ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ, ಆಚಾರ್ಯ, ಧನಂಜಯ್ ಮನೆ ಹೋಗ್ರಿ ಸಾಕು

By Mahesh
|
Google Oneindia Kannada News

Opposition asks resignation of tainted BJP leaders
ಬೆಂಗಳೂರು ಜು 17: ಅಕ್ರಮ ಗಣಿಗಾರಿಕೆ ಭೂ ಹಗರಣದಲ್ಲಿ ಸಿಲುಕಿ ನಲುಗುತ್ತಿರುವ ಕರ್ನಾಟಕ ಸರ್ಕಾರವನ್ನು ಉಳಿಸಲು ಲೋಕಾಯುಕ್ತರೊಡನೆ ಭರ್ಜರಿ ಡೀಲ್ ನಡೆದಿದೆ ಎಂಬ ಸುದ್ದಿ ಬಂದಿದೆ. ಅಧಿಕಾರದಿಂದ ನಿವೃತ್ತಿಗೊಳ್ಳುವ ಮೊದಲು ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಲೋಕಾಯುಕ್ತ ಎನ್ ಸಂತೋಷ್ ಹೆಗ್ಡೆ ನಿರ್ಧರಿಸಿದ್ದಾರೆ.

ಇದರ ಸುಳಿವು ತಿಳಿದ ಬಿಜೆಪಿ ನಾಯಕರು, ದಯವಿಟ್ಟು ಅಕ್ರಮ ಗಣಿಗಾರಿಕೆ ವರದಿಯಲ್ಲಿ ನಮ್ಮ ಹೆಸರು ಸೇರಿಸಬೇಡಿ ಎಂದು ಲೋಕಾಯುಕ್ತರ ಮೇಲೆ ಒತ್ತಡ ಹೇರಿದ್ದಾರೆ. ಕೂಡಲೇ ಯಡಿಯೂರಪ್ಪ ಸೇರಿದಂತೆ ಆರೋಪ ಹೊತ್ತಿರುವ ನಾಯಕರು ರಾಜೀನಾಮೆ ನೀಡಿ ಮನೆಗೆ ಹೋಗುವುದು ಕ್ಷೇಮ ಎಂದು ವಿಪಕ್ಷಗಳು ಗುಡುಗಿವೆ.

ಡೀಲ್ ಕುದುರಿಸಲು ಹೋಗಿದ್ದ ಸಚಿವ ವಿಎಸ್ ಆಚಾರ್ಯ, ದೆಹಲಿ ಪ್ರತಿನಿಧಿ ಧನಂಜಯ್ ಕುಮಾರ್, ಎಜಿ ಕೊಡ್ಗಿ ಅವರ ಮೇಲೆ ಇಂಡಿಯನ್‌ ಪೆನಲ್‌ ಕೋಡ್‌ 107, 108ರ ಅನ್ವಯ ಭ್ರಷ್ಟರನ್ನು ಮಟ್ಟ ಹಾಕುವ ಸಂಸ್ಥೆಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಧಿಸಬೇಕು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ.

ಬಿಜೆಪಿ ನಾಯಕರ ಹೀನ ನಡವಳಿಕೆಯಿಂದ, ಯಡಿಯೂರಪ್ಪ ಅವರ ಅಸಲಿ ಬಣ್ಣ ಬಯಲಾಗಿದೆ. ತಮ್ಮ ಮೇಲೆ ಬಿಜೆಪಿ ನಾಯಕರು ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ಲೋಕಾಯುಕ್ತರೇ ಹೇಳಿದ ಮೇಲೆ, ಯಡಿಯೂರಪ್ಪ ಆರೋಪಿಯಲ್ಲ, ಅಪರಾಧಿಯಾಗಿದ್ದಾರೆ. ಭ್ರಷ್ಟ ಬಿಜೆಪಿ ನಾಯಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

English summary
Karnataka Lokayukta N. Santosh Hegde has alleged that senior BJP leaders requested him to 'spare' scam-tainted chief minister BS Yeddyurappa from the inquiry into mining irregularities in Karnataka, Opposition leaders Kumaraswamy and G Parameshwar reacted strongly by asking resignation of tainted ministers and Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X