಸುಡಾನ್ ಮತ್ತು ಸೌತ್ ಆಫ್ರಿಕಾ ಮಾತ್ರ ಉಳಿದುಕೊಂಡವು. ಧುಲಿಚಂದ್ ಅಂತಿಮವಾಗಿ ತಮ್ಮ ಮೂಲ ಅಂದಾಜು ಮಾಡಿದ್ದ ಸುಡಾನ್ ಅನ್ನೇ ಉತ್ತರವಾಗಿ ಆಯ್ದುಕೊಂಡರು. ಅದು ಸರಿ ಉತ್ತರವಾಯಿತು.
ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ರಿಂದ 10ರವರೆಗೆ ಪ್ರಸಾರವಾಗುತ್ತದೆ. ಇಂದು ಮಂಗಳವಾರ ಧುಲಿಚಂದ್ 75 ಲಕ್ಷ ರೂ ಪ್ರಶ್ನೆಯೊಂದಿಗೆ ಸ್ಪರ್ಧೆ ಮುಂದುವರಿಸಲಿದ್ದಾರೆ.
(ಒನ್ಇಂಡಿಯಾ ಸುದ್ದಿ)
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications