ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ
ಬಹುಸಂಸ್ಕೃತಿ ಮತ್ತು ಬಹುಭಾಷೆಗಳ ಆಗರವಾಗಿರುವ ಭಾರತದಲ್ಲಿ ಮೊಬೈಲ್ ಮಾರುಕಟ್ಟೆ ಅತಿ ವೇಗವಾದ ಬೆಳವಣಿಗೆ ಕಂಡಿದೆ. ಏಷ್ಯಾದಲ್ಲಿರುವ 650 ಮಿಲಿಯನ್ ಗ್ರಾಹಕರಲ್ಲಿ ಕೇವಲ ಶೇ.12ರಷ್ಟು ಜನ ಮಾತ್ರ ಸರಾಗವಾಗಿ ಇಂಗ್ಲಿಷ್ ಓದಬಲ್ಲರು. ದೇಶದ ಬಹುತೇಕ ಮೊಬೈಲ್ ಬಳಕೆದಾರರು ನಾನಾ ಕಾರಣಗಳಿಂದಾಗಿ ಸುದ್ದಿಗಳನ್ನು ತಮ್ಮ ಮಾತೃಭಾಷೆಯಲ್ಲಿಯೇ ಓದಲು ಇಷ್ಟಪಡುತ್ತಾರೆ. ಈ ಬಳಗಕ್ಕೆ ಕನ್ನಡವನ್ನು ಸೇರ್ಪಡೆ ಮಾಡಿರುವುದು ನಿಮ್ಮ ಅಚ್ಚುಮೆಚ್ಚಿನ ದಟ್ಸ್ ಕನ್ನಡ ಡಾಟ್ ಕಾಮ್ ನ ಹೆಮ್ಮೆ.
ಪ್ರಾದೇಶಿಕ ಭಾಷೆಯಲ್ಲಿ ಸುದ್ದಿಗಳನ್ನು ಓದಲು ಮತ್ತು ಬಳಸಲು ಅನೇಕ ಅಡೆತಡೆಗಳು ಎದುರಾಗಿವೆ. ಮುಖ್ಯವಾಗಿ ಕನ್ನಡ ಲಿಪಿಗಳು ಗೋಚರಿಸದೆ ಚೌಕಾಕಾರದ ಖಾಲಿ ಡಬ್ಬಿಗಳು ಕಾಣಿಸುವುದನ್ನು ನೀವು ಗಮನಿಸಿರುತ್ತೀರಿ. ಇಂಥ ಸಮಸ್ಯೆಗಳನ್ನು ಗುರುತಿಸಿ, ನಿವಾರಿಸಿ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದೇ ಬೃಹತ್ ಕೆಲಸ. ಇದನ್ನು ಮನಗಂಡಿರುವ ಒನ್ ಇಂಡಿಯಾ ಹೊಸತೊಂದು ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಪ್ರಾದೇಶಿಕ ಭಾಷೆಯನ್ನು ಮೊಬೈಲಿನಲ್ಲಿ ಓದುವಾಗ ಎದುರಾಗುವ ಎಲ್ಲಾ ತಾಪತ್ರಯಗಳನ್ನು ತೊಡೆದುಹಾಕಿದೆ.
ಮೊಬೈಲ್ ಫೋನಿನಲ್ಲಿ ಸರಾಗವಾಗಿ ಕನ್ನಡ ಸುದ್ದಿ ಓದುಕೊಳ್ಳುವುದಕ್ಕೆ ನೀವು ಮಾಡಬೇಕಿರುವ ಕೆಲಸ ತುಂಬ ಸಿಂಪಲ್. ಮೊದಲು ಇಲ್ಲಿ ಕ್ಲಿಕ್ಕಿಸಿ ಆನಂತರ ಒಂದು ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ನೆನಪಿರಲಿ ಇದು ಉಚಿತ.
ಅಪ್ಲಿಕೇಷನ್ ಒಂದು ಬಾರಿ ಇನ್ ಸ್ಟಾಲ್ ಆದರೆ, ದಟ್ಸ್ ಕನ್ನಡ ಸುದ್ದಿಗಳನ್ನು ನೀವಲ್ಲ, ಕನ್ನಡ ಸುದ್ದಿಗಳು ನಿಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತವೆ. ಸುದ್ದಿಗಳು ಮಾತ್ರವಲ್ಲ ಸಿನೆಮಾ, ಅಡುಗೆ, ಆರೋಗ್ಯ, ಎನ್ಆರ್ಐ, ನಗೆಹನಿ, ಕಾಮಸೂತ್ರ ಮುಂತಾದವುಗಳನ್ನು ನಿಮ್ಮ ಮೊಬೈಲ್ ಹ್ಯಾಂಡ್ ಸೆಟ್ಟಿನಲ್ಲಿಯೇ ಓದಿ ಆನಂದಿಸಬಹುದು.
ಇದರರ್ಥ, ನಿಮ್ಮ ನೆಚ್ಚಿನ ದಟ್ಸ್ ಕನ್ನಡ ಅಂತರ್ಜಾಲದಲ್ಲಿ ಪ್ರಕಟವಾಗುವ ಎಲ್ಲ ಕನ್ನಡ ಸುದ್ದಿಗಳನ್ನು ಓದಲು ಡೆಸ್ಕ್ ಟಾಪ್ ಮುಂದೆ ಇರಲೇಬೇಕಿಲ್ಲ. ಬ್ಲಾಕ್ ಬೆರ್ರಿ, ನೋಕಿಯಾ, ಸೋನಿ ಎರಿಕ್ ಸನ್, ಸ್ಯಾಮ್ಸಂಗ್ ಸೆಟ್ ಯಾವುದೇ ಆಗಿರಲಿ ನಿಮ್ಮ ಮೊಬೈಲಿನಲ್ಲಿ ಇಂಟರ್ನೆಟ್ ಸಂಪರ್ಕ (ಜಿಪಿಆರ್ಎಸ್) ಇದ್ದರೆ ನೀವು ಎಲ್ಲೇ ಇದ್ದರೂ, ಹ್ಯಾಂಡ್ ಸೆಟ್ಟಿನಲ್ಲಿ ಕನ್ನಡ ಭಾಷೆ ಇಲ್ಲದಿದ್ದರೂ ಕನ್ನಡ ಓದಬಹುದು.
ನಿಮ್ಮ ಸೆಲ್ ಫೋನಿನಲ್ಲಿ ಕನ್ನಡ ಓದಿದ ಸಂತಸವನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಕನ್ನಡಕ್ಕೆ ಸಂಬಂಧಿಸಿದ ಇಂಥ ಹೊಸ ಹೊಸ ಪ್ರಯೋಗಗಳಿಗೆ ಮತ್ತು ಸೇವೆಗಳಿಗೆ ದಟ್ಸ್ ಕನ್ನಡ ಸದಾ ಸಿದ್ಧ. ಮತ್ತೇನಾದರೂ ಪ್ರಶ್ನೆಗಳಿದ್ದರೆ ನಮಗೆ ಬರೆಯಿರಿ. ವಿಳಾಸ : [email protected]
ಓದುಗರ ಗಮನಕ್ಕೆ : ಉಚಿತ ಅಪ್ಲಿಕೇಷನ್ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.
ಮೊಬೈಲಲ್ಲಿ ದಟ್ಸ್ ಕನ್ನಡ ಸುದ್ದಿ ಓದುವ ಮೊದಲು ಕೆಲ ಸೂಚನೆಗಳನ್ನು ಓದಿರಿ.
1) ನಿಮ್ಮ ಮೊಬೈಲಲ್ಲಿ ಜಿಪಿಆರ್ಎಸ್ ಸೌಲಭ್ಯ ಇರಬೇಕು.
2) ನಂತರ, ಜಿಪಿಆರ್ಎಸ್ ಅನ್ನು ಸೇವಾ ಸಂಸ್ಥೆಯಿಂದ ಆಕ್ಟಿವೇಟ್ ಮಾಡಿಸಿಕೊಳ್ಳಿ.
3) ಜಿಪಿಆರ್ಎಸ್ ಆಕ್ಟಿವೇಟ್ ಆದನಂತರ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಸಿಕೊಂಡು, ಸುದ್ದಿ ಕನ್ನಡದಲ್ಲಿ ಓದಲು ಪ್ರಾರಂಭಿಸಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ













Click it and Unblock the Notifications