ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾ. ಹೆಗ್ಡೆ ತಾನು ಕಳ್ಳ, ಪರರನ್ನು ನಂಬ: ಕುಮಾರಸ್ವಾಮಿ ಸಿಡಿಮಿಡಿ
ಲೋಕಾಯುಕ್ತ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ದೇವಲೋಕದಿಂದ ಬಂದವರೇನಲ್ಲ. ತಮ್ಮ ಅಧಿಕಾರವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯ ಕಚೇರಿಯನ್ನೇ ಶುದ್ಧ ಮಾಡಲು ಸಾಧ್ಯವಾಗದ ಹೆಗ್ಡೆ ಅವರು ಸಮಾಜವನ್ನು ತಿದ್ದುತ್ತಾರೆಯೇ ಎಂದು ಪ್ರಶ್ನಿಸಿದರು.
ಬಳ್ಳಾರಿ ಉಪಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣೆಯೇ ಬೇಕಾಗಿಲ್ಲ. ಸಮಯ ಹಾಗೂ ಹಣ ಎರಡೂ ವ್ಯರ್ಥ. ಹಾಗಾಗಿ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಲಿಲ್ಲ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಕೂಡ ಅವಶ್ಯಕವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಮುಶೀರ್ ಅಹಮದ್ ಅವರ ನಿವಾಸಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರ ಜತೆಗೆ ಸಂಸದ ಚಲುವರಾಯಸ್ವಾಮಿ, ಶಾಸಕರಾದ ಸಾ.ರಾ.ಮಹೇಶ್, ಚಿಕ್ಕಮಾದು, ಮುಖಂಡರಾದ ಮೆಡಿಕಲ್ ರಾಜಣ್ಣ ಇತರರು ಇದ್ದರು.
ಸಂತೋಷ್ ಹೆಗ್ಡೆ ನ್ಯಾ ಸುಧೀಂದ್ರರಾವ್ ರಾಜೀನಾಮೆ ಲೋಕಾಯುಕ್ತ ವಿವಾದ ಹೈಕೋರ್ಟ್ ಬೆಂಗಳೂರು ಜಿಲ್ಲಾಸುದ್ದಿ hd kumaraswamy justice sudhindrarao satosh hegde district news lokayukta fraud high court corruption resignation ಅಕ್ರಮ ಗಣಿಗಾರಿಕೆ
English summary
The so-called upright former Lokayukta Justice Satosh Hegde is not clean handed declares former CM HD kumaraswamy.
Story first published: Tuesday, November 15, 2011, 10:03 [IST]