ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ
ಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು.
ಅಲ್ಲದೇ ರಾಜಭವನಕ್ಕೆ ತೆರೆಳಿದ ಶೋಭಾ ಕರಂದ್ಲಾಜೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರಿಗೂ ದಸರಾ ಮಹೋತ್ಸವದಲ್ಲಿ ಬಾಗವಹಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಮೈಸೂರು ಮಹೋತ್ಸವದ ಚೇರಮನ್ ಬಿ ಪಿ ಮಂಜುನಾಥ ಜಿಲ್ಲಾಧಿಕಾರಿ ಮಣಿವಣ್ಣನ್ ಸಚಿವರೊಂದಿಗಿದ್ದರು.
(ದಟ್ಸ್ ಕನ್ನಡ ವಾರ್ತೆ)
Story first published: Monday, August 31, 2009, 18:12 [IST]