ನಿಸ್ವಾರ್ಥಿ ಗೋಪಾಲಕ ಭರಮಣ್ಣ ಗುರಿಕಾರ
ಇವರು ಅಣ್ಣ ಮತ್ತು ಇಬ್ಬರು ತಮ್ಮಂದಿರೊಂದಿಗೆ ಹಸುಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ ಅವಶ್ಯವಿದ್ದವರ ಹೊಲಕ್ಕೆ ಕರೆದುಕೊಂಡು ಹೋಗಿ ಅದೇ ಊರಿನಲ್ಲಿ ಬೀಡು ಬಿಡುತ್ತಾರೆ. ಅಲ್ಲಿನ ರೈತರು ತಮ್ಮ ಹೊಲದಲ್ಲಿ ಈ ಹಸುಗಳನ್ನು ಬಳಸಿಕೊಂಡು ಉಳುಮೆ ಮಾಡುತ್ತಾರೆ. ಹಸುಗಳ ಸಗಣಿ ಇಲ್ಲಿ ಗೊಬ್ಬರವಾಗಿ ಉಪಯೋಗಿಸಲ್ಪಡುತ್ತದೆ. ಇದರಿಂದ ರೈತರು ಹೆಚ್ಚಿಗೆ ಹಣ ಕೊಟ್ಟು ರಾಸಯನಿಕ ಗೊಬ್ಬರ ಖರೀದಿಸುವುದು ತಪ್ಪುತ್ತದೆ. ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಭರಮಣ್ಣನವರ ಈ ಕೆಲಸಕ್ಕೆ ಆ ಕುಟುಂಬದವರು ತಕ್ಕಮಟ್ಟಿಗಿನ ಹಣ ನೀಡುತ್ತಾರೆ. ಇದರಿಂದ ಅವರ ದೈನಂದಿನ ಜಿವನ ಸಾಗುತ್ತದೆ.
ಆದರೆ ಅವರ ಶ್ರಮ ಮತ್ತು ಸಮಯಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಊರಿನಲ್ಲಿ ನೆಲೆಸಿರುವ ಅವರ ಸಂಸಾರಗಳು ಬಡತನದಲ್ಲೇ ಉಳಿದಿವೆ. ಹಸುಗಳ ಆರೋಗ್ಯ ಕಾಪಾಡಲೂ ಸಹ ಅವರ ಈ ಸಂಪಾದನೆಯೆ ಮೂಲ. 440 ಹಸುಗಳಲ್ಲಿ ಯಾವುದೇ ಒಂದು ಹಸುವಿಗೆ ಆರೊಗ್ಯ ತಪ್ಪಿದರೂ ಅವರು ನಿರ್ಲಕ್ಷಿಸುವಂತಿಲ್ಲ. ವೈದ್ಯರು ಸರಕಾರದ ವತಿಯಿಂದ ಬಂದರೂ ಸಹ ಅವರಿಗೆ ಪ್ರತಿ ಹಸುವಿನ ಲಸಿಕೆಗಾಗಿ ಕನಿಷ್ಠ ಮೊತ್ತ ಕೊಡಲೇಬೇಕಾಗುತ್ತದೆ.
ಭರಮಣ್ಣನವರ ಕುಟುಂಬ ಹಾಲನ್ನು ಮಾರುವುದಿಲ್ಲ. ಬದಲಾಗಿ ಅದನ್ನು ಯಾರ ಹೊಲದಲ್ಲಿ ಬೀಡು ಬಿಟ್ಟಿರುತ್ತಾರೋ ಅಲ್ಲಿನ ಜನಗಳಿಗೆ ಉಚಿತವಾಗಿ ನೀಡುತ್ತಾರೆ. ಇದುವರೆಗೂ ಇವರು ಗದಗ ಜಿಲ್ಲೆಯ ರೋಣ ತಲ್ಲುಕಿನ ಹಳ್ಳಿಗಳಲ್ಲಿ, ಬಳ್ಳಾರಿ ಜಿಲ್ಲೆಯ ಹಳ್ಳಿಗಳಲ್ಲಿ, ಕೊಪ್ಪಳ ಆಲಮಟ್ಟಿದ ಹತ್ತ ಜಲಾಶಯದ ಹತ್ತಿರದ ಹಳ್ಳಿಗಳಲ್ಲಿ ತಮ್ಮ ಕೈಂಕರ್ಯ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ 400ಕ್ಕೂ ಅಧಿಕ ಹಸುಗಳನ್ನು ಸಾಕಿಕೊಂಡು ಈ ರೀತಿಯ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿರುವ ಏಕೈಕ ಕುಟುಂಬ ಭರಮಣ್ಣ ಗುರಿಕಾರರದು.
ಭರಮಣ್ಣ ಗುರಿಕಾರನವರನ್ನು ಆಗಸ್ಟ್ 1ರಂದು ಸಮಾಜ ಸೇವಾ ದಿನಾಚರಣೆಯ ದಿನ ಸಮಾಜ ಸೇವಕರ ಸಮಿತಿ ಬೆಂಗಳೂರಿನಲ್ಲಿ ಸನ್ಮಾನಿಸುತ್ತಿದೆ. ನೀವೂ ಬನ್ನಿರಿ, ಸಾಧಕರನ್ನು ಗೌರವಿಸಿರಿ.
ಇವರೇ
ನಿಜವಾದ
ಸಮಾಜ
ಸೇವಕರು,
ಬನ್ನಿ
ಗೌರವಿಸೋಣ
ಹಸಿರು
ಬೆಳೆದು
ಉಸಿರು
ನೀಡಿರುವ
ಡಾ.
ಲಲಿತಮ್ಮ