ಬೀಳಗಿ-ಬೆಂಗಳೂರು ನಡುವೆ ಪಲ್ಲಕ್ಕಿ ಬಸ್: ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 25: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಬೆಂಗಳೂರು ನಗರಕ್ಕೆ ಮೊತ್ತೊಂದು ಬಸ್ ಸೇವೆಯನ್ನು ಆರಂಭಿಸಿದೆ. ಬೀಳಗಿ-ಬೆಂಗಳೂರು ನಡುವೆ ಈ ಬಸ್ ಸಂಚಾರ ನಡೆಸಲಿದೆ. ಪ್ರಯಾಣಿಕರು ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ವಾ.ಕ.ರ.ಸಾ.ಸಂ. ಬೀಳಗಿ-ಬೆಂಗಳೂರು ನಡುವೆ ಹವಾನಿಯಂತ್ರಣ ರಹಿತ 'ಪಲ್ಲಕ್ಕಿ' ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಬಸ್ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಮೂಲಕ ಸಹ ಟಿಕೆಟ್ ಬುಕ್ ಮಾಡಬಹುದಾಗಿದೆ.

ಬೀಳಗಿಯಿಂದ ಹೊರಡುವ ಬಸ್ ಗದ್ದನಕೇರಿ ಕ್ರಾಸ್, ನವನಗರ ಬಸ್ ನಿಲ್ದಾಣ ಬಾಗಲಕೋಟೆ, ಬಾಗಲಕೋಟೆ ಬಸ್ ನಿಲ್ದಾಣ, ಹುನಗುಂದ, ಇಳಕಲ್, ಕುಷ್ಟಗಿ ಮೂಲಕ ಬೆಂಗಳೂರು ತಲುಪಲಿದೆ.
ಬಸ್ ವೇಳಾಪಟ್ಟಿ: ಬಸ್ ಬೀಳಗಿಯಿಂದ 19:13ಕ್ಕೆ ಹೊರಟು, ಬೆಂಗಳೂರಿಗೆ 6 ಗಂಟೆಗೆ ತಲುಪಲಿದೆ. ಈ ಬಸ್ನಲ್ಲಿ ಸಂಚಾರ ನಡೆಸಲು ಜನರು ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಲು http://ksrtc.in ವೆಬ್ಸೈಟ್ಗೆ ಭೇಟಿ ನೀಡಿ.
ಬೀಳಗಿಯಿಂದ ಹೊರಡುವ ಬಸ್ 9.40 ಗದ್ದನಕೇರಿ ಕ್ರಾಸ್, 20:05 ನವನಗರ ಬಸ್ ನಿಲ್ದಾಣ ಬಾಗಲಕೋಟೆ, 20:20 ಬಾಗಲಕೋಟೆ ಬಸ್ ನಿಲ್ದಾಣ, 21:35 ಹುನಗುಂದ, 22:00 ಇಳಕಲ್, 22:35 ಕುಷ್ಟಗಿ ಮೂಲಕ 6 ಗಂಟೆಗೆ ಬೆಂಗಳೂರು ತಲುಪಲಿದೆ.
ಬೀಳಗಿ 🔁 ಬೆಂಗಳೂರು ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಸಾರಿಗೆ ಸೇವೆ
— North Western Karnataka Road Transport Corporation (@nw_krtc) April 25, 2024
ಆನ್ಲೈನ್ ಬಸ್ ಟಿಕೆಟ್ ಬುಕಿಂಗ್ ಗಾಗಿ https://t.co/P8O6ADJWvu ಗೆ ಭೇಟಿ ನೀಡಿ. #OnlineTicketBooking #Pallakki #NonAc #bus #bagalkote #Hunagunda #Ilkal #Kushtagi #Bengaluru pic.twitter.com/MwACurtjeg
ಕೆಎಸ್ಆರ್ಟಿಸಿ ದೂರ ಪ್ರಯಾಣದ ಪ್ರಯಾಣಿಕರ ಅನುಕೂಲಕ್ಕಾಗಿ ನಾನ್ ಎಸಿ ಸ್ಲೀಪರ್ ಬಸ್ ಖರೀದಿ ಮಾಡಿತ್ತು. ಈಗ ವಿವಿಧ ಸಾರಿಗೆ ನಿಗಮಗಳಿಗೆ ಬಸ್ಗಳನ್ನು ಹಂಚಿಕೆ ಮಾಡಲಾಗುತ್ತಿದೆ. 6 ರಿಂದ 8 ಗಂಟೆಗಳ ಪ್ರಯಾಣದ ನಗರಗಳಿಗೆ ಸಂಪರ್ಕಿಸಲು ಈ ಬಸ್ಗಳನ್ನು ಓಡಿಸಲಾಗುತ್ತಿದೆ.
ಮೊದಲು ಕೆಎಸ್ಆರ್ಟಿಸಿ 40 ನಾನ್ ಎಸಿ 'ಪಲ್ಲಕ್ಕಿ' ಬಸ್ಗಳನ್ನು ಖರೀದಿ ಮಾಡಿತ್ತು. ಬಳಿಕ ಹಂತ-ಹಂತವಾಗಿ ಬಸ್ಗಳನ್ನು ಖರೀದಿ ಮಾಡಿದ್ದು, ನಿಗಮಗಳಿಗೆ ಹಂಚಿಕೆ ಮಾಡಿದೆ. ನಿಗಮಗಳು ಯಾವ ಮಾರ್ಗದಲ್ಲಿ ಬಸ್ ಓಡಿಸಬೇಕು ಎಂದು ತೀರ್ಮಾನಿಸಿ ಬಸ್ ಸಂಚಾರವನ್ನು ಆರಂಭಿಸಿವೆ. ಈ ಬಸ್ಗಳು 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್ ಲೈನ್ ಹೊಂದಿವೆ.
ಈ 'ಪಲ್ಲಕಿ' ಹೆಸರಿನ ಬಸ್ಗಳು 30 ಸೀಟುಗಳನ್ನು ಹೊಂದಿವೆ. ಪ್ರಯಾಣಿಕರು ಮೊಬೈಲ್ ಮತ್ತು ಲ್ಯಾಪ್ಟಾಪ್ಗಳನ್ನು ಚಾರ್ಜ್ ಮಾಡುವ ಸೌಲಭ್ಯವನ್ನು ಬಸ್ ಹೊಂದಿದೆ. ಚಪ್ಪಲಿ, ಶೂ ಇಡಲು ಸ್ಥಳಾವಕಾಶದ ವ್ಯವಸ್ಥೆ ಇದೆ.
ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಬಸ್ ವಿಶೇಷ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯನ್ನು ಹೊಂದಿದೆ. ಅಹಿತಕರ ಘಟನೆ ನಡೆದರೆ ಎಲ್ಲಾ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಇದೆ. ಅಡಿಯೋ ಸ್ವೀಕರ್ ಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications