ಮತದಾನ: ಬೆಂಗಳೂರು-ಮಂಗಳೂರು ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 24: ಶುಕ್ರವಾರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಕರಾವಳಿ ಭಾಗದ ಜನರು ಮತದಾನ ಮಾಡಲು ತೆರಳಲು ಅನುಕೂಲವಾಗುವಂತೆ ನೈಋತ್ಯ ರೈಲ್ವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.
ಏಪ್ರಿಲ್ 26ರ ಶುಕ್ರವಾರ ಉಡುಪಿ-ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಮತದಾನ ನಡೆಯಲಿದೆ. ಮತದಾನ ಮಾಡಲು ರಾಜಧಾನಿ ಬೆಂಗಳೂರು ನಗರದಿಂದ ಸಂಚಾರ ನಡೆಸುವ ಜನರಿಗಾಗಿ ವಿಶೇಷ ರೈಲು ಘೋಷಣೆ ಮಾಡಲಾಗಿದೆ.

ರೈಲು ನಂಬರ್ 06553/ 06554 ಬೆಂಗಳೂರಿನ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ಸಂಚಾರ ನಡೆಸಲಿದೆ. ರೈಲಿನ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ.
ರೈಲಿನ ವೇಳಾಪಟ್ಟಿ: ರೈಲು ನಂಬರ್ 06553 ಏಪ್ರಿಲ್ 25ರಂದು ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಿಂದ 18:00 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು 10:00 ಗಂಟೆಗೆ ತಲುಪಲಿದೆ.
ವಾಪಸ್ ಬರುವಾಗ ರೈಲು ನಂಬರ್ 06554 ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಏಪ್ರಿಲ್ 26ರ 12:00 ಗಂಟೆಗೆ ಹೊರಡಲಿದೆ. ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ 03:00 ಗಂಟೆಗೆ ಆಗಮಿಸಲಿದೆ.
ಈ ಒಂದು ಟ್ರಿಪ್ ವಿಶೇಷ ರೈಲು ಕೆಆರ್ ಪುರ, ಬಂಗಾರಪೇಟೆ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ತಿರೂರ್, ಕೊಯಿಕ್ಕೋಡ್, ವಡಾಕರ, ತಲಸ್ಸೇರಿ, ಕಣ್ಣೂರು, ಪಯನೂರು ಮತ್ತು ಕಾಸರಗೋಡು ನಿಲ್ದಾಣದಲ್ಲಿ ಹೋಗುವಾಗ ಮತ್ತು ಬರುವಾಗ ನಿಲುಗಡೆ ಹೊಂದಿದೆ.
Kindly note:
— South Western Railway (@SWRRLY) April 23, 2024
Special trains will be operated to accommodate the additional rush of passengers during the summer season.#swrupdates pic.twitter.com/B3igV9gm3F
ಈ ರೈಲು 19 ಕೋಚ್ಗಳನ್ನು ಒಳಗೊಂಡಿದೆ. 1 ಎಸಿ 2 ಟೈರ್, 4 ಎಸಿ 3 ಟೈರ್, 8 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ.
ಕುಂದಾಪುರಕ್ಕೂ ರೈಲು: ನೈಋತ್ಯ ರೈಲ್ವೆ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ಸೆಂಟ್ರಲ್ ಮಾದರಿಯಲ್ಲಿ ಯಶವಂತಪುರ-ಕುಂದಾಪುರ ನಡುವೆ ಸಹ ಒಂದು ಟ್ರಿಪ್ ವಿಶೇಷ ರೈಲು ಓಡಿಸಲಿದೆ.
ರೈಲು ನಂಬರ್ 06547 ಯಶವಂತಪುರದಿಂದ ಏಪ್ರಿಲ್ 25ರಂದು 23;20 ಗಂಟೆಗೆ ಹೊರಟು, 10:45ಕ್ಕೆ ಕುಂದಾಪುರ ತಲುಪಲಿದೆ. ರೈಲು ನಂಬರ್ 06548 ಕುಂದಾಪುರದಿಂದ ಏಪ್ರಿಲ್ 26ರಂದು 11:20ಕ್ಕೆ ಹೊರಡಲಿದ್ದು, ಯಶವಂತಪುರಕ್ಕೆ 21:50ಕ್ಕೆ ಆಗಮಿಸಲಿದೆ.












Click it and Unblock the Notifications