ನಟ ದರ್ಶನ್ರ ‘ಕಾಟೇರ’ ಸಿನಿಮಾ ನೋಡಿ ಯಾರು ಏನಂದ್ರು?
ದರ್ಶನ್ ಅವರ ಕಾಟೇರ ಸಿನಿಮಾ ಎಲ್ಲೆಲ್ಲೂ ಅಬ್ಬರಿಸುತ್ತಿದೆ ಅಭಿಮಾನಿಗಳಿಗೆ ಮಾತ್ರವಲ್ಲ ಈ ಸಿನಿಮಾ ವಿಮರ್ಶಕರಿಗೆ ಕೂಡ ತುಂಬಾ ಹಿಡಿಸಿದೆ. ಅದರಲ್ಲೂ ರೈತರು & ಸಮಾಜದ ಅನಿಷ್ಠ ಪದ್ಧತಿಗಳ ವಿರುದ್ಧ ಅಚ್ಚುಕಟ್ಟಾಗಿ ಸಂದೇಶ ನೀಡಲಾಗಿದೆ ಎಂಬ ಸಂತಸ ಇದೀಗ ಎಲ್ಲೆಲ್ಲೂ ಹಬ್ಬಿದೆ. ಹಾಗೇ ದರ್ಶನ್ರ 'ಕಾಟೇರ' ಸಿನಿಮಾ, ಹಳೆಯ ದರ್ಶನ್ ಅವರನ್ನು ನೆನಪು ಮಾಡುತ್ತಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಹಾಗಾದ್ರೆ ಯಾರು ಯಾರು ಏನಂದ್ರು?
ಕನ್ನಡದ ಸ್ಕ್ರೀನ್ ರೈಟರ್ ಎ ಎಸ್ ಜಿ ಅವರು ಕಾಟೇರ ಬಗ್ಗೆ ಪೋಸ್ಟ್ ಹಾಕಿ, 'ಸರಿಯಾಗಿ ಬಳುಸ್ಕೊಳೋರು ಸಿಕ್ರೆ ಒಬ್ಬ ಸ್ಟಾರು ಹೆಂಗಾದ್ರು ಬಗ್ತನೆ ಅನ್ನೋದಕ್ಕೆ ಈ ಸಿನಿಮಾದಲ್ಲಿ ದರ್ಶನ್ ಅಭಿನಯಿಸಿರೋದು ಮತ್ತು ತೊಡಗುಸ್ಕೊಂಡಿರೋದು ದೊಡ್ ಉಧಾಹರಣೆ. ನವಗ್ರಹ, ಗಜ, ಸಾರಥಿ ನಂತರ ನನಗೆ ಹೆಚ್ಚು ಇಷ್ಟವಾದ ದರ್ಶನ್ ಅವರ ಸಿನಿಮಾ ಕಾಟೇರಾ ❤️ ತರುಣ್ ಸುಧೀರ್ ಅವರು ಕಮರ್ಶಿಯಲ್ ಜೋನ್ ಒಳಗಡೆಯೇ ತಮ್ಮನ್ನ ತಾವು ಪ್ರೂವ್ ಮಾಡ್ಕೊಳ್ತಿರೋ ರೀತಿಯಂತೂ ಬೊಂಬಾಟ್. Hats off man ❤️❤️❤️'

'ತುಂಬಾ ದಿನ ಆದ್ಮೇಲೆ ಮಾಸ್ತಿ'
'ಜಡೇಶ್ ಚಿತ್ರಕತೆ ಒಳಗೆ ಇದಾರೆ ಅನ್ನುವಾಗ ಸೂಕ್ಷ್ಮವಾದದ್ದೇ ಒಂದೇನೋ ಇರುತ್ತೆ ಅಂತ ನಿರೀಕ್ಷೆಸಿದ್ದೆ ನನ್ನ ನಿರೀಕ್ಷೆನ ಸುಳ್ಳು ಮಾಡ್ಲಿಲ್ಲ. ತುಂಬಾ ದಿನ ಆದ್ಮೇಲೆ ಮಾಸ್ತಿ ಅಣ್ಣನ ಸಂಭಾಷಣೆ ದೊಡ್ಡಮಟ್ಟದ ತೃಪ್ತಿ ಕೊಟ್ಟವು ❤️❤️❤️ ಮೊದಲಾರ್ಧದ ಎರಡು ಲವ್ ಸಾಂಗು ಕಟ್ ಆಗಿ, ಹೀರೋಯಿನ್ ಬೇರೆ ಯಾರಾದ್ರೂ ಇದ್ದಿದ್ರೆ ಗಡಿಗೆ ಹಾಲ್ ಕುಡಿದಷ್ಟು ಖುಷಿ ಸಿಗ್ತಿತ್ತು. Dont miss it ❤️❤️❤️' ಎಂದು ಬರೆದುಕೊಂಡಿದ್ದಾರೆ.
ಸರಿಯಾಗಿ ಬಳುಸ್ಕೊಳೋರು ಸಿಕ್ರೆ ಒಬ್ಬ ಸ್ಟಾರು ಹೆಂಗಾದ್ರು ಬಗ್ತನೆ ಅನ್ನೋದಕ್ಕೆ ಈ ಸಿನಿಮಾದಲ್ಲಿ ದರ್ಶನ್ ಅಭಿನಯಿಸಿರೋದು ಮತ್ತು...
Posted by ಎ ಎಸ್ ಜಿ onThursday, 28 December 2023
'ದರ್ಶನ್ ಸರ್ ಅವರ ಅಭಿಮಾನಿಗಳಿಗೆ...'
ಹಾಗೇ ಕನ್ನಡದ ನಿರ್ದೇಶಕ ಮಂಸೋರೆ ಅವರು ಕೂಡ ಕಾಟೇರ ಬಗ್ಗೆ ಬರೆದುಕೊಂಡು, 'With some interesting dialogues , ಇತ್ತೀಚೆಗೆ ಯಾವ ಜನಪ್ರಿಯ ಸಿನಿಮಾದಲ್ಲೂ ಕಾಣದಿದ್ದ ಜಾತಿ ತಾರತಮ್ಯದ ಪ್ರಸ್ತಾಪದ ಅಂಶಗಳೊಂದಿಗೆ, ದರ್ಶನ್ ಸರ್ ಅವರ ಅಭಿಮಾನಿಗಳಿಗೆ ಫುಲ್ ಬಾಡೂಟದ ಸಿನಿಮಾ #ಕಾಟೇರಾ ಅದರಲ್ಲೂ Darshan Thoogudeepa Srinivas ಅವರ ಇತ್ತೀಚಿನ ಸಿನಿಮಾಗಳಲ್ಲೇ ವಿಶೇಷವಾದ ಸಿನಿಮಾ #kaatera ಇದಕ್ಕೆ ಕಾರಣ Jadeshaa K Hampi ಅವರ ನೆಲದ ಕತೆ . ಶುಭವಾಗಲಿ ಕಾಟೇರಾ ಸಿನಿಮಾ ಮತ್ತು ತಂಡಕ್ಕೆ . 💐💐💐❤️❤️❤️🔥🔥🔥' ಎಂದಿದ್ದಾರೆ.
With some interesting dialogues , ಇತ್ತೀಚೆಗೆ ಯಾವ ಜನಪ್ರಿಯ ಸಿನಿಮಾದಲ್ಲೂ ಕಾಣದಿದ್ದ ಜಾತಿ ತಾರತಮ್ಯದ ಪ್ರಸ್ತಾಪದ ಅಂಶಗಳೊಂದಿಗೆ,...
Posted by Manso Re onThursday, 28 December 2023

ಮತ್ತೊಂದು ಕಡೆ ಬಾಲು ವಿಎಲ್ ಅವರು, 'ಈದಿನದ ಅನಿಸಿಕೆ ಯಲ್ಲಿ ಹೇಳದೆ ಉಳಿದದ್ದು.
ಬಹಳ ದಿನಗಳ ನಂತರೆ ಸ್ಟಾರ್ ನ ಚಿತ್ರದಲ್ಲಿ ಕಂಟೆಂಟ್ ಇದೆ. ಬಿಲ್ಡ್ ಅಪ್ ಇಲ್ಲ! this is great relief. ಪೋಷಕ ಪಾತ್ರಗಳಿಗೆ ಹಳೇ ನಟರು ಇಲ್ಲದೆ- ಬೇರೆ ಹೋಸ ನಟರುಗಳು ಇದ್ದು- ವಿಲ್ಲನ್ ಪಾತ್ರಗಳ ರೈಟಿಂಗ್ ಬಗ್ಗೆ ಸ್ವಲ್ಪ ಗಮನ ಕೊಟ್ಟಿದ್ದರೆ- ಇ cliche ಅ್ಯಾಕಿಂಗ್ ಬಿಟ್ಟು ಬೇರೆ ರೀತಿಯಲ್ಲಿ ಮಾಡಿಸಿದರೆ... ಗೋಮಾರದಹಳ್ಳಿ ಮಂಜುನಾಥ್ ಸಿರಾ ಅವರ ನಟನೆ ಉತ್ತಮ. ಸಿಕ್ಕ ಕಡಿಮೆ ಅವದಿಯಲ್ಲೆ !! ಏನೆ ಹೇಳಿ ನಿರ್ದೇಶ ಚಿತ್ರವನ್ನು ಮುಗಿಸಿದ ರೀತಿ ಮತ್ತು ಆವರು ಚೂಸ್ ಮಾಡಿರುವ ಸಬ್ಜೆಕ್ಟ್ ಗೋಸ್ಕರ ನೋಡಲೇಬೇಕಾದ ಸಿನಿಮಾ. ನಿರ್ದೇಶಕ ತರುಣ್ ಕಿಶೊರ್ ಅವರ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ಕುತೂಹಲ ಮೂಡಿಸಿದ್ದು ಅಂತ ಸತ್ಯ!' ಎಂದು ಬರೆದುಕೊಂಡಿದ್ದಾರೆ.
ಕಾಟೇರನಿರ್ದೇಶಕ - ತರುಣ್ ಕಿಶೋರ್ ಸುದಿರ್ಈದಿನದ ಅನಿಸಿಕೆ ಯಲ್ಲಿ ಹೇಳದೆ ಉಳಿದದ್ದು.ಬಹಳ ದಿನಗಳ ನಂತರೆ ಸ್ಟಾರ್ ನ ಚಿತ್ರದಲ್ಲಿ ಕಂಟೆಂಟ್...
Posted by Balu VL onFriday, 29 December 2023
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications