ಯುವಕನ ಮೇಲೆ ಸ್ನೇಹಿತನಿಂದಲೇ ಮೇಲೆ ಆಸಿಡ್ ದಾಳಿ
ಬೆಂಗಳೂರು, ಮೇ31: ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ಅಟ್ಯಾಕ್ ನಡೆದಿದೆ. ಇಬ್ಬರು ಸ್ನೇಹಿತನ ನಡುವೆ ನಡೆದ ಜಗಳದಲ್ಲಿ ಆಸಿಟ್ ಆಟ್ಯಾಕ್ ನಡೆದಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬನ್ ಪೇಟೆಯಲ್ಲಿ ನಡೆದಿದೆ. ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಡೈಲೂಟೆಡ್ ಸಲ್ಫರಿಕ್ ಆ್ಯಸಿಡ್ ಎರಚಿ ವಿಕೃತಿಯನ್ನು ಮೆರೆಯಲಾಗಿದೆ.
ಸ್ನೇಹಿತನ ಮೇಲೆಯೇ ಆಸಿಡ್ ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತ ಆಸಿಡ್ ದಾಳಿಯನ್ನು ಮಾಡಿದ್ದಾನೆ. ಆಸಿಡ್ ದಾಳಿಗೆ ಒಳಗಾದ ಯುವಕನನ್ನು ವಿಕ್ಟೋರಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಯುವಕನಿಗೆ ಮುಖ, ಎದೆಗೆ, ಶೇಕಡಾ 30ರಷ್ಟು ಗಾಯವಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಹಲಸೂರು ಗೇಟ್ ಪೊಲೀಸರು ಈಗಾಗಲೇ ಮೈಸೂರು ಬಳಿಯಲ್ಲಿ ಆರೋಪಿ ಜನತಾ ಅದಕ್ನನ್ನು ಬಂಧಿಸಲಾಗಿದೆ. ಮೇ 29 ಭಾನುವಾರದಂದು ಸ್ನೇಹಿತನ ಜೊತೆಯಲ್ಲಿ ಕಿರಿಕ್ ಮಾಡಿದ್ದ ಜನತಾ ಅದಕ್. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಡೈಲೂಟೇಡ್ ಸಲ್ಫರಿಕ್ ಆಸಿಡ್ ಅನ್ನು ಎರಚಿ ತಪ್ಪಿಸಿಕೊಳ್ಳಲು ಪ್ರಯತ್ನವನ್ನು ಪಟ್ಟಿದ್ದ. ಆಸಿಡ್ ದಾಳಿಯ ಪ್ರಕರಣವನ್ನು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಆರೋಪಿ ಜನತಾ ಅದಕ್ನನ್ನು ಬಂಧಿಸಿದ್ದಾರೆ.

ಡೈಲೂಟೇಡ್ ಸಲ್ಫರಿಕ್ ಆಸಿಡ್ ದಾಳಿ
ಕಬ್ಬನ್ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಜನತಾ ಅದಕ್ ಮತ್ತು ಗಾಯಾಳು ಸತ್ರ ಕುಡಿದ ಅಮಲಿನಲ್ಲಿ ಗಲಾಟೆಯನ್ನು ಮಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿ ಕ್ಲೀನಿಂಗ್ಗೆ ಬಳಕೆ ಮಾಡುತ್ತಿದ್ದ ಡೈಲೂಟೇಡ್ ಸಲ್ಫರಿಕ್ ಆಸಿಡ್ ಅನ್ನು ಎರಚಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಗಾಯಾಳು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಸ್ಪಷ್ಪಪಡಿಸಿದ್ದಾರೆ.

ಏಪ್ರಿಲ್ 28 ಕಾಮಾಕ್ಷಿಪಾಳ್ಯದಲ್ಲಿ ನಾಗೇಶ್ನಿಂದ ಯುವತಿಗೆ ಆಸಿಡ್
ಏಪ್ರಿಲ್ 28 ಕಾಮಾಕ್ಷಿಪಾಳ್ಯದಲ್ಲಿ ನಾಗೇಶ್ ಎಂಬಾತ ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಆಸಿಡ್ ದಾಳಿಯನ್ನು ನಡೆಸಿದ್ದ. ಆಸಿಡ್ ದಾಳಿಗೆ ಒಳಗಾದ ಯುವತಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಆದರೆ ಆಸಿಡ್ ದಾಳಿ ಮಾಡಿದ ಆರೋಪಿ 16 ದಿನಗಳು ಕಣ್ಮರೆಯಾಗಿದ್ದು. ತಮಿಳು ನಾಡಿನ ತಿರುವನಂತ ಪುರಂನ ಆಶ್ರಮದಲ್ಲಿ ಪತ್ತೆಯಾಗಿದ್ದ. ಆತನನ್ನು ಬಂಧಿಸಿ ಕರೆತರುವ ವೇಳೆ ಮೂತ್ರವಿಸರ್ಜನೆಗೆ ಇಳಿದವ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಪೊಲೀಸರು ನಾಗೇಶ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆಸಿಡ್ ದಾಳಿಯಾಗಿರೋದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಬೆಂಗಳೂರಿನಲ್ಲಿ ನಾಲ್ಕನೇ ಕೇಸ್
ಇನ್ನು ಕರ್ನಾಟಕದಲ್ಲಿ ಆಸಿಡ್ ದಾಳಿ ಪ್ರಕರಣಗಳು ಕಣ್ಣ ಮುಂದಿದೆ. ರಾಜ್ಯದಲ್ಲಿ ಆಸಿಡ್ ದಾಳಿಗಳ ಅಂಕಿ ಸಂಖ್ಯೆಗಳಿವೆ.
*1999 ರಿಂದ 2004 ರ ವರೆಗೆ - 35 ಆಸಿಡ್ ದಾಳಿ ಪ್ರಕರಣಗಳು
*2007 ಫೆಬ್ರವರಿ - 8 ಪ್ರಕರಣಗಳನ್ನು
*2010 ರಿಂದ 2015 ರಲ್ಲಿ - 20 ಪ್ರಕರಣಗಳು ವರದಿಯಾಗಿದೆ
*ಬೆಂಗಳೂರಿನಲ್ಲಿ ಇಂದಿನ ಪ್ರಕರಣವೂ ಸೇರಿದಂತೆ 4 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿದೆ.
ಆಸಿಡ್ ಅನ್ನು ಬೇರೆ ಬೇರೆ ಕೆಲಸಕ್ಕೆ ಬಳಕೆ ಮಾಡುತ್ತಾರೆ. ಆಸಿಡ್ ನ ಪ್ರಭಾವ ಎಂಥದ್ದು ಎಂಬುದು ತಿಳಿದಿದ್ದು ಕೆಲವು ದುಷ್ಕರ್ಮಿಗಳು ಮನುಷ್ಯರ ಮೇಲೆ ದಾಳಿ ನಡೆಸೋಕೆ ಆಸಿಡ್ ಬಳಕೆ ಮಾಡುತ್ತಿರೋದು ಶೋಚನೀಯ ಸಂಗತಿಯಾಗಿದೆ.

ಆಸಿಡ್ ಖರೀದಿಯ ಸಕಾರಣವೂ ಅಗತ್ಯ
ಆಸಿಡ್ ಅನ್ನು ಖರೀದಿಸಲು ಸಾಕಷ್ಟು ಕಠಿಣ ನಿಯಮಗಳು ರಾಜ್ಯದಲ್ಲಿ ಇಲ್ಲ. ಕೆಲವು ಕ್ಲೀಂನಿಂಗ್ ಕೆಲಸಗಳಿಗೆ ಕಡಿಮೆ ಸಾಮರ್ಥ್ಯ ಆಸಿಡ್ ಗಳನ್ನು ಕೊಡಲಾಗುತ್ತದೆ. ಆಸಿಡ್ ಖರೀದಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು ಆದರೆ ಕಾನೂನಾತ್ಮಕವಾಗಿ ನಿಯಮಗಳನ್ನು ಅನುಸರಿಸದೇ ಉಲ್ಲಂಘನೆ ಮಾಡಲಾಗುತ್ತದೆ. ಆಸಿಡ್ ಖರೀದಿಸುವಾಗ ಸಕಾರಣದೊಂದಿಕೆ ಕಂಪನಿಯ ಲೆಟರ್ ಹೆಡ್ನಲ್ಲಿ ಎಷ್ಟು ಪ್ರಮಾಣದ ಆಸಿಡ್ ಬೇಕು ಎಂಬದುನ್ನು ಉಲ್ಲೇಖಿಸಬೇಕು. ಆದರೆ ಎಲ್ಲ ಕಾನೂನು ಉಲ್ಲಂಘನೆಯಾಗುತ್ತಿರೋದು ಆಸಿಡ್ ದಾಳಿಗೆ ಅನುವು ಮಾಡಿಕೊಡುತ್ತಿದೆ.
Recommended Video
-
Bengaluru Viral Tweet: ಹೋಳಿ ಹಬ್ಬ: ಬೆಂಗಳೂರು ಬೋರಿಂಗ್ ಎಂದ ನಾರ್ಥಿ ಯುವತಿ ಟ್ವೀಟ್ ವೈರಲ್: ಕನ್ನಡಿಗರು ಹೇಳಿದ್ದೇನು -
Karnataka Weather: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಶುಷ್ಕ ಹವೆ, ಮುಂದುವರಿದ ಚಂಡಮಾರುತ ಪ್ರಸರಣ ಮಳೆ ನಿರೀಕ್ಷೆ -
Shiva Rajkumar: ಹೆಣ್ಣು ಮಕ್ಕಳು, ನಟಿಯರ ಗೌರವಕ್ಕೆ ಚ್ಯುತಿ ತರಬೇಡಿ ಎಂದ ಶಿವಣ್ಣ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ -
ರಾಜ್ಯಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್: ಮಲ್ಲಿಕಾರ್ಜುನ ಖರ್ಗೆ, ಎಚ್ಡಿ ದೇವೇಗೌಡ ರಾಜ್ಯಸಭಾ ಅವಧಿ ಶೀಘ್ರ ಮುಕ್ತಾಯ -
ಮ್ಯಾಕ್ಸ್ವೆಲ್, ಗೇಲ್ ರೆಕಾರ್ಡ್ ಬ್ರೇಕ್: ವಿಶ್ವದಾಖಲೆ ಮಾಡಿದ ಫಿನ್ ಅಲೆನ್ಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ -
Petrol - Diesel: ಪೆಟ್ರೋಲ್ - ಡೀಸೆಲ್ ಖರೀದಿಗೆ ಮುಗಿ ಬಿದ್ದ ಜನ ವಿಡಿಯೋ ವೈರಲ್: ಕೇಂದ್ರ ಸರ್ಕಾರ ಹೇಳಿದ್ದೇನು -
ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅದ್ಧೂರಿ ವಿವಾಹ -
Gold Rate March 05: ಮಧ್ಯಪ್ರಾಚ್ಯ ಯುದ್ಧದ ನಡುವೆ ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಇಳಿಕೆ: ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka School Fee: ಪ್ರೈವೇಟ್ ಸ್ಕೂಲ್ ಫೀ ಮತ್ತೆ ದುಬಾರಿ: ಶುಲ್ಕ ಹೆಚ್ಚಿಸಲು ಸಜ್ಜಾದ ಖಾಸಗಿ ಶಾಲೆಗಳು, ಪೋಷಕರಲ್ಲಿ ಆತಂಕ -
''ತೆರಿಗೆ ಹೇರುವ ರಾಮಯ್ಯನಿಂದ ರಾಜ್ಯದಲ್ಲಿ 1.15 ಲಕ್ಷ ಕೋಟಿ ಸಾಲದ ಬಜೆಟ್ ಮಂಡನೆ'' -
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ -
KEA: ಯುಜಿಸಿಇಟಿ-ಪಿಜಿನೀಟ್ ಅಭ್ಯರ್ಥಿಗಳ ಗಮನಕ್ಕೆ, ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ












Click it and Unblock the Notifications