Get Updates
Get notified of breaking news, exclusive insights, and must-see stories!

ಪ್ರವಾಸ ಹೊರಟಿದ್ದೀರಾ, ಕರ್ನಾಟಕದಲ್ಲಿ ತೇಲುವ ಈ ಚರ್ಚ್‌ನ ಕಥೆ ಗೊತ್ತಾ?

ಬೆಂಗಳೂರು, ಡಿಸೆಂಬರ್‌ 6: ಹಳೆಯ ವಾಸ್ತುಶೈಲಿಗಳು, ಅವಶೇಷಗಳು ಎಷ್ಟೇ ವರ್ಷಗಳಾದರೂ ಕುತೂಹಲ ಕೆರಳಿಸುತ್ತವೆ. ಏಕೆಂದರೆ ಅವುಗಳ ನಿರ್ಮಾಣದಲ್ಲಿ ಹಳೆಯ ಸತ್ಯಗಳು ಅಡಗಿವೆ. ಇಲ್ಲಿಯ ಪ್ರತಿ ಇಟ್ಟಿಗೆಯಲ್ಲೂ ಒಂದೊಂದು ಕಥೆ ಇದೆ. ಕೈಬಿಟ್ಟ ಪಟ್ಟಣಗಳು ​​ಅಥವಾ ಮರೆತುಹೋದ ಕಟ್ಟಡಗಳು ಹಿಂದಿನದನ್ನು ನೆನಪಿಸುತ್ತವೆ. ಅಂತಹ ಒಂದು ಸ್ಥಳ ಕರ್ನಾಟಕದಲ್ಲಿ ಇದೆ.

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿ ರೋಸರಿ ಚರ್ಚ್ ಎಂದು ಕರೆಯಲ್ಪಡುವ ತೇಲುವ ಚರ್ಚ್ ಶ್ರೀಮಂತ ಇತಿಹಾಸ ಹೊಂದಿದೆ. ಇದನ್ನು ಮುಳುಗುವ ಚರ್ಚ್ ಎಂದೂ ಕರೆಯುತ್ತಾರೆ. ಇಲ್ಲಿ ಯಾವುದೇ ಗಂಟೆಗಳು ಬಾರಿಸುವುದಿಲ್ಲ. ಯಾವುದೇ ಬಣ್ಣದ ಗಾಜಿನ ಕಿಟಕಿಗಳಿಂದ ಒಳಾಂಗಣ ಅಲಂಕರಿಸಲ್ಪಟ್ಟಿಲ್ಲ. ಮೇಲ್ಛಾವಣಿಯಿಲ್ಲದ ಈ ಚರ್ಚ್‌ ಅವಶೇಷದೊಳಗೆ ಸೂರ್ಯನ ಬೆಳಕು ಬರುತ್ತದೆ. ಮಳೆಗಾಲದಲ್ಲಿ ನೀರಿನ ಅಲೆಗಳು ಅದರ ರಚನೆಯು ಪಾಚಿಯಿಂದ ಆವೃತವಾದ ಗೋಡೆಗಳ ವಿರುದ್ಧವಾಗಿ ಚಿಮ್ಮುತ್ತವೆ.

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ಗ್ರಾಮದ ಹೇಮಾವತಿ ನದಿಯ ದಡದಲ್ಲಿ ನಿರ್ಮಿಸಲಾದ (ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಅರ್ಧ ಗಂಟೆ ಪ್ರಯಾಣ), ಇದು ಗ್ರಾಮದ ಹಿಂದೆ ಕಂಡು ಬರುವ ಅವಶೇಷವಾಗಿದೆ. ಗೋಥಿಕ್ ವಾಸ್ತುಶಿಲ್ಪದ ಶ್ರೇಷ್ಠ ಉದಾಹರಣೆ ಇದಾಗಿದೆ. ಇದನ್ನು 1860ರಲ್ಲಿ ಅಬ್ಬೆ ಜೆ ಎ ಡುಬೊಯಿಸ್ ಎಂಬ ಫ್ರೆಂಚ್ ಮಿಷನರಿ ನಿರ್ಮಿಸಿದ್ದಾರೆ.

1960ರಲ್ಲಿ ಗೊರೂರು- ಹೇಮಾವತಿ ಅಣೆಕಟ್ಟನ್ನು ನದಿಯ ಮೇಲೆ ನಿರ್ಮಿಸಲಾಯಿತು. ಇದು ಚರ್ಚ್ ಪ್ರದೇಶದ ಸುತ್ತಲಿನ ಎಲ್ಲಾ ಹಳ್ಳಿಗಳಿಗೆ ಹಾನಿ ಮಾಡಿತು. ಅಂದಿನಿಂದ ಪ್ರತಿ ವರ್ಷ ಮಾನ್ಸೂನ್ ಸಮಯದಲ್ಲಿ (ಜೂನ್ ನಿಂದ ಅಕ್ಟೋಬರ್ ವರೆಗೆ), ಚರ್ಚ್‌ ಈ ಪ್ರದೇಶ ನೀರಿನಿಂದ ತುಂಬಿರುತ್ತದೆ. ಚರ್ಚ್‌ ಕಟ್ಟಡದ ಉಳಿದಿರುವ ಅವಶೇಷದ ಚೌಕಟ್ಟನ್ನು ನೀರು ಆವರಿಸಿಸುತ್ತದೆ. ಇದರ ಹೊರತಾಗಿಯೂ ಚರ್ಚ್ ಗಟ್ಟಿಯಾಗಿ ನಿಂತಿದೆ. ಅದರ ರಚನೆಯ ಮೂರನೇ ಒಂದು ಭಾಗದಷ್ಟು ಮಾತ್ರ ನೀರಿನ ಮೇಲ್ಮೈಯಲ್ಲಿರುತ್ತದೆ.

ಗೊರೂರು ಅಣೆಕಟ್ಟಿಗೆ ಭೇಟಿ ನೀಡಬಹುದು

ಗೊರೂರು ಅಣೆಕಟ್ಟಿಗೆ ಭೇಟಿ ನೀಡಬಹುದು

ಇದರಿಂದಾಗಿಯೇ ಇದು 'ಫ್ಲೋಟಿಂಗ್ ಚರ್ಚ್' ಮತ್ತು 'ಸಬ್ಮರ್ಡ್ ಚರ್ಚ್' ಎಂಬ ಹೆಸರುಗಳನ್ನು ಪಡೆದುಕೊಂಡಿದೆ. ಹತ್ತಿರದ ಗೊರೂರು ಅಣೆಕಟ್ಟಿಗೆ ಭೇಟಿ ನೀಡುವ ಪ್ರವಾಸಿಗರು ಅದರ ಗೇಟ್‌ಗಳ ಮೂಲಕ ನೀರಿನ ಪ್ರವಾಹವನ್ನು ವೀಕ್ಷಿಸಲು ದೋಣಿಗಳನ್ನು ಬಾಡಿಗೆಗೆ ಪಡೆಯುತ್ತಾರೆ. ಸುತ್ತಮುತ್ತಲಿನ ಪ್ರದೇಶಗಳ ಮೀನುಗಾರರಿಂದ ಐತಿಹಾಸಿಕ ತಾಣದ ಪ್ರವಾಸ ವಿವರವನ್ನು ಕೇಳಬಹುದು.

ಬೇಸಿಗೆಯ ತಿಂಗಳುಗಳಲ್ಲಿ ಚರ್ಚ್‌ಗೆ ಭೇಟಿ ನೀಡಿ

ಬೇಸಿಗೆಯ ತಿಂಗಳುಗಳಲ್ಲಿ ಚರ್ಚ್‌ಗೆ ಭೇಟಿ ನೀಡಿ

ಇಂದು ಚರ್ಚ್‌ನ ಪ್ರಾಚೀನ ಅವಶೇಷಗಳು ಅದರ ವಿಶಿಷ್ಟ ಗುಣಮಟ್ಟಕ್ಕಾಗಿ ಪ್ರವಾಸಿಗರಲ್ಲಿ ಜನಪ್ರಿಯವಾಗಿವೆ. ನೀವು ಖುದ್ದಾಗಿ ಈ ಚರ್ಚ್‌ಗೆ ಭೇಟಿ ನೀಡಿ ತಿಳಿಯಬಹುದು. ಬೇಸಿಗೆಯ ತಿಂಗಳುಗಳಲ್ಲಿ ಚರ್ಚ್ ಅನ್ನು ಪ್ರವೇಶಿಸಲು ಮತ್ತು ಅದರ ಇತಿಹಾಸವನ್ನು ಮೆಲುಕು ಹಾಕಬಹುದು ಇಲ್ಲವೇ ಮಳೆಯ ಸಮಯದಲ್ಲಿ ನೀರಿನ ಮಧ್ಯೆ ವಿರುದ್ಧ ನಿಂತಿರುವ ಆ ಚರ್ಚ್‌ನ ಅಂದವನ್ನು ನೋಡಬಹುದು.

ಬೆಂಗಳೂರಿನಿಂದ 200 ಕಿಮೀ ಅಂತರ

ಬೆಂಗಳೂರಿನಿಂದ 200 ಕಿಮೀ ಅಂತರ

ಜುಲೈ ಅಕ್ಟೋಬರ್ ತಿಂಗಳಿನಲ್ಲಿ ಒಮ್ಮೆ ಭಾಗಶಃ ನೀರಿನಲ್ಲಿ ಚರ್ಚ್‌ ಮುಳುಗಿರುತ್ತದೆ. ಡಿಸೆಂಬರ್ ಮೇ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಚರ್ಚ್ ಮೈದಾನವು ಕಾಣ ಸಿಗುತ್ತದೆ. ಚರ್ಚ್‌ನಿಂದ ಬೆಂಗಳೂರು ನಡುವಿನ ಅಂತರವು 200 ಕಿಮೀ ಆಗಿದೆ. ರಸ್ತೆಗಳ ಮೂಲಕ ಸುಲಭವಾಗಿ ನೀವು ಹೋಗಿಬರಬಹುದು. ಶೆಟ್ಟಿಹಳ್ಳಿ ಚರ್ಚ್‌ಗೆ ಬಸ್ಸುಗಳು ಲಭ್ಯವಿವೆ. ಶೆಟ್ಟಿಹಳ್ಳಿಯಿಂದ ಸರಿಸುಮಾರು 20 ಕಿಮೀ ದೂರದಲ್ಲಿರುವ ಹಾಸನಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಪ್ರತಿದಿನವೂ ರೈಲುಗಳು ಇವೆ.

ವೆಡ್ಡಿಂಗ್‌ ಫೋಟೋ ಶೂಟ್‌ಗಳು ನಡೆಯುತ್ತವೆ

ವೆಡ್ಡಿಂಗ್‌ ಫೋಟೋ ಶೂಟ್‌ಗಳು ನಡೆಯುತ್ತವೆ

ಶೆಟ್ಟಿಹಳ್ಳಿಯಲ್ಲಿರುವ ಈ ರೋಸರಿ ಚರ್ಚ್‌ ಆವರಣದಲ್ಲಿ ಅನೇಕ ಸಿನಿಮಾಗಳ ಚಿತ್ರಿಕರಣವು ನಡೆದಿದೆ. ಇತ್ತೀಚೆಗೆ ವೆಡ್ಡಿಂಗ್‌ ಫೋಟೋ ಶೂಟ್‌ಗಳು ಸಹ ನಡೆಯುತ್ತಿವೆ. ದೇಶ ಹಲವಾರು ಭಾಗಗಳಿಂದ ಪ್ರವಾಸಿಗರು ಈ ಚರ್ಚ್‌ ನೋಡಲು ಬರುತ್ತಾರೆ. ನೀರು ತುಂಬಿದಾಗ ಈ ಚರ್ಚ್‌ ನೋಡಲು ಪ್ರವಾಸಿಗರ ಇನ್ನೂ ಮುಗಿಬೀಳುತ್ತಾರೆ. ಕೆಲವರು ಈಜುತ್ತಾರೆ. ಸ್ಥಳೀಯ ಯುವಕರಿಗೆ ಇದು ನಿತ್ಯ ರಸದೌತಣವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+