ಕಲಘಟಗಿ : ಬೆತ್ತಲೆಗೊಳಿಸಿ ಥಳಿಸಿದ್ದರಿಂದ ಮಹಿಳೆ ಆತ್ಮಹತ್ಯೆ
ವಿವಾಹಿತ ಯುವತಿ ಮತ್ತು ಅವಿವಾಹಿತ ಯುವಕನ ಮಧ್ಯೆ ಪ್ರೀತಿ ಕುದುರಲು ಸಹಾಯ ಮಾಡಿದ್ದಾರೆ ಎನ್ನುವ ಆರೋಪದಿಂದಾಗಿ ಈ ಪೈಶಾಚಿಕೆ ಕೃತ್ಯ ನಡೆದಿದೆ. ಬೆಂಡಲಗಟ್ಟಿ ಗ್ರಾಮದ ಫಕ್ಕೀರಪ್ಪ ಕರ್ಜಗಿ ಎಂಬುವವರ ಪತ್ನಿ ರತ್ನವ್ವ ಎನ್ನುವ ಮಹಿಳೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕೋಟೆಪ್ಪ, ದೇವಪ್ಪ, ಮೋಹನ, ಮುದಕಪ್ಪ, ರಾಮಪ್ಪ, ಅಜ್ಜಯ್ಯ, ಶಿವಕ್ಕ, ಲಕ್ಷ್ಮಿ, ಶಾರದಾ ಅವರ ವಿರುದ್ಧ ಕೇಸು ದಾಖಲಿಸಿಕೊಂಡಿರುವ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಅಸಹಾಯಕ ಮಹಿಳೆ ಮೇಲೆ ಎಸಗಿರುವ ದೌರ್ಜನ್ಯಕ್ಕೆ ಶಿಕ್ಷೆಯಾಗಲೇಬೇಕು. ಈ ಘಟನೆಯನ್ನು ನೋಡಿಯೂ ತಡೆಯದೆ ಇದ್ದವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಆರ್ ದಿಲೀಪ್ ತಿಳಿಸಿದ್ದಾರೆ.
ಘಟನೆಯ
ಹಿನ್ನೆಲೆ
:
ಗ್ರಾಮದ
ಶ್ರೀಮಂತ
ಮನೆತನವಾದ
ಹಾನಗಲ್
ಮನೆತನದ
ಯಜಮಾನ
ಕೋಟೆಪ್ಪ
ಕಳೆದ
ವರ್ಷವಷ್ಟೇ
ಕಿರಿಯ
ಮಗನ
ಮದುವೆ
ಅದ್ದೂರಿಯಾಗಿ
ನೆರವೇರಿಸಿದ್ದ.
ಇತ್ತೀಚೆಗೆ
ಮಗನ
ಹೆಂಡತಿ
ಗ್ರಾಮದ
ಬೇರೆ
ಯುವಕನ
ಜೊತೆ
ಪರಾರಿಯಾಗಿದ್ದಳು.
ತನ್ನ
ಸೊಸೆ
ಬೇರೆ
ಯುವಕನ
ಮಧ್ಯೆ
ಪ್ರೇಮ
ಕುದುರಲು
ಈ
ರತ್ನವ್ವ
ಕಾರಣ
ಎನ್ನುವುದು
ಕೋಟೆಪ್ಪನ
ಬಲವಾದ
ಶಂಕೆ.
ಈ
ಬಗ್ಗೆ
ಊರಿನ
ಇತರೆ
ಗಣ್ಯರಿಗೂ
ತಿಳಿಸಿದ್ದನಂತೆ
ಎಂದು
ಪೊಲೀಸರು
ತಿಳಿಸಿದ್ದಾರೆ.
ಇಡೀ
ಮನೆ
ಮುಂದೆ
ಓರ್ವ
ಅಸಹಾಯಕ
ಮಹಿಳೆಯನ್ನು
ಬೆತ್ತಲೆಗೊಳಿಸಿ
ಥಳಿಸಿದ್ದಾರೆ.