ಅಕ್ಟೋಬರ್ 18ರಂದು ತಲಕಾವೇರಿಯಲ್ಲಿ ತೀರ್ಥೋದ್ಭವ
ಮಡಿಕೇರಿ, ಸೆಪ್ಟೆಂಬರ್, 16 : ಕನ್ನಡ ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಅಕ್ಟೋಬರ್ 18ರಂದು ತೀರ್ಥೋದ್ಭವವಾಗಲಿದೆ. ಮಿಥುನ ಲಗ್ನದಲ್ಲಿ ಈ ಬಾರಿ ತೀರ್ಥೋದ್ಭವವಾಗಲಿದೆ ಎಂದು ದೇವಾಲಯದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಭಗಂಡೇಶ್ವರ-ತಲಕಾವೇರಿ
ದೇವಾಲಯದ
ಆಡಳಿತಾಧಿಕಾರಿ
ಸತೀಶ್
ಕುಮಾರ್
ಅವರು
ಈ
ಬಗ್ಗೆ
ಮಾಹಿತಿ
ನೀಡಿದ್ದಾರೆ.
ಅಕ್ಟೋಬರ್
18ರ
ಭಾನುವಾರ
ಮುಂಜಾನೆ
12.15ಕ್ಕೆ
ಸಲ್ಲುವ
ಮಿಥುನ
ಲಗ್ನದಲ್ಲಿ
ತಲಕಾವೇರಿಯಲ್ಲಿ
ತೀರ್ಥೋದ್ಭವ
ನೆರವೇರಲಿದೆ
ಎಂದು
ಹೇಳಿದ್ದಾರೆ.
[ತಾಂಬೂಲ
ಪ್ರಶ್ನೆ
:
ಕಾವೇರಿ
ಜಲಮೂಲಕ್ಕೆ
ಕಾದಿದೆ
ಆತಂಕ]
ಈ ಬಾರಿ ಮಧ್ಯರಾತ್ರಿ ತೀರ್ಥೋದ್ಭವವಾಗುವುದರಿಂದ ಸೂಕ್ತ ಭದ್ರತೆ, ಸ್ವಚ್ಛತೆ, ಕುಡಿಯುವ ನೀರು, ವಿದ್ಯುತ್, ಸಾರಿಗೆ ಸಂಪರ್ಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಲಕ್ಷಾಂತರ ಭಕ್ತರು ತೀರ್ಥೋದ್ಭವದ ದಿನ ತಲಕಾವೇರಿಗೆ ಆಗಮಿಸುತ್ತಾರೆ. [ತಲಕಾವೇರಿಯಲ್ಲಿ ತೀರ್ಥೋದ್ಭವದ ಚಿತ್ರಗಳು]
ಕಾವೇರಿ ಕೊಡಗಿನ ಜನರ ಕುಲದೇವತೆಯಾಗಿದ್ದು, ತೀರ್ಥೋದ್ಭವ ದಿನವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ರಾಜ್ಯದಿಂದಲೂ ನೂರಾರು ಭಕ್ತರು ತೀರ್ಥೋದ್ಭವ ದಿನ ತಲಕಾವೇರಿಗೆ ಆಗಮಿಸುತ್ತಾರೆ.
ತೀರ್ಥೋದ್ಭವದ ದಿನದಂದು ಕಾವೇರಿ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ, ಪ್ರತಿ ವರ್ಷ ನಡೆಯುವ ತೀರ್ಥೋದ್ಭವದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತೀರ್ಥವನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ದೇವಾಲಯದ ಸುತ್ತ-ಮುತ್ತ ಕೊಡ ಮತ್ತು ನೀರಿನ ಕ್ಯಾನ್ಗಳ ಮಾರಾಟವೂ ಭರ್ಜರಿಯಾಗಿ ನಡೆಯತ್ತದೆ.
ಧಾರ್ಮಿಕ ಕಾರ್ಯಕ್ರಮಗಳು : ಸೆಪ್ಟೆಂಬರ್ ಅಂತ್ಯದಿಂದಲೇ ತಲಕಾವೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 8.30ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು. ಅಕ್ಟೋಬರ್ 5ರಂದು ಆಜ್ಞಾ ಮುಹೂರ್ತ. ಅ. 15ರಂದು ಅಕ್ಷಯ ಪಾತ್ರೆ ಇರಿಸುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.