ಡರ್ಟಿ ಸಚಿವರು ಶಿಕ್ಷೆಯಿಂದ ತಾತ್ಕಾಲಿಕ ಎಸ್ಕೇಪ್
ಜೊತೆಗೆ ಮೂವರು ಸಚಿವರ ವಿರುದ್ಧ ವಿರೋಧ ಪಕ್ಷಗಳೇ ಬೇಕಾದರೆ ಕ್ರಿಮಿನಲ್ ಮೊಕದ್ದಮೆ ಹೂಡಲಿ ಎಂದು ಬೋಪಯ್ಯ ಅವರು ಸವಾಲೆಸೆದಿರುವುದು ವಿಪಕ್ಷಗಳನ್ನು ಕೆರಳಿಸಿದೆ. ಈ ಮಧ್ಯೆ ವಕೀಲ ಧರ್ಮಪಾಲ ಗೌಡ ಅವರು ಪ್ರಕರಣದ ಸಂಬಂಧ ಖಾಸಗಿ ದೂರು ಸಲ್ಲಿಸಿದ್ದು, ವಿಧಾನಸೌಧ ಪೊಲೀಸರಿಗೆ ಫೆ. 27ರೊಳಗಾಗಿ ತನಿಖೆ ನಡೆಸಿ, ವರದಿ ನೀಡುವಂತೆ ಕೋರ್ಟ್ ಆದೇಶಿಸಿದೆ.[ಪೂರ್ಣ ವಿವರ ಓದಿ...]
ಕಳಂಕಿತರಾಗಿರುವ ಲಕ್ಷ್ಮಣ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಜೆ ಪಾಲೇಮಾರ್ ಅವರು ಸಭಾಪತಿ ಬೋಪಯ್ಯ ನೀಡಿರುವ ಷೋಕಾಸ್ ನೋಟಿಸ್ ಗೆ ಉತ್ತರಿಸಲು ಕಾಲಾವಕಾಶ ಕೇಳಿದ್ದಾರೆ. ಅದಕ್ಕೆ ಬೋಪಯ್ಯ ಕೂಡಾ ಒಪ್ಪಿದ್ದಾರೆ. ಆದರೆ ಸಚಿವರನ್ನು ವಜಾ ಮಾಡುವ ಕಾಂಗ್ರೆಸ್ ಬೇಡಿಕೆಯನ್ನು ತಿರಸ್ಕರಿಸಲಾಗಿದೆ.
ಮೊಬೈಲ್ ಎಲ್ಲಿ?: ಕಳಂಕಿತ ಸಚಿವರ ವಿವಾದಿತ ಮೊಬೈಲ್ಗಳನ್ನು ಈವರೆಗೂ ವಶಪಡಿಸಿಕೊಂಡಿಲ್ಲ. ಸದನ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಆಡಳಿತ ಪಕ್ಷದವರೇ ಏಕೆ ವಹಿಸಿಕೊಂಡಿದ್ದಾರೆ? ಮೊಬೈಲ್ನಲ್ಲೇ ಇಷ್ಟು ರಂಪ ಮಾಡಿದ ಶಾಸಕರಿಗೆ ಐಪ್ಯಾಡ್ ನೀಡಿದರೆ ಏನಾಗಬಹುದು? ಎಂಬ ಆತಂಕವನ್ನು ವಿಪಕ್ಷಗಳು ವ್ಯಕ್ತಪಡಿಸಿದೆ.
ಇದೀಗ ಬಂದ ಸುದ್ದಿಯಂತೆ...ಸದನ ಸಮಿತಿಗೆ ತಮ್ಮ ಪಕ್ಷದ ಸದಸ್ಯರ ಹೆಸರನ್ನು ಸೂಚಿಸದಿರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ನಿರ್ಧರಿಸಿದೆ.
ಡಿಸೆಂಬರ್ 2011ರಲ್ಲಿ 75 ವಿಧಾನಪರಿಷತ್ ಸದಸ್ಯರಿಗೆ ಐಪ್ಯಾಡ್ಗಳನ್ನು ನೀಡಲಾಗಿದ್ದು, ವಿಧಾನಸಭಾ ಸದಸ್ಯರಿಗೂ ನೀಡಬೇಕೆಂದು ಕಾರ್ಯದರ್ಶಿಗಳು ಶಿಫಾರಸು ಮಾಡಿದ್ದಾರೆ. ಈ ನಡುವೆ ಅಶ್ಲೀಲ ಚಿತ್ರ ವೀಕ್ಷಕ ಸಚಿವ ಲಕ್ಷ್ಮಣ ಸವದಿ ಅವರ ಹುಟ್ಟುಹಬ್ಬದ ಸಮಾರಂಭಕ್ಕೆ ತಯಾರಿ ಜೋರಾಗಿ ನಡೆದಿದೆ.