ಬಜೆಟ್ : ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ
ನವದೆಹಲಿ, ಜು. 10 : ಮೊತ್ತ ಮೊದಲ ಬಾರಿಗೆ ಬಜೆಟ್ ಮಂಡಿಸುತ್ತಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನಿರೀಕ್ಷೆಯಂತೆ ಜನಪ್ರಿಯ ಯೋಜನೆಗಳಿಗೆ ಜೋತು ಬೀಳದೆ ಅಭಿವೃದ್ಧಿ ಪಥದತ್ತ ಹೆಜ್ಜೆ ಇಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಭಾರತ ಬಲಿಷ್ಠವಾಗಬೇಕಾದರೆ ಕೆಲ ಕಠಿಣ ಕ್ರಮಗಳನ್ನು ಶ್ರೀಸಾಮಾನ್ಯರು ಎದುರಿಸಲೇಬೇಕಾಗಿದೆ.
ಈ ಎಲ್ಲ ಕಠಿಣ ಕ್ರಮಗಳ ನಡುವೆ ಹೂಡಿಕೆದಾರರಿಗೆ ಒಂದು ಸಣ್ಣ ಸಂತದ ಸುದ್ದಿಯೂ ಇದೆ. ಸಂಬಳವನ್ನೇ ನೆಚ್ಚಿಕೊಂಡಿರುವ ವೈಯಕ್ತಿಕ ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ನಿಂದ 2.5 ಲಕ್ಷ ರು.ಗೆ ಏರಿಸಲಾಗಿದೆ. 60 ವರ್ಷಕ್ಕಿಂತ ಕೆಳಗಿನ ಎಲ್ಲ ತೆರಿಗೆದಾರರಿಗೆ ಇದು ಅನ್ವಯವಾಗಲಿದೆ. 60 ವರ್ಷಕ್ಕಿಂತ ಮೇಲಿನ ತೆರಿಗೆದಾರರ ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷ ರು.ಗೆ ಏರಿಸಲಾಗಿದೆ. [ಕೇಂದ್ರ ಬಜೆಟ್ 2014 : ಮುಖ್ಯಾಂಶಗಳು]

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆಯನ್ನು 1 ಲಕ್ಷ ರು.ನಿಂದ 1.5 ಲಕ್ಷ ರುಗೆ ಏರಿಸಲಾಗಿದೆ. ಇದರರ್ಥ, ವರ್ಷದಲ್ಲಿ ಪಿಪಿಎಫ್ ಅಕೌಂಟ್ ನಲ್ಲಿ ಗರಿಷ್ಠ 1.5 ಲಕ್ಷ ರು. ಹೂಡಿಕೆ ಮಾಡಬಹುದಾಗಿದೆ. ಈ ಸೆಕ್ಷನ್ ಅಡಿಯಲ್ಲಿಯೂ ಸ್ವಲ್ಪಮಟ್ಟದ ತೆರಿಗೆಯನ್ನು ತೆರಿಗೆದಾರರು ಉಳಿಸಬಹುದಾಗಿದೆ.
ಸೆಕ್ಷನ್ 80ಸಿ ಅಡಿಯಲ್ಲಿ ಹೂಡಿಕೆ ಮಿತಿಯನ್ನು ಕನಿಷ್ಠ 2 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಜನರು ಇಟ್ಟುಕೊಂಡಿದ್ದರು. 80ಡಿ ಸೆಕ್ಷನ್ ಅಡಿಯಲ್ಲಿ ಕೂಡ ಮನೆ ಸಾಲದ ಮೇಲಿನ ಬಡ್ಡಿಯ ಮಿತಿಯನ್ನು 1.5 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಲಾಗಿದೆ. ಉಳಿದಂತೆ, ನೇರ ತೆರಿಗೆಯಲ್ಲಿ ಅರುಣ್ ಜೇಟ್ಲಿಯವರು ಯಾವುದೇ ಬದಲಾವಣೆಯನ್ನು ಮಾಡಿಲ್ಲ. ದೇಶ ಭಾರೀ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಅವರು ಬಜೆಟ್ ಮಂಡನೆಯಲ್ಲಿ ಉಲ್ಲೇಖಿಸಿದರು. [ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಆದಾಯದ ಸ್ಲ್ಯಾಬ್ ಮತ್ತು ತೆರಿಗೆ ಕೆಳಗಿನಂತಿರಲಿದೆ
| 2.5 ಲಕ್ಷ ರು.ವರೆಗೆ ಆದಾಯ | ಶೇ.0ರಷ್ಟು ತೆರಿಗೆ |
| 2.5 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ಆದಾಯ | 2.5 ಲಕ್ಷ ರು. ಮೇಲೆ ಶೇ.10ರಷ್ಟು ತೆರಿಗೆ |
| 5 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಆದಾಯ | 5 ಲಕ್ಷ ರು. ಮೇಲೆ 30 ಸಾವಿರ ರು. + ಶೇ.20ರಷ್ಟು ತೆರಿಗೆ |
| 10 ಲಕ್ಷ ರು.ಕ್ಕೂ ಹೆಚ್ಚು ಆದಾಯ | 10 ಲಕ್ಷ ರು. ಮೇಲೆ 1 ಲಕ್ಷ 30 ಸಾವಿರ ರು. + ಶೇ.30ರಷ್ಟು ತೆರಿಗೆ |
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications