ಭಾರತೀಯರು ಓಡಾಡಲು ವಿಶೇಷ ಅನುಮತಿ ಅಗತ್ಯವಿರುವ ದೇಶದ 6 ಸ್ಥಳಗಳು ಇವು
ಬೆಂಗಳೂರು, ಡಿಸೆಂಬರ್ 9: ಹೆಚ್ಚು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯ ಭೂಮಿಯಾದ ಭಾರತವು ಅನ್ವೇಷಣೆಯ ವಿಶಾಲವಾದ ಭೂಪ್ರದೇಶವಾಗಿದೆ. ಪ್ರವಾಸಿ ಮಾಡುವ ಉತ್ಸಾಹಿಗಳಿಗೆ ಈ ಉಪಖಂಡದಲ್ಲಿ ಪ್ರಯಾಣಿಸುವಾಗ ಇದು ಸ್ವರ್ಗವೇ ಆಗಿದೆ.
ಆದರೆ ದೇಶದ ಎಲ್ಲಾ 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಯಾಣಿಸಲು ಇರುವ ಸಾಮಾನ್ಯ ಅನುಮತಿ ಕೆಲವೆಡೆ ಇಲ್ಲ. ಭದ್ರತಾ ಕಾರಣಗಳಿಂದಾಗಿ ಭಾರತದ ಕೆಲವು ಸ್ಥಳಗಳಿಗೆ ವಿಶೇಷ ಅನುಮತಿಯ ಅಗತ್ಯವಿರುತ್ತದೆ. ಆದ್ದರಿಂದ, ನೀವು ಈ ಸ್ಥಳಗಳಿಗೆ ಪ್ರಯಾಣಿಸಲು ಯೋಜಿಸುತ್ತಿದ್ದರೆ, ನಿಮ್ಮ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಇನ್ನರ್ ಲೋನ್ ಅನುಮತಿಯನ್ನು (ILP) ಪಡೆದುಕೊಳ್ಳಿ.
ಇನ್ನರ್ ಲೋನ್ ಅನುಮತಿ ಎಂದರೆ ಚಿಂತಿಸಬೇಡಿ. ಇದು ಯಾವುದೇ ಹೊಸ ನಿಯಮವಲ್ಲ. ಬದಲಿಗೆ ಅನೇಕರ ಪ್ರಯಾಣದ ದಾಖಲೆಗಳಲ್ಲಿ ಹಳೆಯ ಪ್ರಯಾಣದ ಅವಶ್ಯಕತೆಯನ್ನು ಬರೆಯಲಾಗಿದೆ. ಜನರು ಇತರ ದೇಶಗಳೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಸೂಕ್ಷ್ಮ ಪ್ರದೇಶಗಳಿಗೆ ಪ್ರಯಾಣಿಸುವಾಗ ಈ ಅನುಮತಿ ಅಗತ್ಯವಿದೆ ಅಷ್ಟೇ.
ಇದು ಪ್ರವಾಸಿಗರನ್ನು ರಕ್ಷಿಸಲು, ಜನರ ಓಡಾಟವನ್ನು ನಿರ್ವಹಿಸಲು ಮತ್ತು ಬುಡಕಟ್ಟು ಸಮುದಾಯದ ಕಲ್ಯಾಣಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ. ಅಂತಹ ಆರು ಪ್ರದೇಶಗಳು ಇಂತಿವೆ. 1. ಸಂಸ್ಕೃತಿಯಲ್ಲಿ ಶ್ರೀಮಂತವಾಗಿರುವ ಈಶಾನ್ಯ ರಾಜ್ಯ ಅರುಣಚಲ ಪ್ರದೇಶ. ಇದು ಚೀನಾ, ಭೂತಾನ್ ಮತ್ತು ಮ್ಯಾನ್ಮಾರ್ನೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಕೋಲ್ಕತ್ತಾ, ಶಿಲ್ಲಾಂಗ್, ಗುವಾಹಟಿ, ದೆಹಲಿ ಈ ನಗರಗಳಿಂದ ಪ್ರವಾಸಿಗರು ಅರುಣಾಚಲ ಪ್ರದೇಶದ ನಿವಾಸಿ ಆಯುಕ್ತರಿಂದ ತಮ್ಮ ಪರವಾನಗಿಯನ್ನು ಪಡೆಯಬೇಕು. ಐಎಲ್ಪಿಯು ಅರುಣಚಲ ಪ್ರದೇಶದ ಕೆಲವು ಸಂರಕ್ಷಿತ ಪ್ರದೇಶಗಳಿಗೆ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 100 ರೂಪಾಯಿ ಶೂಲ್ಕದೊಂದಿಗೆ ಸುಮಾರು 30 ದಿನಗಳವರೆಗೆ ಮಾನ್ಯತೆ ನೀಡುತ್ತದೆ.
2. ನಾಗಾಲ್ಯಾಂಡ್ ಅನೇಕ ಬುಡಕಟ್ಟುಗಳಿಗೆ ನೆಲೆಯಾಗಿದೆ. ಇದು ಮ್ಯಾನ್ಮಾರ್ನೊಂದಿಗೆ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಆದ್ದರಿಂದ ನಿರಾತಂಕದ ಪ್ರಯಾಣಕ್ಕೆ ಬಂದಾಗ ಇದು ಸೂಕ್ಷ್ಮ ಪ್ರದೇಶವಾಗಿದೆ. ದೆಹಲಿ, ಕೋಲ್ಕತ್ತಾ, ಕೊಹಿಮಾ, ದಿಮಾಪುರ್, ಶಿಲ್ಲಾಂಗ್ ಮತ್ತು ಮೊಕೊಕ್ಚುಂಗ್ನ ಡೆಪ್ಯೂಟಿ ಕಮಿಷನರ್ನಿಂದ ನೀವು ಐಎಲ್ಪಿ ಪಡೆಯಬೇಕು.

ಪೊಲೀಸ್ ಕ್ಲಿಯರೆನ್ಸ್ ಅಗತ್ಯ
3. ಲಕ್ಷದೀಪ್ ಒಂದು ಆಫ್ಬೀಟ್ ಪ್ರಯಾಣದ ಸ್ಥಳ. ಅಲ್ಲದೆ ಪ್ರವಾಸಕ್ಕೆ ಯೋಗ್ಯ ದ್ವೀಪ ಸಮೂಹ. ಲಕ್ಷದ್ವೀಪವು ಭಾರತದ ರತ್ನಗಳಲ್ಲಿ ಒಂದಾಗಿದೆ. ಕಡಲತೀರಗಳು ಮತ್ತು ಆಕಾಶ ನೀಲಿ ನೀರು ಮತ್ತು ರುಚಿಕರವಾದ ಆಹಾರಕ್ಕಾಗಿ ಹೆಸರುವಾಸಿಯಾಗಿದೆ. ಈ ಕೇಂದ್ರಾಡಳಿತ ಪ್ರದೇಶವನ್ನು ಪ್ರವೇಶಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ವಿಶೇಷ ಪರವಾನಗಿ ಅಗತ್ಯವಿದೆ.

ಭದ್ರತಾ ಅಧಿಕಾರಿಯಿಂದ ವಿಶೇಷ ಪಾಸ್ ಪಡೆಯಬೇಕು
4. ಪ್ರಾಕೃತಿಕ ಸಂಪತ್ತಿನಿಂದ ತುಂಬಿರುವ ಮತ್ತೊಂದು ಅತ್ಯದ್ಭುತ ರಾಜ್ಯ ಮಿಜೋರಾಂ. ಇದು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಸಾಮಾನ್ಯ ಗಡಿಯನ್ನು ಹಂಚಿಕೊಂಡಿದೆ. ಹಲವಾರು ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿದೆ. ಸಿಲ್ಚಾರ್, ಕೋಲ್ಕತ್ತಾ, ಶಿಲ್ಲಾಂಗ್, ದೆಹಲಿ, ಗುವಾಹಟಿಯಿಂದ ಮಿಜೋರಾಂ ಸರ್ಕಾರದ ಸಂಪರ್ಕ ಅಧಿಕಾರಿಯಿಂದ ಇಲ್ಲಿ ಐಎಲ್ಪಿ ತೆಗೆದುಕೊಳ್ಳಬೇಕು. ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಐಜ್ವಾಲ್ನ ಲೆಂಗ್ಪುಯಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಜನರು ಭದ್ರತಾ ಅಧಿಕಾರಿಯಿಂದ ವಿಶೇಷ ಪಾಸ್ ತೆಗೆದುಕೊಳ್ಳಬೇಕಾಗುತ್ತದೆ.

ರುಚಿಕರವಾದ ಆಹಾರ, ಸ್ಫಟಿಕ ಸರೋವರಗಳ ಪ್ರದೇಶ
5. ಹಿಮಾಲಯದ ಹೆಬ್ಬಾಗಿಲು ಎಂದೇ ಖ್ಯಾತವಾದ ಸಿಕ್ಕಿಂ ಸುಂದರವಾದ ಹುಲ್ಲುಗಾವಲು ಪ್ರದೇಶವಾಗಿದೆ. ಇಲ್ಲಿ ರುಚಿಕರವಾದ ಆಹಾರಗಳು, ಅನೇಕ ಮಠಗಳು, ಸ್ಫಟಿಕ ಸರೋವರಗಳು ಮತ್ತು ಸುಂದರ ನೈಸರ್ಗಿಕ ಬೆಟ್ಟಗಳ ಭೂಮಿಯಾಗಿದೆ. ಭಾರತದ ಈಶಾನ್ಯ ಭಾಗದಲ್ಲಿ ನೆಲೆಸಿರುವ ಚಿಕ್ಕ ರಾಜ್ಯಗಳಲ್ಲಿ ಒಂದಾದ ಇದು ಹಿಂದೆಂದೂ ನೋಡಿರದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿದೆ. ಸಿಕ್ಕಿಂನಲ್ಲಿರುವಾಗ ಜನರು ಸಾಮಾನ್ಯವಾಗಿ ವಿಶೇಷ ಪರವಾನಿಗೆ ಅಗತ್ಯವಿರುವ ಕೆಲವು ಅತ್ಯುನ್ನತ ಸ್ಥಳಗಳ ಹಾದಿಗಳನ್ನು ಕ್ರಮಿಸುತ್ತಾರೆ. ಅವುಗಳೆಂದರೆ ತ್ಸೋಮ್ಗೊ ಬಾಬಾ ಮಂದಿರ ಟ್ರಿಪ್, ಸಿಂಗಲಿಲಾ ಟ್ರೆಕ್, ನಾಥ್ಲಾ ಪಾಸ್, ಝೋಂಗ್ರಿ ಟ್ರೆಕ್, ತಂಗು-ಚೋಪ್ಟಾ ವ್ಯಾಲಿ ಟ್ರಿಪ್, ಯುಮೆಸಾಮ್ಡಾಂಗ್, ಯುಮ್ಥಾಂಗ್ ಮತ್ತು ಝೀರೋ ಪಾಯಿಂಟ್ ಟ್ರಿಪ್ ಮತ್ತು ಗುರುದೋಗ್ಮಾರ್ ಸರೋವರ ಇವೇ ಮೊದಲಾದವು. ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಯಿಂದ ಅನುಮತಿಯನ್ನು ನೀಡಲಾಗುತ್ತದೆ ಮತ್ತು ಬಾಗ್ಡೋಗ್ರಾ ವಿಮಾನ ನಿಲ್ದಾಣ ಮತ್ತು ರಂಗ್ಪೋಚೆಕ್ಪೋಸ್ಟ್ನಲ್ಲಿ ಪಡೆಯಬಹುದು.

ನ್ಯೋಮಾ, ತುರ್ತುಕ್, ಡಿಗರ್ ಲಾ ಗೆ ಅನುಮತಿ ಬೇಕು
6. ಲಡಾಖ್ ಮತ್ತೊಂದು ವಿಶೇಷವಾದ ಸ್ಥಳ. ಪ್ರತಿ ಪ್ರಯಾಣಿಕರ ಪ್ರವಾಸ ಪಟ್ಟಿಯಲ್ಲಿ ಕಡ್ಡಾಯವಾದ ಹೆಸರು, ನುಬ್ರಾ ಕಣಿವೆ, ಖರ್ದುಂಗ್ ಲಾ ಪಾಸ್, ತ್ಸೋ ಮೊರಿರಿ ಲೇಕ್, ಪ್ಯಾಂಗೊಂಗ್ ತ್ಸೋ ಲೇಕ್, ದಹ್, ಹನು ವಿಲೇಜ್, ನ್ಯೋಮಾ, ತುರ್ತುಕ್, ಡಿಗರ್ ಲಾ ಮುಂತಾದ ಸ್ಥಳಗಳಿಗೆ ಹೋಗಲು ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ. ಮತ್ತು ತಂಗ್ಯಾರ್ ಇವೇ ಮೊದಲಾದವು. ಇಲ್ಲಿ ಪ್ರವಾಸ ಮಾಡಲು ವಿಶೇಷ ಅನುಮತಿ ಬೇಕಾಗಿದೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications