Hindenburg report on Adani: ಅದಾನಿ ವಿರುದ್ಧ ಸೆಬಿ ತನಿಖೆಗೆ ಕಾಂಗ್ರೆಸ್ ಒತ್ತಾಯ
ಉದ್ಯಮಿ ಗೌತಮ್ ಅದಾನಿ ಸಮೂಹವು ಷೇರು ತಿರುವುವಿಕೆ ಹಾಗೂ ಲೆಕ್ಕಪತ್ರ ವಂಚನೆ ಕೃತ್ಯದ ವಿರುದ್ಧ ಸೆಬಿಯಿಂದ ಗಂಭೀರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ನವದೆಹಲಿ, ಜನವರಿ 27: ಉದ್ಯಮಿ ಗೌತಮ್ ಅದಾನಿ ಸಮೂಹವು ಷೇರು ತಿರುವುವಿಕೆ ಹಾಗೂ ಲೆಕ್ಕಪತ್ರ ವಂಚನೆ ಕೃತ್ಯ ಎಸಗಿದೆ ಎಂದು ಹಿಂಡೆನ್ಬರ್ಗ್ ಸಂಶೋಧನೆಯು ಆರೋಪಿಸಿದ್ದು, ಈ ವಿಷಯದ ಬಗ್ಗೆ ಸೆಬಿಯಿಂದ ಗಂಭೀರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಭಾರತೀಯ ಹಣಕಾಸು ವ್ಯವಸ್ಥೆಯ ಸ್ಥಿರತೆ ಮತ್ತು ಭದ್ರತೆಗೆ ಜವಾಬ್ದಾರರಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಿಂದ ಈ ಆರೋಪಗಳಿಗೆ ಸಂಬಂಧಿಸಿದಂತೆ ಗಂಭೀರ ತನಿಖೆಯ ಅಗತ್ಯವಿದೆ ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮೋದಿ ಸರ್ಕಾರವು ತಮ್ಮ ನೆಚ್ಚಿನ ವ್ಯಾಪಾರ ಸಮೂಹದ ಈ ಕೃತ್ಯ ಎಸಗಿದರೂ ಕಣ್ಣು ಮುಚ್ಚಿ ಕುಳಿತಿರುವುದು ಸರಿಯಲ್ಲ. ಕಪ್ಪುಹಣದ ಕುರಿತಾದ ಎಲ್ಲಾ ಅವಕಾಶಗಳಿಗೆ ಮೋದಿ ಸರ್ಕಾರವು ತನ್ನ ಸ್ನೇಹಿತ ವ್ಯಾಪಾರ ಗುಂಪಿನ ಅಕ್ರಮ ಚಟುವಟಿಕೆಗಳ ಕಡೆಗೆ ಕಣ್ಣು ಮುಚ್ಚಲು ನಿರ್ಧರಿಸಿದೆಯೇ? ಕ್ವಿಡ್ ಪ್ರೊ ಕ್ವೊ ಇದೆಯೇ? ಸೆಬಿ ಈ ಆರೋಪಗಳನ್ನು ಹೆಸರಿಗೆ ಮಾತ್ರವಲ್ಲದೆ ಪೂರ್ಣವಾಗಿ ತನಿಖೆ ಮಾಡುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.

ವೈಯಕ್ತಿಕ ಕಂಪನಿಯ ಕುರಿತಾದ ಸಂಶೋಧನಾ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಅವರಿಗೆ ಸಾಧ್ಯವಾಗದಿವುದಕ್ಕೆ ಅದಾನಿ ಗ್ರೂಪ್ ಸಾಮಾನ್ಯ ಸಂಘಟಿತ ಸಂಸ್ಥೆಯಲ್ಲ. ಏಕೆಂದರೆ ಅದು ಪ್ರಧಾನಿ ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಮಯದಿಂದಲೂ ಅವರ ನಿಕಟ ಮಿತ್ರ ಗೌತಮ್ ಅದಾನಿ ಎಂದು ಜೈರಾಮ್ ರಮೇಶ್ ಹೇಳಿದರು.
ಮೋದಿ ಸರ್ಕಾರ ಈ ಬಗ್ಗೆ ಪ್ರಯತ್ನಿಸಬಹುದು ಮತ್ತು ಸೆನ್ಸಾರ್ಶಿಪ್ ಹೇರಬಹುದು. ಭಾರತೀಯ ವ್ಯವಹಾರಗಳು ಮತ್ತು ಹಣಕಾಸು ಮಾರುಕಟ್ಟೆಗಳ ಜಾಗತೀಕರಣದ ಯುಗದಲ್ಲಿ ಕಾರ್ಪೊರೇಟ್ ದುರಾಡಳಿತವನ್ನು ಹೇಳುವ ಹಿಂಡೆನ್ಬರ್ಗ್ ಮಾದರಿಯ ವರದಿಗಳನ್ನು ಸರಳವಾಗಿ ತಳ್ಳಿಹಾಕಬಹುದು ಮತ್ತು ದುರುದ್ದೇಶಪೂರಿತ ಎಂದು ತಳ್ಳಿಹಾಕಬಹುದೇ?" ಹೇಳಿಕೆ ತಿಳಿಸಿದೆ.

ಷೇರು ತಿರುಚುವಿಕೆ ಹಾಗೂ ಲೆಕ್ಕಪತ್ರ ವಂಚನೆ ಬಗ್ಗೆ ಅದಾನಿ ಸಮೂಹದ ಲೀಗಲ್ ಅಡ್ವೈಸರ್ ಜತಿನ್ ಜಲುಂಧ್ವಾಲಾ ಅವರು ಹಿಂಡನ್ಬರ್ಗ್ ವರದಿಯಿಂದ ಭಾರತೀಯ ಷೇರು ಮಾಡುಕಟ್ಟೆಯೂ ಏರಿಳಿತಕ್ಕೆ ಕಾರಣವಾಗುತ್ತಿದೆ. ಅದಾನಿ ಷೇರು ಇಳಿಕೆಯಿಂದ ಶಾರ್ಟ್ ಸೆಲ್ಲರ್ ಹಿಂಡನ್ಬರ್ಗ್ ಪ್ರಯೋಜನ ಪಡೆಯಲಿದೆ. ಈ ಬಗೆಯ ವರದಿ ನೀಡಿರುವ ಸಂಸ್ಥೆ ವಿರುದ್ಧ ಕಾನೂನು ಹೋರಾಟ ಮುಂದಾಗುವುದಾಗಿ ತಿಳಿಸಿದ್ದಾರೆ. ಆದರೆ ಹಿಂಡನ್ಬರ್ಗ್ ಸಂಸ್ಥೆ ತಾನು ತಮ್ಮ ವರದಿಗಳಿಗೆ ಬದ್ಧವಿರುವುದಾಗಿ ಎಲ್ಲಿ ಬೇಕಾದರೂ ಇದು ಸತ್ಯ ಎಂದು ನಿರೂಪಿಸುತ್ತೇವೆ ಎಂದು ತಿಳಿಸಿದೆ.
-
Karan Adani: ಆರ್ಥಿಕ ಬೆಳವಣಿಗೆಗೆ ದಕ್ಷ ಮೂಲಸೌಕರ್ಯ ಹಾಗೂ ಸಾರಿಗೆ ಅತ್ಯಗತ್ಯ- ಕರಣ್ ಅದಾನಿ ಪ್ರತಿಪಾದನೆ -
Gold: ದುಬೈಯಿಂದ ಭಾರತಕ್ಕೆ ಚಿನ್ನದ ಪೂರೈಕೆ ಪುನರಾರಂಭ; ಗ್ರಾಹಕರ ನಿರ್ಧಾರದಿಂದ ಬೆದರಿದ ವ್ಯಾಪಾರಿಗಳು -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ












Click it and Unblock the Notifications