Drought: ಚಿನ್ನದ ಉಳುಮೆಗೆ ಬರದ ಕರಿನೆರಳು! ಏನಿದು ಚಿನ್ನದ ಉಳುಮೆ?
ಮಡಿಕೇರಿ, ಏಪ್ರಿಲ್ 09: ಮೂರ್ನಾಲ್ಕು ದಶಕಗಳ ಹಿಂದೆ ಮಲೆನಾಡಿನಲ್ಲಿ ಅದರಲ್ಲೂ ಕೊಡಗಿನ ಭಾಗದಲ್ಲಿ ಯುಗಾದಿ ಹಬ್ಬ ಬಂತೆಂದರೆ ಮುಂದೆ ಮಳೆಗಾಲದ ಆರಂಭ ಎಂದೇ ಹೇಳಲಾಗುತ್ತಿತ್ತು. ಅವತ್ತು ಭತ್ತದ ಕೃಷಿಯೇ ಪ್ರಧಾನವಾಗಿದ್ದರಿಂದ ರೈತರು ಯುಗಾದಿಯ ಸಂದರ್ಭ ಉಳುಮೆ ಮಾಡುವ ಮೂಲಕ ಕೃಷಿ ಕೆಲಸಕ್ಕೆ ಮುನ್ನುಡಿ ಬರೆಯುತ್ತಿದ್ದರು. ಅದನ್ನು ರೈತರು ಚಿನ್ನದ ಉಳುಮೆ ಎಂದೇ ಕರೆಯುತ್ತಿದ್ದರು. ಆದರೆ ಈ ವರ್ಷ ಚಿನ್ನದ ಉಳುಮೆಗೆ ಬರದ ಕರಿನೆರಳು ಬಿದ್ದಿದೆ. ರೈತರ ಮೊಗದಲ್ಲಿ ನಗುವಿಲ್ಲದಾಗಿದೆ.
ನಾವು ಇವತ್ತು ಆಚರಿಸುವ ಬಹಳಷ್ಟು ಹಬ್ಬಗಳಿಗೆ ಕೃಷಿಯೇ ಮೂಲವಾಗಿದ್ದು, ಅದರ ಸುತ್ತಲೂ ಹಬ್ಬಗಳು ಗಿರಕಿ ಹೊಡೆಯುತ್ತಿವೆ. ಬಹುತೇಕ ಹಬ್ಬಗಳನ್ನು ಗ್ರಾಮೀಣರು ಅದರಲ್ಲೂ ರೈತ ಕುಟುಂಬದವರೇ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ರೈತರು ಹಬ್ಬಗಳನ್ನು ಆಚರಿಸಬೇಕಾದರೆ ಸಮೃದ್ಧ ಮಳೆಯಾಗಿ, ಜನ ಜಾನುವಾರು ಸಂತುಷ್ಟರಾಗಿರಬೇಕು. ಆಗ ಮನೆ ಮನದಲ್ಲಿ ಖುಷಿಯಿದ್ದು, ಅವರ ಮೊಗದಲ್ಲಿ ಸಂತಸವಿರುತ್ತದೆ.

ಕೊಡಗಿನ ಮಟ್ಟಿಗೆ ಹೇಳುವುದಾದರೆ ಹಿಂದಿನ ಕಾಲದಲ್ಲಿ ಈ ವೇಳೆಗೆಲ್ಲ ಮಳೆ ಸುರಿದು ಭೂಮಿ ತೇವವಾಗಿ ಬಿಡುತ್ತಿತ್ತು. ಹೀಗಾಗಿ ಯುಗಾದಿ ಹಬ್ಬದ ಮಾರನೆಯ ದಿನ ಶುಭ ದಿನವಾಗಿದ್ದು, ಅವತ್ತು ಉಳುಮೆ ಮಾಡಿದರೆ ಶುಭವಾಗಲಿದ್ದು, ಆ ನಂತರ ಮಳೆ ಆರಂಭವಾದ ಮೇಲೆ ಯಾವಾಗ ಬೇಕಾದರೂ ಉಳುಮೆ ಮಾಡಬಹುದಾಗಿತ್ತು. ಯುಗಾದಿ ಸಂದರ್ಭ ಉಳುಮೆ ಮಾಡಲಾಗದವರು ಮಳೆಗಾಲ ಆರಂಭವಾದ ಬಳಿಕ ಜ್ಯೋತಿಷ್ಯರ ಬಳಿಗೆ ತೆರಳಿ ಅವರಿಂದ ಒಂದೊಳ್ಳೆಯ ಮುಹೂರ್ತ ನಿಗದಿಪಡಿಸಿಕೊಂಡು ಅಂದು ಪೂಜೆ ಸಲ್ಲಿಸುವುದರೊಂದಿಗೆ ಭತ್ತ ಕೃಷಿಗೆ ಉಳುಮೆಯನ್ನು ಶುರು ಮಾಡುತ್ತಿದ್ದರು.
ಕೊಡಗಿನಲ್ಲಿ ಹತ್ತು ಹಲವು ಬದಲಾವಣೆ
ಕೊಡಗಿನಲ್ಲಿ ಕಳೆದ ಒಂದೆರಡು ದಶಕಗಳಲ್ಲಿ ಹತ್ತು ಹಲವು ಬದಲಾವಣೆಗಳಾಗಿವೆ. ಭತ್ತವನ್ನು ಧಾನ್ಯ ಲಕ್ಷ್ಮಿಯೆಂದು ನಂಬಿ ಕೃಷಿ ಮಾಡುತ್ತಿದ್ದವರು ಅದರಿಂದ ವಿಮುಖರಾಗಿದ್ದಾರೆ. ಕಣ್ಣು ಹಾಯಿಸಿದಲ್ಲೆಲ್ಲ ಕಂಡು ಬರುತ್ತಿದ್ದ ಗದ್ದೆ ಬಯಲುಗಳು ಮಾಯವಾಗಿ ಅಲ್ಲಿ ತೋಟಗಳು ತಲೆ ಎತ್ತಿವೆ. ಇದಕ್ಕೆ ಕಾರಣ ಭತ್ತದ ಕೃಷಿ ಕೊಡಗಿನ ಮಟ್ಟಿಗೆ ದುಬಾರಿಯಾಗಿದೆ. ಅತಿವೃಷ್ಠಿ, ಅನಾವೃಷ್ಠಿಯ ಹೊಡೆತ, ಇಳುವರಿಯ ಕೊರತೆ, ಕೂಲಿ ಕಾರ್ಮಿಕರ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳಿಂದಾಗಿ ಭತ್ತವನ್ನು ಬೆಳೆಯುವುದು ರೈತರಿಗೆ ಕಷ್ಟವಾಗಿದೆ.
ಕೆಲವರಷ್ಟೇ ಯಂತ್ರಗಳ ಮೂಲಕ ಭತ್ತದ ಕೃಷಿ ಮಾಡುತ್ತಾರೆ. ಉಳಿದಂತೆ ಎಲ್ಲರೂ ವಾಣಿಜ್ಯ ಬೆಳೆಗಳತ್ತ ವಾಲಿದ್ದಾರೆ. ಆದರೂ ಜಿಲ್ಲೆಯಲ್ಲಿ ಹಬ್ಬಾಚರಣೆಗಳು ಮಾತ್ರ ಭತ್ತದ ಕೃಷಿಗೆ ಸಂಬಂಧಿಸಿದಂತೆಯೇ ನಡೆಯುತ್ತಿದ್ದು ಇಲ್ಲಿನವರು ಉಳಿಸಿಬೆಳೆಸಿಕೊಂಡು ಹೋಗುತ್ತಿದ್ದಾರೆ. ಇನ್ನು ಕೊಡಗು ಚಿಕ್ಕ ಜಿಲ್ಲೆಯಾದರೂ ಇಲ್ಲಿ ನಡೆಯುವ ಕೆಲವು ಆಚರಣೆಗಳಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸವಿರುವುದನ್ನು ಕಾಣಬಹುದಾಗಿದೆ.
ಉತ್ತರಕ್ಕೂ ದಕ್ಷಿಣಕ್ಕೂ ಆಚರಣೆಯಲ್ಲಿ ವ್ಯತ್ಯಾಸ
ಉತ್ತರ ಕೊಡಗು ಅದರಲ್ಲೂ ಹಾಸನ, ಮೈಸೂರು ಗಡಿಭಾಗದ ಆಚರಣೆಗಳು ದಕ್ಷಿಣ ಭಾಗದಲ್ಲಿ ಕಾಣಿಸುವುದಿಲ್ಲ. ಅದರಂತೆ ಉತ್ತರ ಕೊಡಗಿನ ಬಯಲುಸೀಮೆ ಪ್ರದೇಶವಾದ ತೊರೆನೂರು ಮತ್ತು ಶಿರಂಗಾಲ ಗ್ರಾಮ ವ್ಯಾಪ್ತಿಯಲ್ಲಿ ಯುಗಾದಿ ಅಂಗವಾಗಿ ನಡೆಯುವ ಚಿನ್ನದ ಉಳುಮೆ (ಹೊನ್ನಾರು) ದಕ್ಷಿಣಕೊಡಗಿನಲ್ಲಿ ಕಾಣಸಿಗುವುದಿಲ್ಲ. ಉತ್ತರ ಕೊಡಗಿನ ರೈತರು ಯುಗಾದಿ ಹಬ್ಬದ ಬಳಿಕ ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಆಚರಿಸಿ ಉಳುಮೆ ಮಾಡುತ್ತಾರೆ. ಇದನ್ನು ಚಿನ್ನದ ಉಳುಮೆ ಎಂದೇ ಭಾವಿಸಿದ್ದಾರೆ.

ಅಂದು ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತಾವು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸುತ್ತಾರೆ.
ಮಳೆ ಬರಲಿ ಚಿನ್ನದ ಉಳುಮೆಗೆ ಒಳಿತಾಗಲಿ
ಈ ವೇಳೆ ಮನೆಗಳಲ್ಲಿ ಉತ್ಸವದ ಅಂಗವಾಗಿ ಹೋಳಿಗೆ, ಪಾಯಿಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸುತ್ತಾರೆ. ಆ ನಂತರ ಹೊಸ ಪಂಚಾಂಗದಂತೆ ಗ್ರಾಮದ ಹಿರಿಯ ವ್ಯಕ್ತಿ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಮಂಗಳವಾದ್ಯಗಳೊಂದಿಗೆ ಜಾನುವಾರುಗಳನ್ನು ಮೆರವಣಿಯಲ್ಲಿ ಗ್ರಾಮದ ದೇವಸ್ಥಾನಕ್ಕೆ ತರಲಾಗುತ್ತದೆ. ಅಲ್ಲಿ ಪ್ರದಕ್ಷಿಣೆ ಹಾಕಿ ನಂತರ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಆ ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸುವುದು ಸಂಪ್ರದಾಯವಾಗಿದೆ.
ಆದರೆ ಈ ಬಾರಿ ಪರಿಸ್ಥಿತತಿ ನೆಟ್ಟಗಿಲ್ಲದಾಗಿದೆ. ಬರದಿಂದಾಗಿ ರೈತರು ಆತಂಕದಲ್ಲಿದ್ದಾರೆ. ಕುಡಿಯಲು ನೀರಿಲ್ಲದ ಪರಿಸ್ಥಿತಿ ಇರುವಾಗ ಕೃಷಿ ಚಟುವಟಿಕೆ ನಡೆಸುವುದಾದರೂ ಹೇಗೆ? ಈಗಾಗಲೇ ಯುವ ತಲೆಮಾರು ಕೃಷಿಯಿಂದ ದೂರ ಸರಿದಿದೆ. ಅಳಿದುಳಿದವರು ಕೃಷಿ ಮಾಡುತ್ತಿದ್ದಾರೆ. ಅವರನ್ನು ಬರ ಬೆಂಬಿಡದೆ ಕಾಡುತ್ತಿರುವುದರಿಂದ ಮುಂದೇನು ಎಂಬ ಆತಂಕ ಇಲ್ಲದಿಲ್ಲ. ವರುಣ ಕೃಪೆ ತೋರಿ ಮಳೆ ಸುರಿದರೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿದ್ದು, ಉತ್ತು ಬಿತ್ತಿ ಚಿನ್ನದಂತಹ ಫಸಲು ತೆಗೆಯಲು ಸಾಧ್ಯವಾಗಲಿದೆ. ಸದ್ಯ ಎಲ್ಲರೂ ಮಳೆಗಾಗಿ ಪ್ರಾರ್ಥಿಸಬೇಕಾಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications