ಉತ್ತರಾಖಂಡ ಚುನಾವಣೆ: ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಉಚ್ಛಾಟಿತ ನಾಯಕ
ಡೆಹ್ರಾಡೂನ್, ಜನವರಿ 21: ಉತ್ತರಾಖಂಡ ವಿಧಾನಸಭಾ ಕ್ಷೇತ್ರಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು, ಆಡಳಿತರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಚುನಾವಣೆ ಎದುರಿಸಲು ಸನ್ನದ್ಧವಾಗುತ್ತಿವೆ. ಅದರಲ್ಲೂ ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಗಂಭೀರವಾಗಿ ತೆಗೆದುಕೊಂಡಿದೆ.
ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮುನ್ನ ಉಚ್ಛಾಟಿತ ಬಿಜೆಪಿ ನಾಯಕ ಮತ್ತು ರಾಜ್ಯ ಸಂಪುಟದ ಮಾಜಿ ಸಚಿವ ಹರಕ್ ಸಿಂಗ್ ರಾವತ್ ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಹರಕ್ ಸಿಂಗ್ ರಾವತ್ರನ್ನು ರಾಜ್ಯ ಸಂಪುಟದಿಂದ ವಜಾಗೊಳಿಸಲಾಗಿದೆ ಮತ್ತು ಆರು ವರ್ಷಗಳ ಕಾಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಗಿದೆ.
ಇಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಹರಕ್ ಸಿಂಗ್ ರಾವತ್, "ಮಾರ್ಚ್ 10ರಂದು ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಗೆದ್ದಾಗ ಅದು ನನ್ನ ಕ್ಷಮೆಯಾಚನೆಯಾಗಿದೆ. ಬಿಜೆಪಿ ನನ್ನನ್ನು ಯೂಸ್ ಅಂಡ್ ಥ್ರೋ ಎಂದು ಭಾವಿಸಿದೆ, ನಾನು ತುಂಬಾ ಅಸಮಾಧಾನಗೊಂಡಿದ್ದೇನೆ ಎಂದ ಅವರು, ನಾನು ಭರವಸೆ ನೀಡಿದಂತೆ ಕೊನೆಯ ಕ್ಷಣದವರೆಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗಿನ ಸ್ನೇಹವನ್ನು ಮುರಿದುಕೊಳ್ಳುವುದಿಲ್ಲ ಎಂದರು.
ಹರಕ್ ಸಿಂಗ್ ರಾವತ್ ಅವರು ಬುಧವಾರ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದರು. ತಮ್ಮ ಪ್ರಭಾವವನ್ನು ಬಳಸಿಕೊಂಡು ಕನಿಷ್ಠ ಹತ್ತು ಸ್ಥಾನಗಳನ್ನು ತಂದುಕೊಡುವುದಾಗಿ ಕಾಂಗ್ರೆಸ್ ನಾಯಕತ್ವಕ್ಕೆ ಭರವಸೆ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಆದಾಗ್ಯೂ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಒಂದು ವಿಭಾಗವು ಗುರುವಾರ ಅವರ ಮರು ಸೇರ್ಪಡೆಯನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಹರೀಶ್
ರಾವತ್
ಸರ್ಕಾರದ
ವಿರುದ್ಧ
ಬಂಡಾಯವೆದ್ದರು
2016ರಲ್ಲಿ
ಹರೀಶ್
ರಾವತ್
ನೇತೃತ್ವದ
ಕಾಂಗ್ರೆಸ್
ಸರ್ಕಾರವನ್ನು
ಅಲ್ಪಮತಕ್ಕೆ
ಇಳಿಸುವಲ್ಲಿ
ಹರಕ್
ಸಿಂಗ್
ರಾವತ್
ಪ್ರಮುಖ
ಪಾತ್ರ
ವಹಿಸಿದ್ದರು.
2016ರಲ್ಲಿ
ಕಾಂಗ್ರೆಸ್
ಸರ್ಕಾರದ
ವಿರುದ್ಧ
ಬಂಡಾಯವೆದ್ದಿದ್ದ
ರಾವತ್
ಬಿಜೆಪಿ
ಸೇರಿದ್ದರು.
ಪುಷ್ಕರ್
ಸಿಂಗ್
ಧಾಮಿ
ರಾವತ್ನನ್ನು
ತೆಗೆದುಹಾಕಿದರು
ಈ
ಹಿಂದೆ
ಮುಖ್ಯಮಂತ್ರಿ
ಪುಷ್ಕರ್
ಸಿಂಗ್
ಧಾಮಿ
ಕೂಡ
ರಾವತ್
ಅವರನ್ನು
ಸಂಪುಟದಿಂದ
ವಜಾಗೊಳಿಸುವ
ಕುರಿತು
ರಾಜ್ಯಪಾಲರಿಗೆ
ಪತ್ರ
ಬರೆದಿದ್ದಾರೆ
ಎಂದು
ಪಿಟಿಐ
ವರದಿ
ಮಾಡಿದೆ.
ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ಸಂಬಂಧಿಕರಿಗೆ ಟಿಕೆಟ್ ನೀಡುವಂತೆ ಪಕ್ಷದ ನಾಯಕತ್ವದ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಇತ್ತೀಚೆಗೆ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು, ಈ ಆರೋಪವನ್ನು ಹರಕ್ ಸಿಂಗ್ ರಾವತ್ ನಿರಾಕರಿಸಿದ್ದಾರೆ.
ಫೆ.14ರಂದು
ಮತದಾನ
ಉತ್ತರಾಖಂಡದಲ್ಲಿ
ಜನವರಿ
21ರಂದು
ಚುನಾವಣಾ
ಅಧಿಸೂಚನೆ
ಹೊರಬೀಳಲಿದ್ದು,
ನಾಮಪತ್ರ
ಸಲ್ಲಿಸಲು
ಜನವರಿ
21ರಿಂದ
ಜ.28ರವರೆಗೆ
ಅವಕಾಶವಿರುತ್ತದೆ.
ಜನವರಿ
29ರಂದು
ನಾಮಪತ್ರ
ಪರಿಶೀಲನೆ
ನಡೆಯಲಿದ್ದು,
ನಾಮಪತ್ರ
ಹಿಂಪಡೆಯಲು
ಜನವರಿ
31
ಕೊನೆಯ
ದಿನಾಂಕವಾಗಿದೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.