ದಸರಾ : ಸ್ತಬ್ಧಚಿತ್ರಗಳೆಡೆ ಚಿತ್ರವಿಚಿತ್ರ ನಡೆ!
ಪ್ರಿಯ ವೀಕ್ಷಕರೇ, ಅಲ್ಲ, ಪ್ರಿಯ ಓದುಗರೇ, ಇದು ಈ ಸಲದ ಮೈಸೂರು ದಸರಾ ಜಂಬೂಸವಾರಿಯ ಸ್ತಬ್ಧಚಿತ್ರಗಳ ಎಡೆ(ಯಲ್ಲಿ) ನಾನು ಗಮನಿಸಿದ ಚಿತ್ರ ವಿಚಿತ್ರ ನಡೆ.
* ಎಚ್. ಆನಂದರಾಮ ಶಾಸ್ತ್ರೀ
*
"ವೀಕ್ಷಕರೇ,
ನಿಮಗೆಲ್ಲ
ಸ್ವಾಗತ,
ಸುಸ್ವಾಗತ."
*
"......ಆದಂಥ
ಡಾ......ಅವರು
ಜನರತ್ತ
ಕೈಬೀಸ್ತಾ
ಇದ್ದಾರೆ.
ನಿಜಕ್ಕೂ
ಒಂದು
ಆನಂದದ
ಕ್ಷಣ."
*
"ಡಾ.....ಅವರು
ಪ್ರೇಕ್ಷಕರತ್ತ
ಕೈಬೀಸಿ
ಅವರ
ಮೆಚ್ಚುಗೆಗೆ
ಪಾತ್ರರಾಗಿದ್ದಾರೆ.
ಪ್ರೇಕ್ಷಕರು
ಅತೀ
ಆನಂದದಿಂದ
ಇದನ್ನು
ನೋಡ್ತಾ
ಇದ್ದಾರೆ."
-
ಹೀಗೆ
ದೂರದರ್ಶನದ
'ಚಂದನ'
ವಾಹಿನಿಯ
ನಿರೂಪಕರಿಂದ
ಪರಾಕು
ಹೇಳಿಸಿಕೊಳ್ಳುತ್ತ,
ಸುಮ್ಮಸುಮ್ಮನೇ
ಜನರ
ಕೈಲುಕುತ್ತ,
ಕಲಾವಿದರ
ಬೆನ್ನು
ತಟ್ಟುತ್ತ,
ಈ
ಸಲದ
ಮೈಸೂರು
ದಸರಾ
ಜಂಬೂ
ಸವಾರಿಯ
ನೇರ
ಪ್ರಸಾರದಲ್ಲಿ
(ಪ್ರತಿ
ವರ್ಷದಂತೆ
ಈ
ವರ್ಷವೂ)
ಅತಿ
ಹೆಚ್ಚು
ಚೌಕಟ್ಟುಗಳಲ್ಲಿ
ವೀಕ್ಷಕರಿಗೆ
ದರ್ಶನ
ಕೊಟ್ಟ
ಅತಿ
ಗಣ್ಯ
ವ್ಯಕ್ತಿ
ಅದೇ
'ಚಂದನ'
ವಾಹಿನಿಯ
ಮುಖ್ಯಸ್ಥ
ಡಾ.
ಮಹೇಶ
ಜೋಶಿ!
***
*
"ವೀಕ್ಷಕರೇ,
ಈಗ
ಒಂದು
ವಾಣಿಜ್ಯ
ಬ್ರೇಕ್."
*
"ನಮ್ಮ
ಕ್ಯಾಮರಾದವರು
ಅಡ್ವಾಂಟೇಜಿಯಸ್
ಪೊಜಿಷನ್ನಲ್ಲಿ
ಕ್ಯಾಮರಾ
ಇಟ್ಟು
ನಮಗೆ
ಈ
ದೃಶ್ಯ
ತೋರಿಸ್ತಾ
ಇದ್ದಾರೆ."
*
"ವಿ
ಆರ್
ಗೋಯಿಂಗ್
ಟು
ಟೇಕ್
ಎ
ಷಾರ್ಟ್
ಬ್ರೇಕ್
ನೌ."
*
"ಲೆಟ್
ಅಸ್
ಟೇಕ್
ಎ
ಕಮರ್ಷಿಯಲ್
ಬ್ರೇಕ್."
*
"ಹೋಸ್ಟ್
ಟ್ಯಾಬುಲೋ
ಲಾಸ್ಟ್
ಬರುತ್ತೆ."
*
"ನೀವೆಲ್ಲ
ನೇರಪ್ರಸಾರ
ಎಂಜಾಯ್
ಮಾಡಿದೀರಿ
ಅನ್ಸುತ್ತೆ.
ನಮಸ್ಕಾರ."
-
ಹೀಗೆ
ಕನ್ನಡನಾಡಿನ
ಹಬ್ಬದಲ್ಲಿ
ಆಂಗ್ಲ
ಆಣಿಮುತ್ತುಗಳನ್ನು
ಉದುರಿಸುತ್ತಿದ್ದುದು
ಶಂಕರ್
ಪ್ರಕಾಶ್,
ನಾಗಣ್ಣ,
ಜಗದೀಶ್
ಈ
ನಿರೂಪಕ
ತ್ರಿಮೂರ್ತಿ
ತಂಡ.
ಕನ್ನಡಕ್ಕಾಗಿ
ಕೈಯೆತ್ತುವುದು
ದಂಡ!
***
*
"ಆನೆ
ಬಲರಾಮ
ತನ್ನ
ಸಹಪಾಠಿ(!)ಗಳೊಂದಿಗೆ
ಬರ್ತಾ
ಇದ್ದಾನೆ."
*
"ದಸರಾ
ವೈಭವ
ಆಹೋ(!)ರಾತ್ರಿ
ಇರುವಂಥದು."
*
"ದಸರಾ
ಸಂದರ್ಭದ
ಸಂದರ್ಭದಲ್ಲಿ..."
*
"ಈಗ
ಒಂದು
ಷಿಪ್
ನೋಡ್ತಾ
ಇದೀವಿ.
ದೋಣಿಯನ್ನ
ನೋಡ್ತಾ
ಇದೀವಿ."
*
"ಅಣ್ಣಿಗೇರಿಯ
ದೇವಸ್ಥಾನದಲ್ಲಿ
ಪಂಪಕವಿಯ
ಪ್ರೌಢಿಮೆಯನ್ನು(?)(!)
ನೋಡಿದಿವಿ."
-
ಇವು
ವಿರೂಪಕ,
ಕ್ಷಮಿಸಿ,
ನಿರೂಪಕ
ಶಂಕರ್
ಪ್ರಕಾಶರ
ಪ್ರಕಾಶಮಾನ
ನುಡಿಗಳು.
ಅರ್ಥಶುದ್ಧಿ,
ಭಾಷಾಶುದ್ಧಿ,
ವ್ಯಾಕರಣ?
ಲೇಕರ್
ಕ್ಯಾ
ಕರ್ನಾ?
***
*
"ಜಿಲ್ಲಾ
ಪಂಚಾಯತ್
ಉಡುಪಿಯನ್ನು
ನೋಡುತ್ತಿದ್ದೇವೆ.
ಜಿಲ್ಲಾ
ಪಂಚಾಯತ್
ಕೊಪ್ಪಳವನ್ನು
ನೋಡುತ್ತಿದ್ದೇವೆ..."
-
ಇದು
ಶಂಕರ
ಉವಾಚ.
ಆದರೆ
ನಾವು
ಅಲ್ಲಿ
ನೋಡುತ್ತಿದ್ದುದು
ಸ್ತಬ್ಧಚಿತ್ರರೂಪಿ
ದೇವಸ್ಥಾನ,
ಕೋಟೆ...!
ಶಂಭೋ
ಶಂಕರ!
***
*
'ಚಂದನ'
ನಿರೂಪಕನ
ಅಳತೆಗೋಲಿನ
ಪ್ರಕಾರ
ಜಂಬೂ
ಸವಾರಿ
ಮೆರವಣಿಗೆಯ
ಉದ್ದ
ನಾಲ್ಕು
ಕಿಲೋಮೀಟರ್.
-
'ಟಿವಿ
9'
ನಿರೂಪಕನ
ಅಳತೆಗೋಲಿನ
ಪ್ರಕಾರ
ಮೆರವಣಿಗೆಯ
ಉದ್ದ
ಎರಡು
ಕಿಲೋಮೀಟರ್!
***
*
ಶಂಕರ್
ಪ್ರಕಾಶ್
ಅವರು
ವೀಕ್ಷಕ
ವಿವರಣೆಯುದ್ದಕ್ಕೂ
"ಬಹುಶಃ,
ಬಹುಶಃ"
ಎನ್ನುತ್ತಿದ್ದರು.
-
ಬಹುಶಃ
ಅವರಿಗೆ
ತಮ್ಮ
ಮಾತಿನಮೇಲೇ
ನಂಬಿಕೆಯಿರಲಿಲ್ಲ!
ಇಂತಹವರನ್ನು
ಹೊಂದಿರುವ
ಭಾರತ
ನಿಜಕ್ಕೂ
ಪ್ರಕಾಶಿಸುತ್ತಿದೆ.
***
*
ಅಂಬಾರಿಯಲ್ಲಿನ
ಚಾಮುಂಡೇಶ್ವರಿಗೆ
ಪುಷ್ಪಾರ್ಚನೆಗೈದು
ವೇದಿಕೆಯಿಂದ
ಕೆಳಗಿಳಿದು
ಹೋದ
ಮುಖ್ಯಮಂತ್ರಿಗಳು
ಮಾಧ್ಯಮದವರ
ಕೋರಿಕೆಯಂತೆ
ಅವರ
ಕ್ಯಾಮೆರಾಗಳಿಗಾಗಿ
ಮತ್ತೊಮ್ಮೆ
ವೇದಿಕೆ
ಹತ್ತಿ
ಮತ್ತೊಮ್ಮೆ
ಪುಷ್ಪಾರ್ಚನೆ
ಮಾಡಿದರು!
-
ಮಾಧ್ಯಮವು
ನಿಜಕ್ಕೂ
ಶಕ್ತಿಶಾಲಿ.
***
*
'ನವಭಾರತ
ರಥ'
ಎಂಬ
ಹೆಸರು
ಹೊತ್ತ,
ಲೋಕಸಭೆ
ಕಟ್ಟಡದ
ಸ್ತಬ್ಧಚಿತ್ರವನ್ನು
ಯಂತ್ರದೋಷದಿಂದಾಗಿ
ಒಂದಷ್ಟು
ದೂರದವರೆಗೆ
ಜನರು
ತಳ್ಳಬೇಕಾಯಿತು!
-
ಎಷ್ಟು
ಅರ್ಥಪೂರ್ಣ!
-
ಪ್ರಿಯ
ವೀಕ್ಷಕರೇ,
ಅಲ್ಲ,
ಪ್ರಿಯ
ಓದುಗರೇ,
ಇದು
ಈ
ಸಲದ
ಮೈಸೂರು
ದಸರಾ
ಜಂಬೂಸವಾರಿಯ
ಸ್ತಬ್ಧಚಿತ್ರಗಳ
ಎಡೆ(ಯಲ್ಲಿ)
ನಾನು
ಗಮನಿಸಿದ
ಚಿತ್ರ
ವಿಚಿತ್ರ
ನಡೆ.
| ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7