ಮೂರು ಜೈಲುಗಳಲ್ಲಿ ಕೈದಿಗಳ ನಿರಶನ
ಬೆಂಗಳೂರು, ಅ, 31 : ಸನ್ನಡತೆ ಆಧಾರದ ಮೇಲೆ ತಮ್ಮನ್ನು ಬಿಡುಗಡೆಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳಗಾವಿ, ಮೈಸೂರು, ಧಾರವಾಡ ಜೈಲಿನ ಕೈದಿಗಳು ಉಪವಾಸ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸದ್ಯ ಮೂರು ಜೈಲುಗಳಿಂದ ಬಂದಿರುವ ಮನವಿ ಸಿಎಂ ಸಿದ್ದರಾಮಯ್ಯ ಅವರನ್ನು ತಲುಪಿದ್ದು, ಅಂತಿಮ ತೀರ್ಮಾನವನ್ನು ಅವರು ಕೈಗೊಳ್ಳಬೇಕಾಗಿದೆ.
ಸೋಮವಾರ
ಮತ್ತು
ಮಂಗಳವಾರ
ಬೆಳಗಾವಿಯ
ಹಿಂಡಲಗಾ
ಜೈಲಿನ
600ಕ್ಕೂ
ಹೆಚ್ಚು
ಕೈದಿಗಳು
ಉಪವಾಸ
ಸತ್ಯಾಗ್ರಹ
ನಡೆಸಿಮ
ಸನ್ನಡತೆ
ಆಧಾರದ
ಮೇಲೆ
ತಮ್ಮನ್ನು
ಬಿಡುಗಡೆ
ಮಾಡಬೇಕೆಂದು
ಆಗ್ರಹಿಸಿದ್ದರಾರೆ.
ಎರಡೂ
ದಿನ
ಬೆಳಗ್ಗೆಯಿಂದಲೇ
ಚಹಾ,
ಉಪಾಹಾರ
ಬಿಟ್ಟು
ಉಪವಾಸ
ಕುಳಿತ
ಕೈದಿಗಳು,
ನಮ್ಮನ್ನು
ಬಿಡುಗಡೆಗೊಳಿಸಲು
ಸರ್ಕಾರ
ಕ್ರಮ
ಕೈಗೊಳ್ಳಬೇಕೆಂದು
ಆಗ್ರಹಿಸಿದರು.
ಕೈದಿಗಳ ಪ್ರತಿಭಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಈ ಬೇಡಿಕೆ ಕುರಿತು ಸದ್ಯದಲ್ಲೇ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು. ಸನ್ನಡತೆ ಆಧಾರದಲ್ಲಿ ಸುಮಾರು 150 ಕೈದಿಗಳನ್ನು ಹಿಂಡಲಗಾ ಜೈಲಿನಿಂದ ಬಿಡುಗಡೆಗೊಳಿಸಬೇಕಿದೆ. ಆದರೆ, ಸರ್ಕಾರ ಈ ಕುರಿತು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕೈದಿಗಳು ಆರೋಪಿಸಿದ್ದಾರೆ.
ಮೈಸೂರು, ಧಾರವಾಡದಲ್ಲೂ ಪ್ರತಿಭಟನೆ : ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಮೈಸೂರು ಮತ್ತು ಧಾರವಾಡ ಕೇಂದ್ರ ಕಾರಾಗೃಹದ ನೂರಾರು ಕೈದಿಗಳು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಧಾರವಾಡ ಜೈಲು ಆವರಣದಲ್ಲಿ ಪ್ರತಿಭಟನೆ ನಡೆಸಿದ ಕೈದಿಗಳು ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು.
ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ಚಾರಿತ್ರ್ಯ ಹೊಂದಿದ ಕೈದಿಗಳನ್ನು ಬಿಡುಗಡೆ ಮಾಡುವ ಪದ್ಧತಿ ಇದೆ. ಆದರೆ, ರಾಜ್ಯದಲ್ಲಿಯೂ ಇಂತಹ ಪದ್ಧತಿ ಜಾರಿಗೆ ತರಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಪ್ರತಿಭಟನೆ ನಡೆಸುತ್ತಿರುವ ಕೈದಿಗಳು ಜೈಲು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಕೈದಿಗಳ ಪ್ರತಿಭಟನೆ ಮಾಹಿತಿ ಪಡೆದು ಕಾರಾಗೃಹಕ್ಕೆ ಭೇಟಿ ನೀಡಿದ ಶಾಸಕ ವಾಸು ಕೈದಿಗಳ ಮನವಿ ಸ್ವೀಕರಿಸಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಕಳೆದ ಮೂರು ದಿನಗಳಿಂದ ಜೈಲುಗಳಲ್ಲಿ ಪ್ರತಿಭಟನೆ ನಡೆಸಿದ ಕೈದಿಗಳ ಮನವಿ ಸಿದ್ದರಾಮಯ್ಯ ಅವರಿಗೆ ತಲುಪಿದ್ದು, ಅವರು ಅಂತಿಮ ತೀರ್ಮಾನ ಕೈಗೊಳ್ಳಬೇಕಾಗಿದೆ.
ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಖೈದಿಗಳು, ಉತ್ತಮ ನಡವಳಿಕೆ ತೋರಿದರೆ ಅವರನ್ನು ಸ್ವಾತ್ರಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವದಂದು ಬಿಡುಗಡೆ ಮಾಡುವುದು ಸಂಪ್ರದಾಯ. ಆದರೆ, ಕಳೆದ ಆರು ವರ್ಷಗಳಿಂದ ರಾಜ್ಯದಲ್ಲಿ ಯಾವ ಖೈದಿಗಳು ಬಿಡುಗಡೆಗೊಂಡಿಲ್ಲ. ಹಿಂಡಲಗಾ ಜೈಲಿನಲ್ಲಿ ಸುಮಾರು 150 ಖೈದಿಗಳು ಬಿಡುಗಡೆಗಾಗಿ ಆರು ವರ್ಷದಿಂದ ಕಾದು ಕುಳಿತಿದ್ದಾರೆ.