ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion
ಇರಾನ್ ಸೇನೆಯನ್ನ ಈಗ ಯಾರೂ ತಡೆದು ನಿಲ್ಲಿಸಲು ಆಗುತ್ತಿಲ್ಲ, ಅದ್ರಲ್ಲೂ ತಮ್ಮ ದೇಶದಲ್ಲಿನ ದಾಳಿಗೆ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಇರಾನ್ ದೊಡ್ಡ ಮಟ್ಟದ ದಾಳಿ ಸಂಘಟಿಸಿದೆ. ಇದರ ಪರಿಣಾಮ ಅಮೆರಿಕ ಮೇಲೆ ಆಗುತ್ತಿಲ್ಲ, ಬದಲಾಗಿ ಅರಬ್ ಹಾಗೂ ಇಸ್ರೇಲ್ ದೇಶಗಳು ಈಗ ಇರಾನ್ ದಾಳಿ ಹಿನ್ನೆಲೆ ನಲುಗಿ ಹೋಗುವಂತೆ ಆಗಿದೆ. ಹಾಗೇ ಇಸ್ರೇಲ್ ಕೂಡ ಇರಾನ್ ಮೇಲೆ ಭಾರಿ ದೊಡ್ಡ ಪ್ರಮಾಣದ ದಾಳಿ ನಡೆಸುತ್ತಿದೆ. ಹೀಗಿದ್ದಾಗ ಮಧ್ಯಪ್ರಾಚ್ಯದ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿ ಆತಂಕ ಹೆಚ್ಚಾಗಿದ್ದು, ಅರಬ್ ದೇಶಗಳ ಆರ್ಥಿಕತೆ ಕುಸಿದು ಬೀಳುತ್ತಿದೆ. ಇಂತಹ ಸಮಯಕ್ಕೆ ಸರಿಯಾಗಿ ಇರಾನ್ ಮತ್ತೊಂದು ಎಚ್ಚರಿಕೆ ನೀಡಿದ್ದು, ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಮಿಲಿಟರಿ ದಾಳಿ ನಡೆಸಲು ಸಜ್ಜಾಗಿದೆ.
ಸೌದಿ ಅರೇಬಿಯಾ, ಕುವೈತ್, ಕತಾರ್, ಒಮಾನ್ ಸೇರಿದಂತೆ ತನ್ನ ಅಕ್ಕಪಕ್ಕದ ದೇಶಗಳ ಮೇಲೆ ಇದೀಗ ಇರಾನ್ ಘೋರ ದಾಳಿ ನಡೆಸಿದೆ. ಈ ಮೂಲಕ ಅರಬ್ ದೇಶಗಳು ತೈಲ ಸರಬರಾಜು ಮಾಡದಿರುವ ರೀತಿ ಇರಾನ್ ಸೇನೆ ಕಟ್ಟಿ ಹಾಕಿದೆ. ಇದು ಆರ್ಥಿಕವಾಗಿ ಅರಬ್ ದೇಶಗಳನ್ನ ಕಟ್ಟಿಹಾಕಿದೆ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಮುಂದೆ ಅದು ದೊಡ್ಡ ವಿನಾಶ ಸೃಷ್ಟಿಸುವ ಸಾಧ್ಯತೆಯೂ ಈಗ ದಟ್ಟವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಇರಾನ್ ಈಗ ನೇರವಾಗಿ ಅರಬ್ ದೇಶಗಳ ಬ್ಯಾಕಿಂಗ್ ಸೇವೆ ನಾಶ ಮಾಡಲು ಮುಂದಾಗಿದೆ ಈಗಾಗಲೇ ಅರಬ್ ದೇಶಗಳ ಮೂಲಸೌಕರ್ಯ, ಅದರಲ್ಲೂ ಪ್ರಮುಖವಾಗಿ ನೀರನ್ನು ಫಿಲ್ಟರ್ ಮಾಡುವ ಘಟಕಗಳ ಉಡಾಯಿಸಿದೆ ಇರಾನ್. ಇದರ ಜೊತೆ ಈಗ ನೇರವಾಗಿ ಬ್ಯಾಂಕ್ ಕಟ್ಟಡಗಳು ಉಡಾಯಿಸಲು ಸಕಲ ಸಿದ್ಧತೆ ನಡೆಸಿದೆ.

ಇರಾನ್ ಸೇನೆಯಿಂದ ಮತ್ತೊಂದು ವಿನಾಶ?
ತೈಲ ಶುದ್ಧೀಕರಣ ಘಟಕಗಳು ಸೇರಿ ಈಗಾಗಲೇ ಅರಬ್ ದೇಶಗಳಲ್ಲಿ ಭಾರಿ ದೊಡ್ಡ ವಿನಾಶವನ್ನು ಸೃಷ್ಟಿ ಮಾಡಿರುವ ಇರಾನ್ ಮಿಲಿಟರಿ, ಇದೀಗ ನೇರವಾಗಿ ಬ್ಯಾಂಕ್ ಕಟ್ಟಡಗಳ ಮೇಲೆ ಕ್ಷಿಪಣಿಗಳ ಮಳೆಯನ್ನೇ ಸುರಿಸಲು ಸಜ್ಜಾಗಿದೆ. ಹಾಗೇ, ಅಮೆರಿಕ ಮೂಲದ ದೊಡ್ಡ ದೊಡ್ಡ ಕಂಪನಿಗಳ ಕಟ್ಟಡ ಕೂಡ ಇರಾನ್ ಟಾರ್ಗೆಟ್ ಆಗಿದ್ದು, ಯಾವುದೇ ಕ್ಷಣ ಈ ಯುದ್ಧ ಮತ್ತೊಂದು ಮಹಾಯುದ್ಧದ ರೂಪ ಪಡೆದುಕೊಳ್ಳುವ ಅಪಾಯ ಕೂಡ ಎದುರಾಗುತ್ತಿದೆ. ಅಕಸ್ಮಾತ್ ಈಗಿನ ಪರಿಸ್ಥಿತಿಯಲ್ಲಿ 3ನೇ ಮಹಾಯುದ್ಧ ಶುರುವಾದರೆ ಅಲ್ಲಿಂದಲೇ ಎಲ್ಲಾ ವಿನಾಶಕ್ಕೆ ತಕ್ಷಣ ಮುನ್ನುಡಿ ಬರೆದಂತೆ ಆಗಲಿದೆ. ಇದೇ ಕಾರಣಕ್ಕೆ ಅಮೆರಿಕ & ಮಿತ್ರ ದೇಶಗಳು ಇರಾನ್ ನಡೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿವೆ.
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ












Click it and Unblock the Notifications