Get Updates
Get notified of breaking news, exclusive insights, and must-see stories!

ಇಡಿಯಿಂದ ಒಂಬತ್ತು ಗಂಟೆಗಳ ಕಾಲ ಜಾರ್ಖಂಡ್ ಸಿಎಂ ವಿಚಾರಣೆ

ನವದೆಹಲಿ, ನವೆಂಬರ್‌ 18: ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರ್ಖಂಡ್‌ ಹೇಮಂತ್‌ ಸೂರೇನ್‌ ಅವರನ್ನು ಜಾರಿ ನಿರ್ದೆಶನಾಲಯ (ಇಡಿ) ಒಂಬತ್ತೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

ಜಾಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೋರೆನ್ ಅವರು ಮಧ್ಯಾಹ್ನದ ಸುಮಾರಿಗೆ ಕೇಂದ್ರ ತನಿಖಾ ಸಂಸ್ಥೆ ಇಡಿಯ ರಾಂಚಿ ಕಚೇರಿಯನ್ನು ಪ್ರವೇಶಿಸಿದರು. ಬಳಿಕ ರಾತ್ರಿ 9.40 ರ ಸುಮಾರಿಗೆ ಹೊರಬಂದರು. ಕಚೇರಿಯ ಹೊರಗೆ ಅವರನ್ನು ಬರಮಾಡಿಕೊಳ್ಳಲು ಅವರ ಪತ್ನಿ ರಾತ್ರಿ 9 ಗಂಟೆ ಸುಮಾರಿಗೆ ಸಂಸ್ಥೆಗೆ ಇದ್ದರು. ಬಳಿಕ ತಕ್ಷಣವೇ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದರು.

ಇಡಿ ಕಚೇರಿಗೆ ತೆರಳುವ ಮುನ್ನ ಮಾತನಾಡಿದ ಸೊರೆನ್, ತಾನು ಪ್ರತಿಪಕ್ಷಗಳ ಪಿತೂರಿಯ ಬಲಿಪಶು. ಈ ಕುರಿತು ವಿಸ್ತೃತ ತನಿಖೆಯ ನಂತರವೇ ಕೇಂದ್ರೀಯ ಸಂಸ್ಥೆ ಇಡಿ ಆರೋಪಗಳನ್ನು ಹೊರಿಸಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿ ಇಲ್ಲಿನ ಪ್ರಾದೇಶಿಕ ಕಚೇರಿಗೆ ಸೊರೆನ್ ಅವರನ್ನು ಕರೆಸಿತ್ತು. ರಾಜ್ಯದಲ್ಲಿ ಇದುವರೆಗೆ 1,000 ಕೋಟಿ ರೂಪಾಯಿಗಳಷ್ಟು ಅಕ್ರಮ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಆದಾಯವನ್ನು ಪತ್ತೆಹಚ್ಚಲಾಗಿದೆ ಎಂದು ಸಂಸ್ಥೆ ಹೇಳಿದೆ.

1,000 ಕೋಟಿ ರೂಪಾಯಿ ಹಗರಣ ಆರೋಪ

1,000 ಕೋಟಿ ರೂಪಾಯಿ ಹಗರಣ ಆರೋಪ

ಸಿಎಂ ಹೇಮಂತ್‌ ಸೋರೆನ್, ನಾವು ಕಲ್ಲಿನ ಗಣಿಗಾರಿಕೆಯಿಂದ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿದರೆ ಅದು 1,000 ಕೋಟಿ ರೂಪಾಯಿಗಳನ್ನು ಮುಟ್ಟುವುದಿಲ್ಲ. ಅವರು ಹೇಗೆ ಅಂದಾಜಿಸಿದ್ದಾರೋ ಎಂಬುದು ಅರ್ಥವಾಗುತ್ತಿಲ್ಲ. ನಾನು ಇಡಿ ಕಚೇರಿಯಲ್ಲಿ ಅವರು ಹೇಗೆ ಅಂದಾಜಿಸಿದರು ಎಂದು ನೋಡಲು ಬಯಸುತ್ತೇನೆ. ನಾನು ರಾಜ್ಯದ ಮುಖ್ಯಮಂತ್ರಿ ಮತ್ತು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದೇನೆ. ಆದರೆ ಸಮನ್ಸ್ ಜಾರಿಯಾದ ರೀತಿ ನೋಡಿದರೆ ನಾನು ದೇಶದಿಂದ ಓಡಿ ಹೋಗುತ್ತೇನೆ ಎಂದು ತೋರುತ್ತದೆ. ನನ್ನ ರಾಜಕೀಯ ಜೀವನದಲ್ಲಿ ನಾನು ದೇಶವನ್ನು ತೊರೆದ ಯಾವುದೇ ರಾಜಕೀಯ ನಾಯಕನನ್ನು ಕಂಡಿಲ್ಲ. ಆದರೆ ಉದ್ಯಮಿಗಳು ಹಾಗೆ ಮಾಡಿದ್ದಾರೆ ಎಂದು ಅವರು ಹೇಳಿದರು.

ನವೆಂಬರ್ 3 ರಂದು ಇಡಿಯಿಂದ ಮೊದಲ ವಿಚಾರಣೆ

ನವೆಂಬರ್ 3 ರಂದು ಇಡಿಯಿಂದ ಮೊದಲ ವಿಚಾರಣೆ

ಇಡಿಯ ಇಂತಹ ಕ್ರಮಗಳು ರಾಜ್ಯದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸುತ್ತವೆ. ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿಪಕ್ಷಗಳು ಈ ಸರ್ಕಾರವನ್ನು ಬೀಳಿಸಲು ಷಡ್ಯಂತ್ರವನ್ನು ರೂಪಿಸುತ್ತಿವೆ. ಜಲಾಂತರ್ಗಾಮಿಯಂತೆ ಕೆಲಸ ಮಾಡುತ್ತಿದ್ದ ಪಿತೂರಿಗಳು ಈಗ ಬಯಲಿಗೆ ಬಂದಿವೆ. ಆರಂಭದಲ್ಲಿ ನವೆಂಬರ್ 3 ರಂದು ಇಡಿಯಿಂದ ಸೋರೆನ್ ಅವರನ್ನು ವಿಚಾರಣೆಗೆ ಕರೆಸಲಾಯಿತು. ಆದರೆ ಅವರು ಅಧಿಕೃತ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ಕಾಣಿಸಿಕೊಂಡಿರಲಿಲ್ಲ. ಅವರನ್ನು ಬಂಧಿಸಲು ಕೇಂದ್ರ ತನಿಖಾ ಸಂಸ್ಥೆಗೆ ಧೈರ್ಯ ಮಾಡಿದ್ದರು. ನಂತರ ಅವರು ಸಮನ್ಸ್‌ನ ಮೂರು ವಾರಗಳ ಕಾಲಾವಕಾಶವನ್ನು ಕೋರಿದ್ದರು.

ಸೋರೆನ್ ಅವರ ಆಪ್ತರ ಬಂಧನ

ಸೋರೆನ್ ಅವರ ಆಪ್ತರ ಬಂಧನ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ವಿಚಾರಣೆ ಮತ್ತು ಹೇಳಿಕೆ ದಾಖಲಿಸಿಕೊಳ್ಳಲು ಇಡಿ ಮುಂದೆ ಹಾಜರಾಗುವಂತೆ ಮುಖ್ಯಮಂತ್ರಿಗೆ ತಿಳಿಸಲಾಗಿತ್ತು. ಈ ಪ್ರಕರಣದಲ್ಲಿ ಸೋರೆನ್ ಅವರ ರಾಜಕೀಯ ಸಹಾಯಕ ಪಂಕಜ್ ಮಿಶ್ರಾ ಮತ್ತು ಇತರ ಇಬ್ಬರನ್ನು ಸಂಸ್ಥೆ ಈಗಾಗಲೇ ಬಂಧಿಸಿದೆ. ಚುನಾವಣಾ ಆಯೋಗವು ತಿಂಗಳ ಹಿಂದೆ ರಾಜ್ಯಪಾಲರಿಗೆ ತನ್ನ ಅಭಿಪ್ರಾಯವನ್ನು ನೀಡಿತ್ತು.

ಸುರೇನ್ ಅನರ್ಹಗೊಳಿಸಲು ಬಿಜೆಪಿ ಆಗ್ರಹ

ಸುರೇನ್ ಅನರ್ಹಗೊಳಿಸಲು ಬಿಜೆಪಿ ಆಗ್ರಹ

ಆದರೆ ಅವರು ಇನ್ನೂ ಲಕೋಟೆಯನ್ನು ತೆರೆದಿಲ್ಲ. ಅವರು ಚುನಾವಣಾ ಆಯೋಗದಿಂದ ಎರಡನೇ ಅಭಿಪ್ರಾಯವನ್ನು ಕೇಳಿದ್ದರು. ಆದರೆ ನಾನು ಯಾವಾಗ ಚುನಾವಣಾ ಸಮಿತಿಯಿಂದ ಅದರ ಬಗ್ಗೆ ತಿಳಿದುಕೊಳ್ಳಲು ಬಯಸಿದೆ. ಆಗ ರಾಜ್ಯಪಾಲರು ಯಾವುದೇ ಎರಡನೇ ಅಭಿಪ್ರಾಯವನ್ನು ಕೇಳಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ ಎಂದು ಸುರೇನ್‌ ಹೇಳಿದ್ದಾರೆ. ಕಚೇರಿ ಲಾಭದ ಪ್ರಕರಣದಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಬಿಜೆಪಿ ಸಲ್ಲಿಸಿದ ಮನವಿಯ ನಂತರ ಚುನಾವಣಾ ಆಯೋಗ ತನ್ನ ನಿರ್ಧಾರವನ್ನು ಆಗಸ್ಟ್ 25 ರಂದು ರಾಜ್ಯ ರಾಜ್ಯಪಾಲ ರಮೇಶ್ ಬೈಸ್ ಅವರಿಗೆ ಕಳುಹಿಸಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+