ಭಾರತ ತಂಡದ ಅತ್ಯುತ್ತಮ ನಾಯಕನಾಗಬಲ್ಲ ಸಾಮರ್ಥ್ಯ ನನ್ನ ಅಣ್ಣನಿಗಿದೆ: ಶ್ರೇಯಸ್‌ ಅಯ್ಯರ್‌ಗೆ ತಂಗಿ ಶ್ರೇಷ್ಠಾ ಬೆಂಬಲ

Shresta Iyer: ಐಪಿಎಲ್‌ನಲ್ಲಿ ಶ್ರೇಯಸ್‌ ಅಯ್ಯರ್ ಅವರು ಪಂಜಾಬ್‌ ಕಿಂಗ್ಸ್ ತಂಡವನ್ನು ಯಶಸ್ವಿ ನಾಯಕನಾಗಿ ಮುನ್ನಡೆಸಿದ್ದರು. ಇದನ್ನ ಪರಿಗಣಿಸಿದ ಬಿಸಿಸಿಐ ಅವರನ್ನು ಟೀಮ್ ಇಂಡಿಯಾದ ಟಿ20 ನಾಯಕನಾಗಿ ಆಯ್ಕೆ ಮಾಡಿತು. ಆದರೆ ಅಯ್ಯರ್ ನಾಯಕತ್ವದಲ್ಲಿ ಭಾರತ ಇದುವರೆಗೂ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಬದಲಾಗಿ ಸತತ ಸೋಲು ಕಾಣುತ್ತಿದ್ದು, ಈ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಶ್ರೇಷ್ಠಾ ಅಯ್ಯರ್ ತನ್ನ ಅಣ್ಣನ ಬೆಂಬಲಕ್ಕೆ ನಿಂತು ಮಹತ್ವದ ಹೇಳಿಕೆ ನೀಡಿದ್ದಾರೆ.

ಮೊದಲಿಗೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತವು ಐರ್ಲೆಂಡ್‌ ವಿರುದ್ಧ ನಡೆದ ಟಿ20 ಸರಣಿಯ ಎರಡೂ ಪಂದ್ಯಗಳಲ್ಲೂ ಸೋಲನುಭವಿಸಿದೆ. ಬಳಿಕ ಇಂಗ್ಲೆಂಡ್‌ ವಿರುದ್ಧವೂ ಸತತ ಸೋಲು ಕಾಣುತ್ತಲಿದ್ದು, ಈ ಹಿನ್ನೆಲೆ ಇವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರಗಳೇ ನಡೆಯುತ್ತಿವೆ. ಇದನ್ನ ಗಮನಿಸಿದ ಶ್ರೇಷ್ಠಾ ಅಯ್ಯರ್ ಅವರು ತನ್ನ ಅಣ್ಣ ಶ್ರೇಯಸ್‌ ಪರ ನಿಂತು ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿ ಗಮನ ಸೆಳೆದಿದ್ದಾರೆ.

Shreyas Iyer Sister Shresta Backs Him Amid Captaincy Criticism After India T20 Match Losses Vs ENG

ಶ್ರೇಯಸ್‌ ಬೆಂಬಕ್ಕೆ ನಿಂತ ಸಹೋದರಿ ಶ್ರೇಷ್ಠಾ ಅಯ್ಯರ್

ಇತ್ತೀಚೆಗಷ್ಟೇ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿತು. ಈ ಭಾರಿ ಸೋಲಿನ ಬಳಿಕ ಸಹಜವಾಗಿಯೇ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಹಾಗೂ ತಂತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು. ಇಂತಹ ಸಮಯದಲ್ಲಿ ಶ್ರೇಯಸ್ ಅವರ ಸಹೋದರಿ ಶ್ರೇಷ್ಠಾ ಅಯ್ಯರ್ ಅವರು ತನ್ನ ಸೋದರನಿಗೆ ಬೆಂಬಲ ನೀಡುವಂತಹ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

'ಭಾರತದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಲಿದ್ದಾರೆ'

ತಂಡದ ಸೋಲಿನ ನಂತರ ಶ್ರೇಯಸ್ ಅಯ್ಯರ್ ಬೆನ್ನಿಗೆ ನಿಂತಿರುವ ಶ್ರೇಷ್ಠಾ ಅಯ್ಯರ್, ಸಹೋದರನ ನಾಯಕತ್ವದ ಗುಣಗಳನ್ನು ಪ್ರಶಂಸಿಸಿದ್ದಾರೆ. 'ಸೋಲು, ಗೆಲುವು ಆಟದ ಒಂದು ಭಾಗ. ಒಂದು ಪಂದ್ಯದ ಸೋಲಿನ ಆಧಾರದ ಮೇಲೆ ಒಬ್ಬ ನಾಯಕನ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ. ಶ್ರೇಯಸ್ ಅತ್ಯಂತ ಬದ್ಧತೆ ಮತ್ತು ಕಠಿಣ ಪರಿಶ್ರಮ ಹೊಂದಿರುವ ಆಟಗಾರ. ಭವಿಷ್ಯದಲ್ಲಿ ಅವರು ಭಾರತ ತಂಡದ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಹೊರಹೊಮ್ಮಲಿದ್ದಾರೆ ಎಂಬ ಸಂಪೂರ್ಣ ಭರವಸೆ ನನಗಿದೆ,' ಎಂದು ಹೇಳಿದ್ದಾರೆ.

ಎಲ್ಲರ ಕಣ್ಣು ನಾಯಕ ಶ್ರೇಯಸ್‌ ಅಯ್ಯರ್ ಮೇಲೆ

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ನಾಯಕತ್ವ ವಹಿಸಿರುವ ಶ್ರೇಯಸ್ ಅಯ್ಯರ್ ಅವರ ಮೇಲೆ ಭಾರಿ ನಿರೀಕ್ಷೆಗಳಿವೆ. ಇಂಗ್ಲೆಂಡ್ ತಂಡವು ತನ್ನ ತವರು ನೆಲದಲ್ಲಿ ಅತ್ಯಂತ ಬಲಿಷ್ಠವಾಗಿದ್ದು, ಭಾರತದ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಪೆಟ್ಟು ನೀಡಿ ಸೋಲಿಗೆ ಸುಳಿಗೆ ತಳ್ಳಿತ್ತು. ಈ ಹೀನಾಯ ಸೋಲಿನಿಂದಾಗಿ ತಂಡದ ಕಾರ್ಯತಂತ್ರದ ಲೋಪದೋಷಗಳು ಎದ್ದು ಕಾಣುತ್ತಿದ್ದು, ನಾಯಕನಾಗಿ ಶ್ರೇಯಸ್ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಅಯ್ಯರ್‌ ಶ್ರೇಯಸ್ಸಿಗಾಗಿ ಕಾಯುತ್ತಿರುವ ಅಭಿಮಾನಿಗಳು

ಇನ್ನೂ ಸರಣಿಯ ಮುಂದಿನ ಪಂದ್ಯಗಳಲ್ಲಿ ಕಮ್‌ಬ್ಯಾಕ್ ಮಾಡಲು ಭಾರತ ತಂಡಕ್ಕೆ ಅವಕಾಶವಿದೆ. ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ವೇಗಕ್ಕೆ ಬ್ರೇಕ್ ಹಾಕಲು ಅಯ್ಯರ್ ಪಡೆ ಹೊಸ ರಣತಂತ್ರಗಳೊಂದಿಗೆ ಮೈದಾನಕ್ಕೆ ಇಳಿಯಬೇಕಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಸಹೋದರಿಯಿಂದ ಸಿಕ್ಕಿರುವ ಈ ಬೆಂಬಲ ಮುಂದಿನ ಪಂದ್ಯಗಳಲ್ಲಿ ಅಯ್ಯರ್ ತಾವು ಭರ್ಜರಿ ಕಮ್‌ಬ್ಯಾಕ್‌ ಮಾಡುವುದರೊಂದಿಗೆ ಭಾರತ ತಂಡವನ್ನು ಹೇಗೆ ಜಯದ ಹಾದಿಗೆ ತರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಈ ಕ್ಷಣಕ್ಕಾಗಿ ಟೀಮ್ ಇಂಡಿಯಾ ಕ್ರಿಕೆಟ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+