ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ಫೋಸಿಸ್ ನಲ್ಲಿ ಸದ್ಯಕ್ಕೆ ನೇಮಕ ಇಲ್ಲ : ಶಿಭುಲಾಲ್
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತದಿಂದ ಯೋಜನೆಗಳಲ್ಲಿ ಗಮನಾರ್ಹ ಕೊರತೆ ಕಂಡು ಬಂದಿದೆ. ಹೀಗಿದ್ದಾಗಲೂ ಕಂಪನಿ ಕಳೆದ ವರ್ಷ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಮಾಡಿಕೊಂಡಿದ್ದ ತಂತ್ರಜ್ಞರಿಗೆ ಕೆಲಸ ನೀಡಿದೆ. ಮುಂದಿನ ದಿನಗಳಲ್ಲಿ ಉದ್ಯೋಗಿಗಳ ನೇಮಕ ಕಷ್ಟದ ಕೆಲಸವಾಗಿದೆ. ಆದ್ದರಿಂದ ನೇಮಕ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದರು.
ಸಾಫ್ಟ್ ವೇರ್ ಯೋಜನೆಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಆರ್ಥಿಕ ಕುಸಿತ ವರ್ಷದ ಅಂತ್ಯದಲ್ಲಿ ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಇವೆ. ಸದ್ಯದ ಪರಿಸ್ಥಿತಿಯಲ್ಲಿ ಗ್ರಾಹಕರು ಯೋಜನೆಗಳನ್ನು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಅನಾವಶ್ಯಕವಾಗಿ ಹೊರೆಹೊರಲು ಕಂಪನಿ ಸಿದ್ಧವಿಲ್ಲ ಎಂದು ಶಿಬುಲಾಲ್ ಸ್ಪಷ್ಟಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಮೈಸೂರು karnataka global economic crisis mysore ಆರ್ಥಿಕ ಕುಸಿತ ಇನ್ಫೋಸಿಸ್ infosys ಎನ್ ಆರ್ ನಾರಾಯಣಮೂರ್ತಿ ನೇಮಕಾತಿ recruitment ಉದ್ಯೋಗ
Story first published: Wednesday, September 16, 2009, 17:32 [IST]