Get Updates
Get notified of breaking news, exclusive insights, and must-see stories!

ರಾಜೀವ್ ಗಾಂಧಿ, ಮನಮೋಹನ್‌ ಸಿಂಗ್‌ ಹೊಗಳಿದ ಗೌತಮ್‌ ಅದಾನಿ

ಮುಂಬೈ, ಡಿಸೆಂಬರ್‌ 29: ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರು ತಮ್ಮ ವ್ಯಾಪಾರ ಸಾಮ್ರಾಜ್ಯದ ಬೆಳವಣಿಗೆಯನ್ನು ಯಾವುದೇ ಒಬ್ಬ ರಾಜಕೀಯ ನಾಯಕನ ಸಹಾಯದಿಂದ ಬೆಳೆಯಿತು ಎಂದು ಹೇಳಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಂಬಂಧದಿಂದ ತಮ್ಮ ಉದ್ಯಮ ಲಾಭ ಪಡೆದ ಆರೋಪವನ್ನು ಅವರು ತಳ್ಳಿಹಾಕಿದ್ದಾರೆ. ಮೂರು ದಶಕಗಳ ಹಿಂದೆ ಕಾಂಗ್ರೆಸ್‌ನ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅದಾನಿ ಗ್ರೂಪ್‌ನ ಪ್ರಯಾಣ ಪ್ರಾರಂಭವಾಯಿತು ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಮತ್ತು ನಾನು ಒಂದೇ ರಾಜ್ಯದವರು. ಹೀಗಾಗಿ ಅದು ನನ್ನನ್ನು ಇಂತಹ ಆಧಾರರಹಿತ ಆರೋಪಗಳಿಗೆ ಸುಲಭ ಗುರಿಯನ್ನಾಗಿ ಮಾಡುತ್ತದೆ. ಇಂತಹ ಹೇಳಿಕೆಗಳನ್ನು ನನ್ನ ವಿರುದ್ಧ ನೀಡುತ್ತಿರುವುದು ದುರದೃಷ್ಟಕರ ಎಂದು ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ಆರೋಪಗಳು ಇತ್ತೀಚಿನ ಬೆಳವಣಿಗೆಯಿಂದ ಹೆಚ್ಚಾಗುತ್ತಿವೆ. ನಮ್ಮ ಗುಂಪಿನ ಯಶಸ್ಸನ್ನು ಅಲ್ಪಾವಧಿಯ ಬೆಳವಣಿಗೆ ಮೂಲಕ ನೋಡಬೇಡಿ. ನನ್ನ ವೃತ್ತಿಪರ ಯಶಸ್ಸು ಯಾವುದೇ ವೈಯಕ್ತಿಕ ನಾಯಕರಿಂದಲ್ಲ. ಬದಲಾಗಿ ಮೂರು ದಶಕಗಳ ಸುದೀರ್ಘ ಅವಧಿಯಲ್ಲಿ ಹಲವಾರು ನಾಯಕರು ಮತ್ತು ಸರ್ಕಾರಗಳು ಪ್ರಾರಂಭಿಸಿದ ನೀತಿ ಮತ್ತು ಸಾಂಸ್ಥಿಕ ಸುಧಾರಣೆಗಳಿಂದಾಗಿ ಬೆಳವಣಿಗೆ ಕಂಡಿದೆ ಎಂದು ಅದಾನಿ ಹೇಳಿದರು.

ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಅವಧಿಯಲ್ಲಿ, ಅವರು ಮೊದಲ ಎಕ್ಸಿಮ್ (ರಫ್ತು-ಆಮದು) ನೀತಿಯನ್ನು ಉದಾರೀಕರಣಗೊಳಿಸಿದಾಗ ಇದು ಪ್ರಾರಂಭವಾಯಿತು ಎಂದು ತಿಳಿದರೆ ಅನೇಕರು ಆಶ್ಚರ್ಯಚಕಿತರಾಗುತ್ತಾರೆ. ಆದರೆ ರಾಜೀವ್ ಗಾಂಧಿಯವರಿಗೆ ಉದ್ಯಮಿಯಾಗಿ ನನ್ನ ಪ್ರಯಾಣ ಎಂದಿಗೂ ಬಾಧಿಸಲಿಲ್ಲ ಅವರು ಹೇಳಿದರು.

1991ರಲ್ಲಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಜೋಡಿಯು ವ್ಯಾಪಕವಾದ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದಾಗ ನನಗೆ ಸಿಕ್ಕ ಎರಡನೇ ದೊಡ್ಡ ಉತ್ತೇಜನ. ಇತರ ಅನೇಕ ಉದ್ಯಮಿಗಳಂತೆ ನಾನು ಕೂಡ ಆ ಸುಧಾರಣೆಗಳ ಫಲಾನುಭವಿಯಾಗಿದ್ದೇನೆ. 1995 ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಬಿಜೆಪಿಯ ಕೇಶುಭಾಯಿ ಪಟೇಲ್‌ರ ಚುನಾವಣೆಗೆ ಮತ್ತು ಕರಾವಳಿ ಅಭಿವೃದ್ಧಿಯತ್ತ ಗಮನಹರಿಸಿದ್ದರಿಂದ ನನ್ನ ವೃತ್ತಿಜೀವನದ ಮೂರನೇ ತಿರುವು ಮುಂದ್ರಾದಲ್ಲಿ ತಮ್ಮ ಮೊದಲ ಬಂದರನ್ನು ನಿರ್ಮಿಸಲು ಕಾರಣವಾಯಿತು ಎಂದು ಅವರು ಹೇಳಿದರು.

ಆರ್ಥಿಕ ಭೂದೃಶ್ಯವನ್ನು ಬದಲಿಸಲು ಕಾರಣ

ಆರ್ಥಿಕ ಭೂದೃಶ್ಯವನ್ನು ಬದಲಿಸಲು ಕಾರಣ

2001ರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಅವಧಿಯಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿದಾಗ ನಾಲ್ಕನೇ ತಿರುವು ಆರಂಭವಾಯಿತು. ಅವರ ನೀತಿಗಳು ಮತ್ತು ಅವುಗಳ ಅನುಷ್ಠಾನವು ರಾಜ್ಯದ ಆರ್ಥಿಕ ಭೂದೃಶ್ಯವನ್ನು ಬದಲಿಸಲು ಮಾತ್ರವಲ್ಲದೆ ಕೈಗಾರಿಕೆಗಳು ಮತ್ತು ಉದ್ಯೋಗಗಳನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿತು ಎಂದು ಅದಾನಿ ಹೇಳಿದರು.

ಭಾರತ ಈಗ ತನ್ನನ್ನು ತಾನು ಪ್ರತಿಪಾದಿಸುತ್ತಿದೆ

ಭಾರತ ಈಗ ತನ್ನನ್ನು ತಾನು ಪ್ರತಿಪಾದಿಸುತ್ತಿದೆ

ಇಂದು ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ನಾವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದೇ ರೀತಿಯ ಪುನರುತ್ಥಾನವನ್ನು ನೋಡುತ್ತಿದ್ದೇವೆ. ಅಲ್ಲಿ ಹೊಸ ಭಾರತವು ಈಗ ತನ್ನನ್ನು ತಾನು ಪ್ರತಿಪಾದಿಸುತ್ತಿದೆ. ನನಗೆ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರು ಸ್ಫೂರ್ತಿ ಎಂದು ಹೇಳಿದರು.

ಧೀರೂಭಾಯಿ ಅಂಬಾನಿ ಸ್ಫೂರ್ತಿ

ಧೀರೂಭಾಯಿ ಅಂಬಾನಿ ಸ್ಫೂರ್ತಿ

ಧೀರೂಭಾಯಿ ಅಂಬಾನಿ ಭಾರತದಲ್ಲಿ ಲಕ್ಷಾಂತರ ಉದಯೋನ್ಮುಖ ಉದ್ಯಮಿಗಳಿಗೆ ಸ್ಫೂರ್ತಿಯ ಮೂಲವಾಗಿದ್ದಾರೆ. ಯಾವುದೇ ಬೆಂಬಲ ಅಥವಾ ಸಂಪನ್ಮೂಲಗಳಿಲ್ಲದ ಮತ್ತು ಎಲ್ಲಾ ವಿರೋಧಾಭಾಸಗಳ ವಿರುದ್ಧ ವಿನಮ್ರ ವ್ಯಕ್ತಿ ವಿಶ್ವ ದರ್ಜೆಯ ವ್ಯಾಪಾರ ಗುಂಪನ್ನು ಸ್ಥಾಪಿಸುವುದು ಮಾತ್ರವಲ್ಲದೆ ಪರಂಪರೆಯನ್ನು ಹೇಗೆ ಬಿಡಬಹುದು ಎಂಬುದನ್ನು ಅವರು ತೋರಿಸಿದ್ದಾರೆ. ಮೊದಲ ತಲೆಮಾರಿನ ಉದ್ಯಮಿಯಾಗಿರುವುದರಿಂದ ಮತ್ತು ವಿನಮ್ರ ಆರಂಭವನ್ನು ಹೊಂದಿರುವ ನಾನು ಅವರಿಂದ ಆಳವಾಗಿ ಸ್ಫೂರ್ತಿ ಪಡೆದಿದ್ದೇನೆ ಎಂದು ಅವರು ಹೇಳಿದರು.

ನಾನು ಹಸ್ತಕ್ಷೇಪ ಮಾಡುವುದಿಲ್ಲ

ನಾನು ಹಸ್ತಕ್ಷೇಪ ಮಾಡುವುದಿಲ್ಲ

ನಮ್ಮ ಎಲ್ಲಾ ವ್ಯವಹಾರಗಳನ್ನು ವೃತ್ತಿಪರ, ಸಮರ್ಥ ಸಿಇಒಗಳು ನಡೆಸುತ್ತಾರೆ. ನಾನು ಅವರ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತಂತ್ರಗಾರಿಕೆ, ಬಂಡವಾಳ ಹಂಚಿಕೆ ಮತ್ತು ಅವುಗಳ ಪರಿಶೀಲನೆಗೆ ನನ್ನ ಪಾತ್ರ ಸೀಮಿತವಾಗಿದೆ. ಈ ಕಾರಣಕ್ಕಾಗಿ ನಾನು ಅಂತಹ ದೊಡ್ಡ ಮತ್ತು ವೈವಿಧ್ಯಮಯ ಸಂಸ್ಥೆಯನ್ನು ನಿರ್ವಹಿಸಲು ಮಾತ್ರವಲ್ಲದೆ ಹಲವಾರು ಹೊಸ ವ್ಯವಹಾರಗಳಿಗೆ ಗಮನ ಕೊಡಲು ಮತ್ತು ಸ್ವಾಧೀನಪಡಿಸಿಕೊಳ್ಳಲು ಹೊಸ ಅವಕಾಶಗಳನ್ನು ಹುಡುಕಲು ಸಮಯವನ್ನು ಕೊಡುತ್ತಾ ಬಂದಿದ್ದೇನೆ ಎಂದು ಅದಾನಿ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+