Elephant Arjuna Death: ದಸರಾ ಆನೆ ಸಾವಿನ ಸುದ್ದಿ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಜನರ ಕಣ್ಣೀರು
ಕನ್ನಡಿಗರು ಮತ್ತು ದಸರಾ ಪ್ರೇಮಿಗಳು ಇಂದು ಕಣ್ಣೀರು ಹಾಕುತ್ತಿದ್ದಾರೆ. ದಸರಾ ವೈಭವ ಮತ್ತಷ್ಟು ಮೇಳೈಸುವಂತೆ ಮಾಡುವ ವಿಶ್ವವಿಖ್ಯಾತ ಜಂಬೂ ಸವಾರಿಯಲ್ಲಿ ನಾಡ ದೇವತೆ ಚಾಮುಂಡಿ ದೇವಿಯ ಅಂಬಾರಿ ಹೊತ್ತಿದ್ದ, ಅರ್ಜುನ ಆನೆ ಇಂದು ಮೃತಪಟ್ಟಿದೆ. ಇದು ಕೋಟ್ಯಂತರ ಜನರ ಕಣ್ಣೀರಿಗೆ ಕಾರಣವಾಗಿರುವ ಸಮಯದಲ್ಲೇ, ಜಗತ್ತಿನಾದ್ಯಂತ ಕನ್ನಡ ನಾಡಿನ ಈ ಆಘಾತಕಾರಿ ಸುದ್ದಿ ವೈರಲ್ ಆಗುತ್ತಿದೆ.
ಶತಮಾನಗಳ ಹಿಂದೆ ಮೈಸೂರು ಮಹಾರಾಜರು ಆರಂಭ ಮಾಡಿದ್ದ, ಪ್ರಪಂಚದ ಮೂಲೆ ಮೂಲೆಯಲ್ಲಿ ಸದ್ದು & ಖ್ಯಾತಿ ಗಳಿಸಿರುವ 'ಮೈಸೂರು ದಸರಾ' ವರ್ಲ್ಡ್ ಫೇಮಸ್. ಹೀಗೆ ದಸರಾ ಹಬ್ಬದಲ್ಲಿ ಚಿನ್ನದ ಅಂಬಾರಿ ಮೇಲೆ ಚಾಮುಂಡೇಶ್ವರಿ ದೇವಿ ವಿಗ್ರಹ, ಮೆರವಣಿಗೆ ಮಾಡಲಾಗುತ್ತದೆ.

ಜಂಬೂ ಸವಾರಿ ಎಂದು ಕರೆಯುವ ಉತ್ಸವಕ್ಕೆ, ಈಗ ಮೃತಪಟ್ಟಿರುವ ಅರ್ಜುನ ಸತತ 8 ವರ್ಷ ಸಾರಥಿಯಾಗಿದ್ದ. ಆದರೆ ಇಂದು ಕಾಡಾನೆಯ ಜೊತೆಗೆ, ಕನ್ನಡ ನಾಡಿನ ಜನರ ಜೀವ ಉಳಿಸಲು ಸೆಣೆಸಾಟ ನಡೆಸಿ ಜೀವ ಬಿಟ್ಟಿದೆ ಅರ್ಜುನ ಆನೆ. ಹೀಗಾಗಿ ಕನ್ನಡಿಗರ ಪ್ರೀತಿಯ ಅರ್ಜುನನ ನೆನಪಿನಲ್ಲಿ ಕೋಟ್ಯಂತರ ಜನ ಕಣ್ಣೀರು ಹಾಕುತ್ತಿದ್ದಾರೆ.
ಕಾಡಾನೆ ಹಿಡಿಯುವ ವೇಳೆ ಸಾವು
ಅಷ್ಟಕ್ಕೂ ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಯಸಳೂರು, ಬಾಳೆಕೆರೆ ಅರಣ್ಯಗಳಲ್ಲಿ ಕಾಡಾನೆ ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರ್ಜುನ ಸೇರಿ 4 ಪಳಗಿದ ಆನೆಗಳ ಜೊತೆಗೆ ಇಂದು ಕಾರ್ಯಾಚರಣೆ ಆರಂಭಿಸಿದ್ದರು. ಆನೆ ಒಂದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡುತ್ತಿದ್ದ ವೇಲೆ ಅರ್ಜುನ ಮೇಲೆ ಒಂಟಿ ಸಲಗ ಒಂದು ದಿಢೀರ್ ದಾಳಿ ಮಾಡಿದೆ.
ತಾಯಿ ಚಾಮುಂಡೇಶ್ವರಿಯ ಬಳಿಗೆ "ಅರ್ಜುನ"😭
— Hari Krishna M B (@hari_mattur) December 4, 2023
ಕಾಡಾನೆ ದಾಳಿಗೆ ಪ್ರಾಣ ಬಿಟ್ಟಿರುವುದು ಅತ್ಯಂತ ದುಃಖಕರ ಸಂಗತಿ. #ಅರ್ಜುನ #elephant pic.twitter.com/gIOLLEYEtm
ಒಂಟಿ ಸಲಗ ದಾಳಿ ಮಾಡುತ್ತಿದ್ದಂತೆ ಉಳಿದ 3 ಸಾಕಾನೆ ಹಿಂದೆ ಹೋಗಿವೆ. ಆಗಲೇ ಕಾಡಾನೆ & ಅರ್ಜುನ ಆನೆ ಕಾದಾಟ ಶುರುವಾಗಿದೆ. ಕೂಡಲೇ ಮಾವುತ ಇಳಿದು ದೂರ ಓಡಿದ್ದಾರೆ ಅಂತಾ ಹೇಳಲಾಗಿದೆ. ಆದರೆ ಹೀಗೆ ಮಾವುತ ಕೂಡ ದೂರ ಹೋದಾಗ ಕಾಡಾನೆ ಮತ್ತು ಅರ್ಜುನ ಆನೆ ನಡುವೆ ಘೋರ ಗಲಾಟೆ ನಡೆದಿದೆ.
ಆಗಲೇ, ಘೋರ ದುರಂತ ಕೂಡ ನಡೆದು ಹೋಗಿದೆ ಅಂತಾ ಹೇಳಲಾಗುತ್ತಿದೆ. ಈ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಂಬಾರಿಯ ಆನೆ ಅರ್ಜುನ ಜೀವ ಬಿಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಇಡೀ ಜಗತ್ತು ಕಣ್ಣೀರು ಹಾಕುತ್ತಿದೆ.

ಅರ್ಜುನ ಅಂಬಾರಿ ಹೊತ್ತಿದ್ದು ಯಾವಾಗ?
2012 ರಿಂದ 2019ರ ತನಕ ಅರ್ಜುನ ಆನೆಯು ಮೈಸೂರು ದಸರಾ ಮಹೊತ್ಸವದಲ್ಲಿ ಅಂಬಾರಿ ಹೊತ್ತು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿತ್ತು. ಇಷ್ಟೆ ಅಲ್ಲದೆ ಕಾಡಾನೆಗಳು ನಾಡಿಗೆ ಬಂದ ಸಮಯದಲ್ಲಿ ಇದೇ ಅರ್ಜುನ ಆನೆ ಮುಂದೆ ನುಗ್ಗಿ, ನಾಡಿನ ಜನರನ್ನ ರಕ್ಷಣೆ ಮಾಡಿತ್ತು.
ಆದರೆ ಈಗ ಅರ್ಜುನ ಆನೆಯೇ ಜೀವ ಬಿಟ್ಟಿದೆ. ಅದೂ ಕಾಡಾನೆಗಳ ಜೊತೆಗಿನ ಸೆಣೆಸಾಟ ಸಮಯದಲ್ಲಿ. ಹೀಗಾಗಿ ಕನ್ನಡಿಗರು ಸೇರಿ, ಇಡೀ ಭಾರತೀಯರು ದಸರಾ ಆನೆ ಅರ್ಜುನನ ಸಾವಿಗೆ ಕಣ್ಣೀರು ಹಾಕುತ್ತಿದ್ದಾರೆ.
ಭಾವಪೂರ್ಣ ವಿದಾಯಗಳು ಕ್ಯಾಪ್ಟನ್ ಅರ್ಜುನ
— Deepak (@ItsDeepakR) December 4, 2023
🙏🏽🙏🏽🐘🐘 💔💔#CaptainArjuna #ಕ್ಯಾಪ್ಟನ್ಅರ್ಜುನ #Arjuna #ಅರ್ಜುನ #ArjunaElephant #MysoreDasara pic.twitter.com/AQbkU69BEE
ಒಟ್ನಲ್ಲಿ ನಮ್ಮ ಅರ್ಜುನನ ಸಾವು ಇಡೀ ಜಗತ್ತಿಗೆ ಆಘಾತ ನೀಡಿದೆ. ಹಾಗೇ ಈ ಘಟನೆಯ ಬಗ್ಗೆ ಚರ್ಚೆ ಕೂಡ ಶುರುವಾಗಿದೆ. ಮನುಷ್ಯ ಹೀಗೆ ಕಾಡು ಒತ್ತುವರಿ ಮಾಡಿಕೊಳ್ಳುತ್ತಿರುವ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿರುವುದು, ಕಾಡಾನೆಗಳು ನಾಡಿಗೆ ಬರುತ್ತಿವೆ.
ಈ ಹಿನ್ನೆಲೆ ಸಾಕಾನೆಗಳನ್ನ ಬಳಸಿ ಕಾಡಾನೆ ಓಡಿಸಲು ಯತ್ನಿಸಲಾಗುತ್ತಿದೆ. ಆದ್ರೆ ಇದರಿಂದಾಗಿ ಅಮಾಯಕ ಜೀವಿಗಳು ಜೀವವನ್ನೇ ಕಳೆದುಕೊಳ್ಳುತ್ತಿವೆ, ಅಂತಾ ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ಹೊರಹಾಕುತ್ತಿದ್ದಾರೆ. ಹೀಗೆ ಕಾಡು ನಾಶದ ವಿರುದ್ಧ ಕಠಿಣವಾದ ಕ್ರಮ ಅಗತ್ಯ ಎಂಬ ಒತ್ತಾಯ ಕೂಡ ಕೇಳಿಬಂದಿದೆ.
-
ಇನ್ಮುಂದೆ KPSC ಮೂಲಕ ಪ್ರತಿ ವರ್ಷ ಗ್ರೂಪ್ A, B ಅಧಿಕಾರಿಗಳ ನೇಮಕಾತಿ: ಕೃಷ್ಣ ಬೈರೇಗೌಡ ಸ್ಪಷ್ಟನೆ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ












Click it and Unblock the Notifications