Get Updates
Get notified of breaking news, exclusive insights, and must-see stories!

Odisha Income Tax Raid: ₹300 ಕೋಟಿ ದಾಟಿದ ವಶ ಪಡೆದ ಹಣ: ಮುಂದುವರೆದ ಎಣಿಕೆ

ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಈವರೆಗೂ ಪತ್ತೆಯಾದ ನಗದು ಮೊತ್ತ 300 ಕೋಟಿ ರೂಪಾಯಿ ದಾಟಿದೆ. ಇದು ದೇಶದ ಇತಿಹಾದಲ್ಲಿ ಯಾವುದೇ ತನಿಖಾ ಸಂಸ್ಥೆ ನಡೆಸಿದ ದಾಳಿಯಲ್ಲಿ ಸಿಕ್ಕ ತ್ಯಧಿಕ ಹಣವಾಗಿದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.

ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಅದರ ಮಾಲೀಕರು ಮತ್ತು ಇತರರ ವಿರುದ್ಧ ಸತತವಾಗಿ ದಾಳಿಗಳು ನಡೆಯುತ್ತಿವೆ. ತೆರಿಗೆ ವಂಚನೆ ಮತ್ತು 'ಆಫ್-ದಿ-ಬುಕ್' ವಹಿವಾಟಿನ ಆರೋಪದ ಮೇಲೆ ತೆರಿಗೆದಾರರು ಡಿಸೆಂಬರ್ 6 ರಂದು ದಾಳಿಗಳನ್ನು ಪ್ರಾರಂಭಿಸಿದ್ದು, ಭಾನುವಾರ ಐದನೇ ದಿನ ಕೂಡ ದಾಳಿ ಮುಂದುವರೆದಿದೆ.

Odisha Income Tax Raid

ಇಲ್ಲಿಯವರೆಗೆ 300 ಕೋಟಿ ರೂ.ಗೂ ಅಧಿಕ ಮೊತ್ತದ ನಗದನ್ನು ಎಣಿಕೆ ಮಾಡಲಾಗಿದ್ದು, ಇನ್ನೂ ಎಣಿಕೆ ನಡೆಯುತ್ತಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಇಡೀ ಕರೆನ್ಸಿ ಸಂಗ್ರಹವು ವ್ಯಾಪಾರ ಗುಂಪು, ವಿತರಕರು ಮತ್ತು ಇತರರು ದೇಶದ ಮದ್ಯದ ನಗದು ಮಾರಾಟದಿಂದ ಗಳಿಸಿದ 'ಲೆಕ್ಕರಹಿತ' ಹಣ ಎಂದು ಇಲಾಖೆ ಹೇಳಿದೆ.

ಇದು ಒಂದೇ ಗುಂಪು ಮತ್ತು ಅದಕ್ಕೆ ಸಂಬಂಧಿಸಿದ ಘಟಕಗಳ ವಿರುದ್ಧದ ಕ್ರಮದ ಭಾಗವಾಗಿ ದೇಶದಲ್ಲಿ ಏಜೆನ್ಸಿಯೊಂದು ನಡೆಸಿದ ಅತಿ ಹೆಚ್ಚು ನಗದು ವಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಶೋಧ ಕಾರ್ಯಾಚರಣೆ

ಇಲಾಖೆಯು ಶೋಧಿಸಿದ ಸ್ಥಳಗಳಲ್ಲಿ ಹಾಜರಿದ್ದ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಯ ಹೇಳಿಕೆಗಳನ್ನು ಸಹ ದಾಖಲಿಸಿಕೊಳ್ಳುತ್ತಿದೆ ಮತ್ತು ಅವರ ಹೇಳಿಕೆಗಳನ್ನು ದಾಖಲಿಸಲು ಕಂಪನಿಯ ಮುಖ್ಯ ಪ್ರವರ್ತಕರಿಗೆ ಶೀಘ್ರದಲ್ಲೇ ಸಮನ್ಸ್ ನೀಡಲಿದೆ.

ಜಾರ್ಖಂಡ್‌ನ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಧೀರಜ್ ಪ್ರಸಾದ್ ಸಾಹು ಅವರ ರಾಂಚಿಯ ಮನೆ ಮತ್ತು ಇತರ ಸ್ಥಳಗಳನ್ನು ಇಲಾಖೆಯು ಶೋಧಿಸುತ್ತಿದೆ. ಸಾಹು ಮನೆಯಿಂದ ಎಷ್ಟು ಪ್ರಮಾಣದ ನಗದು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಂಪನಿ ಮತ್ತು ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪಿಟಿಐ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲಿಲ್ಲ.

ಐಟಿ ದಾಳಿಯಲ್ಲಿ ಅಪಾರ ಪ್ರಮಾಣದ ಹಣ ಸಿಕ್ಕಿರುವುದು ರಾಜಕೀಯಾರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅವರು ಐಟಿ ಇಲಾಖೆಯ ಈ ಶೋಧದ ವೇಳೆ ತಮ್ಮ ಪಕ್ಷದ ಸಂಸದರಿಗೆ ಸಂಬಂಧಿಸಿರುವ ಮನೆ, ಕಚೇರಿಗಳಿಂದ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಹಿಂದೆ ನಡೆದ ಪ್ರಮುಖ ದಾಳಿಗಳು

ಈ ಹಿಂದೆ ನಡೆದ ಕೆಲವು ಹೆಚ್ಚಿನ ಮೌಲ್ಯದ ವಶಪಡಿಸಿಕೊಳ್ಳುವಿಕೆಗಳಲ್ಲಿ 2019 ರ ಜಿಎಸ್‌ಟಿ ಗುಪ್ತಚರರು ಕಾನ್ಪುರ ಮೂಲದ ಉದ್ಯಮಿಯ ಮೇಲೆ ದಾಳಿ ನಡೆಸಿ 257 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು ಮತ್ತು ಇನ್ನೊಂದು ನಿದರ್ಶನದಲ್ಲಿ ಜುಲೈ 2018 ರಲ್ಲಿ ತಮಿಳುನಾಡಿನಲ್ಲಿ ರಸ್ತೆ ನಿರ್ಮಾಣ ಸಂಸ್ಥೆಯ ಮೇಲೆ ಐಟಿ ಇಲಾಖೆ ದಾಳಿ ಮಾಡಿದಾಗ 163 ಕೋಟಿ ರೂಪಾಯಿ ಮೊತ್ತದ ನಗದು ಪತ್ತೆಯಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+