ನವರಾತ್ರಿ: ದೇವಿ ಅಲಂಕಾರಗಳಲ್ಲಿ ಮಿಂದೆದ್ದ ಉಡುಪಿಯ ಕೃಷ್ಣ
ಉಡುಪಿ, ಅಕ್ಟೋಬರ್ 4: ಉಡುಪಿಯ ಶ್ರೀ ಕೃಷ್ಣನನ್ನು ಉತ್ಸವಪ್ರಿಯ ಎಂದು ಕರೆಯುತ್ತಾರೆ. ಆದರೆ ಕೃಷ್ಣ ಅಲಂಕಾರ ಪ್ರಿಯನೂ ಹೌದು. ಆದ್ದರಿಂದ ಈ ನವರಾತ್ರಿ ಸಂದರ್ಭ ಪರ್ಯಾಯ ಶ್ರೀಗಳು ಒಂಬತ್ತೂ ದಿನ ಕೃಷ್ಣನಿಗೆ ಬಗೆಬಗೆಯ ಸ್ತ್ರೀ ಅಲಂಕಾರ ಮಾಡುವ ಸಂಕಲ್ಪ ಮಾಡಿದ್ದಾರೆ.
ಸಾಮಾನ್ಯವಾಗಿ ಕೃಷ್ಣ ಎಂದ ತಕ್ಷಣ ಎಲ್ಲರ ಕಣ್ಮುಂದೆ ಸುಳಿಯುವುದು ಕಡೆಗೋಲು ಹಿಡಿದು ನಿಂತಿರುವ ಕೃಷ್ಣನದ್ದು. ಆದರೆ ಶ್ರೀ ಕೃಷ್ಣ ಈಗ ನಿತ್ಯ ಒಂದೊಂದು ಅವತಾರ ಎತ್ತುತ್ತಿದ್ದಾನೆ. ಪರ್ಯಾಯ ಶ್ರೀಗಳು ಕೃಷ್ಣನಿಗೆ ನಿತ್ಯ ಒಂದೊಂದು ಅಲಂಕಾರ ಮಾಡಿ ಪೂಜಿಸುತ್ತಿದ್ದಾರೆ. ಪರ್ಯಾಯ ಮಠಾಧೀಶರು ಬದಲಾದಂತೆಯೇ ಕೃಷ್ಣನ ಅಲಂಕಾರಗಳೂ ಬದಲಾಗುತ್ತಾ ಸಾಗಿವೆ.
ಈ ಬಾರಿ ಕೃಷ್ಣ ಪೂಜಾ ಕೈಂಕರ್ಯ ಮಾಡುತ್ತಿರುವವರು ಪರ್ಯಾಯ ಪಲಿಮಾರು ಶ್ರೀಗಳು. ನವರಾತ್ರಿ ಶುರುವಾಗಿ ಇವತ್ತಿಗೆ ಐದನೇ ದಿನ. ಅದರಂತೆ ಪ್ರತಿನಿತ್ಯ ಕೃಷ್ಣನಿಗೆ ದೇವಿ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಒಂಬತ್ತು ದಿನ ಒಂಬತ್ತು ದೇವಿಗಳ ಅಲಂಕಾರ ಮಾಡಿ ಕೃಷ್ಣನನ್ನು ಖುಷಿಪಡಿಸಲಾಗುತ್ತಿದೆ. ತೊಟ್ಟಿಲಲ್ಲಿ ತೂಗುವ ಯಶೋಧೆ, ಅಂತಃಪುರದಲ್ಲಿರುವ ರುಕ್ಮಿಣಿ, ಮಹಿಷಾಸುರ ಮರ್ದಿನಿ, ವೀಣಾಪಾಣಿ ಶಾರದೆ, ಲಕ್ಷ್ಮೀ ರೂಪ ಸಹಿತ ಒಂಬತ್ತು ದೇವಿಯರ ಅಲಂಕಾರದಲ್ಲಿ ಕೃಷ್ಣ ರಾರಾಜಿಸುತ್ತಿದ್ದಾನೆ. ಭಕ್ತರು ಇದನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಅಗಲಿದ ಶೀರೂರು ಶ್ರೀಗಳು ಕೃಷ್ಣನಿಗೆ ಮುನ್ನೂರಕ್ಕೂ ಹೆಚ್ಚು ಅಲಂಕಾರಗಳನ್ನು ಮಾಡಿದ್ದರು. ಈ ಬಾರಿಯ ಪರ್ಯಾಯ ಮಠಾಧೀಶರಾದ ಪಲಿಮಾರು ಶ್ರೀಗಳೂ ಕೃಷ್ಣನಿಗೆ ವೈವಿಧ್ಯಮಯ ಅಲಂಕಾರಗಳ ಮೂಲಕ ಕೃಷ್ಣನನ್ನು ಸಂತುಷ್ಟಗೊಳಿಸುತ್ತಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications